ಭಾರ್ತಿಹರಿ ಗುಹೆಯೊಳಗಿರುವ ಭಾರ್ತಿಹರಿ ದೇವಸ್ಥಾನವು ಉಜ್ಜಯಿನಿಯಲ್ಲಿನ ಜನಪ್ರಿಯ ಶಿಪ್ರಾ ನದಿಯ ಹತ್ತಿರದಲ್ಲಿದೆ. ಇದು ಗಡ್ಕಲಿಕ ದೇವಸ್ಥಾನಕ್ಕೆ ಸಮೀಪದಲ್ಲಿದೆ. ನದಿಯ ಸ್ಫಟಿಕ ಸ್ಪಷ್ಟವಾದ ನೀರು ಈ ಸ್ಥಳಕ್ಕೆ ಆಕರ್ಷಣೆಯನ್ನು ನೀಡುತ್ತದೆ. ಈ ದೇವಸ್ಥಾನವು ರಾಜ ಭಾರ್ತಿಹರಿಗೆ ಸೇರಿದ್ದು, ಭಾರ್ತಿಹರಿ ವಿಕ್ರಮಾದಿತ್ಯನ ಮಲ ಸಹೋದರ ಎಂದು ಹೇಳಲಾಗುತ್ತದೆ. ಆತ ಓರ್ವ ರಾಜ ಮಾತ್ರವಲ್ಲದೇ ವಿದ್ವಾಂಸ ಹಾಗೂ ಮಹಾನ್ ಕವಿ ಕೂಡಾ.
ಋಷಿಯ ಕಲ್ಲಿನ ವಿಗ್ರಹ
PC: Bernard Gagnon
ಈ ಗುಹೆಗಳು ಹನ್ನೊಂದನೇ ಶತಮಾನಕ್ಕೆ ಸಂಬಂಧಿಸಿದ್ದು ಎನ್ನಲಾಗುತ್ತದೆ. ಬೆಳಗ್ಗೆ 9ಗಂಟೆಗಿಂತ ಮೊದಲು ಹಾಗೂ ಸಂಜೆ 5 ಗಂಟೆಯ ನಂತರ ಯಾವುದೇ ಪ್ರವಾಸಿಗರಿಗೆ ಈ ಗುಹೆಯೊಳಗೆ ಪ್ರವೇಶಕ್ಕೆ ಅನುಮತಿ ನೀಡಲಾಗುವುದಿಲ್ಲ. ಗುಹೆಯೊಳಗೆ ಋಷಿ ಭಾರ್ತಿಹರಿಯ ಕುಳಿತಿರುವ ಭಂಗಿಯಲ್ಲಿರುವ ಕಲ್ಲಿನ ವಿಗ್ರಹವನ್ನು ಕಾಣಬಹುದು. ಇದು ನೋಡಲು ಬಹಳ ಆಕರ್ಷಕವಾಗಿದೆ. ಗುಹೆಯೊಳಗಿರುವ ಯಾವುದೇ ಮೂರ್ತಿ ಅಥವಾ ಇನ್ಯವುದೋ ಶಿಲ್ಪಕಲೆಯನ್ನು ಮುಟ್ಟಲು ಅನುಮತಿ ಇಲ್ಲ.
ಭಾರ್ತಿಹರಿ ಹೆಸರು ಬಂದಿದ್ದು ಹೇಗೆ?
ಭಾರ್ತಿಹರಿ ದೇವಸ್ಥಾನವು ಶಿಪ್ರ ನದಿಯ ದಡದಲ್ಲಿದೆ. ಇದು ಭಾರ್ತಿಹರಿ ಎನ್ನುವ ಸನ್ಯಾಸಿಯ ಗುಹೆಯಾಗಿದೆ. ಸಾಕಷ್ಟು ಭಕ್ತರು ಈ ಗುಹೆಗೆ ಭೇಟಿ ನೀಡುತ್ತಾರೆ. ಪ್ರಾರ್ಥನೆ ಸಲ್ಲಿಸುತ್ತಾರೆ. ಭಾರ್ತಿಹರಿ ರಾಜನ ಹೆಸರಿನಿಂದಾಗಿ ಈ ಗುಹೆಗೆ ಭಾರ್ತಿಹರಿ ಗುಹೆ ಹಾಗೂ ಭಾರ್ತಿಹರಿ ದೇವಸ್ಥಾನ ಎನ್ನುವ ಹೆಸರು ಬಂದಿದೆ.
ಗುಹೆಯಲ್ಲಿ ನೆಲೆಸಿದ್ದ ರಾಜ
PC:shubham
ಭಾರ್ತಿಹರಿ ರಾಜನು ಸಾಂಸಾರಿಕ ಜೀವನದಲ್ಲಿ ಸಮಸ್ಯೆಗಳು ಎದುರಾದಾಗ ರಾಜನು ಹೆಂಡತಿಯಿಂದ ದೂರ ಉಳಿಯಲು ನಿರ್ಧರಿಸಿ ಸನ್ಯಾಸಿಯಾಗಿರಲು ಯೋಚಿಸಿ ಗುಹೆಯಲ್ಲಿ ನೆಲೆಸಲು ನಿರ್ಧರಿಸಿದರು. ಇದೇ ಗುಹೆಗಳಲ್ಲಿ ಬಹಳ ಕಾಲ ಧ್ಯಾನ ಮಾಡಿದ್ದರು. ಭಾರ್ತಿಹರಿ ಒಬ್ಬ ಮಹಾನ್ ಕವಿ ಮತ್ತು ವಿದ್ವಾಂಸನಾಗಿದ್ದನು. ಶೃಂಗರ್ಶಾಕ್, ವೈರಾಗ್ಯಶಾತಕ್ ಮತ್ತು ನಿತೀಶಾಕ್ ಅವರು ಬರೆದ ಅತ್ಯುತ್ತಮ ಕೃತಿಗಳಾಗಿವೆ. ಅವರು ಕೃತಿಗಳಲ್ಲಿ ಸಂಸ್ಕೃತ ಭಾಷೆಯ ಉತ್ತಮ ಬಳಕೆಯನ್ನು ಮಾಡಿದರು.
ಶಿಲ್ಪಕಲೆಗಳಿಂದ ಅಲಂಕರಿಸಲ್ಪಟ್ಟಿವೆ
PC: Youtube
ನಿಜವಾದ ಪ್ರೇಮಿಯ ಭಾವನೆಗಳನ್ನು, ಮುರಿದ ಹೃದಯದ ಹತಾಶೆಯನ್ನು ನೀವು ಈ ಗುಹೆಗಳಲ್ಲಿ ಗ್ರಹಿಸಬಹುದು. ಇವುಗಳ ಗೋಡೆಗಳು ವರ್ಣಚಿತ್ರಗಳು ಮತ್ತು ಶಿಲ್ಪಕಲೆಗಳಿಂದ ಅಲಂಕರಿಸಲ್ಪಟ್ಟಿವೆ. ಇದು ಹಲವಾರು ಪುರಾತನ ವಸ್ತುಗಳು ಮತ್ತು ಸತ್ಯಗಳನ್ನು ಬಹಿರಂಗಪಡಿಸುತ್ತದೆ.
ಪವಿತ್ರ ಯಾತ್ರಾ ಕೇಂದ್ರ
PC: Bernard Gagnon
ಭಾರ್ತಿಹರಿ ಗುಹೆಗಳು ಸಣ್ಣ ದೇವಾಲಯವನ್ನು ಹೊಂದಿದ್ದು, ಇದು ನಾಥ್ ಸಮುದಾಯದ ಪವಿತ್ರ ಯಾತ್ರಾ ಕೇಂದ್ರವಾಗಿದೆ. ಪೀರ್ಮಾತ್ಸೇಂದ್ರನಾಥ ದೇವಾಲಯವು ಗುಹೆಗಳ ಹತ್ತಿರದಲ್ಲಿದೆ. ಈ ಗುಹೆಗಳು ಪ್ರತಿವರ್ಷ ಸಾವಿರಾರು ಜನರನ್ನು ಆಕರ್ಷಿಸುತ್ತವೆ. ಧಾರ್ಮಿಕ ಆಚರಣೆಗಳು ಮತ್ತು ಮೋಡಿಮಾಡುವ ಶ್ಲೋಕಗಳನ್ನು ನಿರ್ವಹಿಸುವ ಬೆಂಕಿಯ ಸುತ್ತಲೂ ಇರುವ ನಾಥ್ ಸಾಧುಗಳ ಸಮೂಹವನ್ನು ನೀವು ಇಲ್ಲಿ ಕಾಣಬಹುದು.
ಅಶ್ವಥ ಮರ
PC:Marshman
ಈ ಗುಹೆಯ ಸಮೀಪದಲ್ಲಿ ಒಂದು ಅಶ್ವಥ ಮರವಿದೆ. ಋಷಿ ಭಾರ್ತಿಹರಿ ಸಮಾಧಿ ಮೇಲೆ ಈ ಅಶ್ವಥ ಮರವಿದೆ ಎನ್ನಲಾಗುತ್ತದೆ. ಗುಹೆಯ ಸಮೀಪದಲ್ಲಿ ಪುರಾತನ ಕಾಳಿಮಠವಿದೆ. ಕಾಳಿ ದೇವಿಯ ವಿಗ್ರಹವು ಬಹಳ ಅದ್ಭಯತವಾಗಿದೆ.
ತಲುಪುವುದು ಹೇಗೆ?
PC:Roshan08.08
ಉಜ್ಜಯಿನಿಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಇಂದೋರ್ ವಿಮಾನ ನಿಲ್ದಾಣ. ಇಂದೋರ್ನಿಂದ ಮುಂಬೈ, ಕೊಲ್ಕತ್ತಾ, ದೆಹಲಿ, ಭೋಪಾಲ್ ಮತ್ತು ಅಹಮದಾಬಾದ್ಗೆ ದೈನಂದಿನ ವಿಮಾನಗಳು ಇವೆ. ನೀವು ಇಂದೋರ್ಗೆ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ದೇವಸ್ಥಾನಕ್ಕೆ ನೀವು ಬಸ್ ಅಥವಾ ಕಾರ್ನ್ನು ಬಾಡಿಗೆಗೆ ತೆಗೆದುಕೊಳ್ಳಬಹುದು. ಉಜ್ಜಯಿನಿಯು ಪ್ರಮುಖ ನಗರಗಳೊಂದಿಗೆ ರೈಲ್ವೆ ಸಂಪರ್ಕವನ್ನು ಹೊಂದಿದ್ದುದರಿಂದ ಉಜ್ಜಯಿನಿಗೆ ನೀವು ರೈಲು ಕೂಡ ತೆಗೆದುಕೊಳ್ಳಬಹುದು.