ಹಂಪಿಯು ಕರ್ನಾಟಕದ ಪ್ರಮುಖ ಪ್ರವಾಸಿ ತಾಣವಾಗಿದೆ. ಜೊತೆಗೆ ಎಂದಿಗೂ ಅಳಿಸಲ್ಪಡದ ಸ್ಥಳವಾಗಿದೆ. ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪಿ ಈಗ ಅವಶೇಷಗಳಾಗಿ ಕಾಣಬಹುದಾಗಿದೆ. ಇದು ಕಲ್ಲುಮಣ್ಣುಗಳಿರುವ ಅತ್ಯಂತ ಸುಂದರ ಸ್ಥಳಗಳಲ್ಲಿ ಒಂದಾಗಿದೆ. ಬೆಂಗಳೂರಿನಿಂದ ಹಂಪಿಗೆ ಒಂದು ಪ್ರವಾಸ ಕೈಗೊಂಡರೆ ಹೇಗಿರುತ್ತೆ. ಹಂಪಿಯಲ್ಲಿ ನೋಡಲೇ ಬೇಕಾದ ಪ್ರಮುಖ ತಾಣಗಳು ಯಾವುವು ಅನ್ನೋದನ್ನು ನಾವಿಂದು ತಿಳಿಸಲಿದ್ದೇವೆ.
ಹಂಪಿಗೆ ಒಂದು ಪ್ರಯಾಣ
ಬೆಂಗಳೂರಿನಿಂದ ಹಂಪಿಗೆ ಒಂದು ಪ್ರಯಾಣ. ವಿಜಯನಗರ ಸಾಮ್ರಾಜ್ಯದ ರಸ್ತೆ ಪ್ರವಾಸ. ಮಾರ್ಗ ಸ್ವಲ್ಪ ಸಂಕೀರ್ಣವಾಗಿದೆ ಆದರೆ ಅಚ್ಚುಕಟ್ಟಾಗಿ ಮತ್ತು ನೇರವಾಗಿದೆ! ಹಂಪಿಗೆ ಹೋಗುವ ಮಾರ್ಗದಲ್ಲಿ ನೀವು ಕೆಲವು ಸ್ಥಳೀಯ ಗ್ರಾಮಗಳ ದೃಶ್ಯಗಳನ್ನು ಸಹ ಸೆರೆಹಿಡಿಯಬಹುದು.
ರುದ್ರಪ್ರಯಾಗ: ಕಾರ್ತಿಕೇಯ ತನ್ನ ಎಲುಬನ್ನೇ ಶಿವನಿಗೆ ಅರ್ಪಿಸಿದ ಕ್ಷೇತ್ರ ಇದು
ಕಬ್ಬು, ಜೋಳದ ತೋಟ
ಈ ಸನ್ನಿವೇಶವು ಅದ್ಭುತವಾಗಿದೆ, ಪರ್ವತಗಳು, ಧೂಳಿನ ಕೆಂಪು ಮತ್ತು ಹಸಿರು ತೋಟಗಳು ತುಂಬಾ ಚೆನ್ನಾಗಿವೆ. ಗ್ರಾಮಸ್ಥರು ತಮ್ಮ ಉತ್ತಮ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಂಪಿ ಎಂಬ ಹೆಸರಿನ ಆಕರ್ಷಕ ಮೋಡಿಮಾಡುವ ಗ್ರಾಮಕ್ಕೆ ರಸ್ತೆ ಬರುವ ಮುನ್ನ ನಾವು ಜೋಳ, ಕಬ್ಬು, ಸೇವಂತಿಗೆ, ಸೂರ್ಯಕಾಂತಿ ಹೂವು ಮತ್ತು ಮೆಣಸಿನಕಾಯಿ ತೋಟಗಳನ್ನು ಕಾಣಬಹುದಾಗಿತ್ತು.
ವಿದೇಶಿಗರೇ ಹೆಚ್ಚು
ಹಂಪಿಯಲ್ಲಿ ಸುಮಾತು 100 ಪ್ರವಾಸಿಗರಿದ್ದರೆ ಅದರಲ್ಲಿ ೧೦ ಮಂದಿಯಷ್ಟೇ ಭಾರತೀಯರಾಗಿರುತ್ತಾರೆ. ಉಳಿದವರೆಲ್ಲಾ ಬೇರೆ ಬೇರೆ ದೇಶಕ್ಕೆ ಸಂಬಂಧಪಟ್ಟಿರುವವರು. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿಗರು ಬರುತ್ತಾರೆ.
ಅಂಡಮಾನ್ಗೆ ಹನಿಮೂನ್ ಹೋದ್ರೆ ಎಲ್ಲಿ, ಏನೆಲ್ಲಾ ಎಂಜಾಯ್ ಮಾಡಬಹುದು
ಟ್ರಾವೆಲ್ ಗೈಡ್ಗಳು
ಹಂಪಿ ಅವಶೇಷಗಳು ನಿಜವಾಗಿಯೂ ಮೋಡಿಮಾಡುವ ಮತ್ತು ಮಾಂತ್ರಿಕವಾಗಿವೆ. ಹೋಸಪೇಟೆಯಿಂದ ಹಂಪಿ ಕೇವಲ 12 ಕಿ.ಮೀ. ದೂರದಲ್ಲಿದೆ. ಹಳ್ಳಿಗಳ ಮೂಲಕ ಪ್ರಯಾಣ ಮಾಡುವುದು ನಿಜಕ್ಕೂ ಖುಷಿನೀಡುತ್ತದೆ. ಅಲ್ಲಿ ಸಾಕಷ್ಟು ಮಾರ್ಗದರ್ಶಕರು ಇರುತ್ತಾರೆ. ನೀವು ಹಂಪಿಗೆ ಮಾರ್ಗದರ್ಶಕರನ್ನೂ ತೆಗೆದುಕೊಳ್ಳಬಹುದು. ಮಾರ್ಗದರ್ಶಕರು ಸುಮಾರು ಸಾವಿರ ರೂಪಾಯಿಯಿಂದ ೧೨೦೦ ರೂ. ಶುಲ್ಕ ವಿಧಿಸುತ್ತಾರೆ.
ಹಂಪಿ ಬಜಾರ್
ಹಂಪಿ ಬಜಾರ್ ಇದು ಸಾರ್ವಭೌಮ ಅಂಗಡಿಗಳು, ರೆಸ್ಟೋರೆಂಟ್ಗಳು, ಪುಸ್ತಕ ಮಳಿಗೆಗಳಿಂದ ತುಂಬಿರುತ್ತದೆ. ಪಶ್ಚಿಮದ ತುದಿಯಲ್ಲಿ (ಎಡಭಾಗದಲ್ಲಿ ನೀವು ಬೀದಿಗೆ ಪ್ರವೇಶಿಸಿದಾಗ), ಎತ್ತರದ ಗೋಪುರ ಕಾಣಿಸುತ್ತದೆ ಅದುವೇ ವಿರೂಪಾಕ್ಷ ದೇವಾಲಯದ ದ್ವಾರ.
ವಿರೂಪಾಕ್ಷ ದೇವಾಲಯ
PC: Jean-Pierre Dalbéra
ವಿರೂಪಾಕ್ಷ ದೇವರನ್ನು ವಿಜಯನಗರ ಆಡಳಿತಗಾರರ ಪ್ರಮುಖ ದೇವತೆ ಎಂದು ನಂಬಲಾಗಿದೆ. ಈ ದೇವಸ್ಥಾನವನ್ನು ಹಂಪಿ ಯಲ್ಲಿ ನಿರ್ಮಿಸಲಾಗಿದೆ. ಆಕರ್ಷಕ ಮತ್ತು ವಾಸ್ತುಶಿಲ್ಪದ ಶ್ರೀಮಂತ ಹಂಪಿ ದೇವಸ್ಥಾನವು ಹಂಪಿಯಲ್ಲಿ ಭೇಟಿ ನೀಡಲೇ ಬೇಕಾದ ಅತ್ಯಂತ ಪ್ರಮುಖ ಸ್ಥಳವಾಗಿದೆ.
ವಿರೂಪಾಕ್ಷ ಬಜಾರ್
ವಿರೂಪಾಕ್ಷ ಬಜಾರ್ ಎಂದೂ ಕರೆಯಲ್ಪಡುವ ಹಂಪಿ ಬಜಾರ್ ವಿರೂಪಾಕ್ಷ ದೇವಾಲಯದ ಮುಂದೆ ಇರುವ ಮಾತಾಂಗ ಬೆಟ್ಟದ ತಪ್ಪಲಿನಲ್ಲಿ ಒಂದು ಕಿಲೋಮೀಟರ್ ಉದ್ದದ ರಸ್ತೆಯಾಗಿದೆ. ರಸ್ತೆಯ ಎರಡೂ ಬದಿಗಳಲ್ಲಿ ಹಳೆಯ ಮಂಟಪಗಳ ಶ್ರೇಣಿಯನ್ನು ಹೊಂದಿದೆ. ಇದು ಒಮ್ಮೆ ಬೆಳೆಯುತ್ತಿರುವ ಮಾರುಕಟ್ಟೆಯ ಭಾಗವಾಗಿದ್ದು ಮತ್ತು ಶ್ರೀಮಂತರ ನಿವಾಸವೂ ಆಗಿತ್ತು.
ಕೊಲ್ಲೂರು ಮೂಕಾಂಬಿಕೆ: ಇಲ್ಲಿ ಕೈ ಮುಗಿದರೆ ಸಾವಿರ ದೇವಸ್ಥಾನಕ್ಕೆ ಕೈ ಮುಗಿದಂತೆ
ಪುರಾತತ್ವ ವಸ್ತುಸಂಗ್ರಹಾಲ
ಹಂಪಿ ಪುರಾತತ್ವ ವಸ್ತುಸಂಗ್ರಹಾಲಯವು ಈ ಪ್ರದೇಶದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಇದು ಶಿಲ್ಪಕಲೆಗಳು ಮತ್ತು ಬಗೆಬಗೆಯ ಪ್ರಾಚೀನ ವಸ್ತುಗಳನ್ನು ಸಂಗ್ರಹಿಸುತ್ತದೆ. ಭಾರತದ ಪುರಾತತ್ತ್ವ ಶಾಸ್ತ್ರ ಸಮೀಕ್ಷೆಯು ಈ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಿತು.
ಹೆಮಕೂಟ ಬೆಟ್ಟ
ಹೆಮಕೂಟ ಬೆಟ್ಟವನ್ನು ನಡೆದುಕೊಂಡು ಹೋಗಬಹುದು. ಸಾಕಷ್ಟು ಸಣ್ಣ ದೇವಾಲಯಗಳು ಇಲ್ಲಿವೆ. ಅದು ವಿರೂಪಾಕ್ಷ ದೇವಾಲಯದ ದಕ್ಷಿಣ ಭಾಗದಲ್ಲಿದೆ. ಗ್ರಾನೈಟ್ ಕಲ್ಲುಗಳನ್ನು ಕತ್ತರಿಸಲು ಬಳಸಿದ ವಿಧಾನವನ್ನೂ ನೀವು ಗಮನಿಸಬಹುದು.
ಕೊಹಿನೂರ್ ವಜ್ರದ ಮೂಲ ಯಾವುದು? ಈ ಭದ್ರಕಾಳಿಗೂ ವಜ್ರಕ್ಕೂ ಸಂಬಂಧವೇನು?
ಕಡಲೇಕಾಳು ಗಣೇಶ
ಈ ಬೆಟ್ಟದ ಮೇಲೆ ಕಡಲೇಕಾಳು ಗಣೇಶ ದೇವಾಲಯವಿದೆ. ಇದು ಈ ಸಣ್ಣ ಬೆಟ್ಟದ ಮೇಲಿರುವ 2.4 ಮೀಟರ್ ಎತ್ತರವಿರುವ ಏಕಶಿಲೆಯ ಪ್ರತಿಮೆಯನ್ನು ಹೊಂದಿದ್ದು, ದೊಡ್ಡ ಬಂಡೆಯಿಂದ ಕೆತ್ತಲಾಗಿದೆ.
ಭೂಗತ ದೇವಸ್ಥಾನ
ಶಿವನ ಭೂಗತ ದೇವಸ್ಥಾನ ಹಂಪಿಯಲ್ಲಿರುವ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ. ಕೆಲವು ಕಾರಣಗಳಿಗಾಗಿ ಈ ದೇವಸ್ಥಾನವು ನೆಲದ ಮಟ್ಟಕ್ಕಿಂತ ಹಲವಾರು ಮೀಟರ್ಗಳನ್ನು ನಿರ್ಮಿಸಿರುವುದರಿಂದ, ದೇವಾಲಯದ ಮುಖ್ಯ ಭಾಗಗಳೂ ಸಹ ವರ್ಷವಿಡೀ ಹೆಚ್ಚಿನ ಸಮಯದವರೆಗೆ ನೀರಿನ ಅಡಿಯಲ್ಲಿ ಉಳಿಯುತ್ತವೆ.
ಮುಂಬೈ-ಗೋವಾ ಕ್ರೂಸ್ : ಒಬ್ಬರಿಗೆ ಟಿಕೇಟ್ ದರ ಎಷ್ಟು? ಅದರೊಳಗೆ ಏನೆಲ್ಲಾ ಇದೆ?
ವಿಠಲ ದೇವಾಲಯ
ಹಂಪಿಯ ವಿಠಲ ದೇವಾಲಯವು ಕಲ್ಲಿನ ರಥ, ಶ್ರೀಮಂತ ಕೆತ್ತನೆಗಳು, ಪಾಳುಬಿದ್ದ ದೇವಾಲಯದ ಕಥೆ, ಸಂಗೀತ ಸ್ತಂಭಗಳ ಮುಖ್ಯ ಆಕರ್ಷಣೆಯಾಗಿದೆ. ದೇವಾಲಯದ ಆವರಣದ ಹೊರಗೆ ಒಮ್ಮೆ ಅಸ್ತಿತ್ವದಲ್ಲಿದ್ದ ವಿಠಲಪುರ ಪಟ್ಟಣವನ್ನು ನೋಡಲು ಮರರೆಯದಿರಿ. ಇಡೀ ಸ್ಥಳವು ಧಾರ್ಮಿಕ ವಾಸ್ತುಶಿಲ್ಪದ ನಿಜವಾದ ವಿಸ್ಮಯಕ್ಕೆ ಉದಾಹರಣೆಯಾಗಿದೆ.
ತಲುಪುವುದು ಹೇಗೆ?
ಹಂಪಿಗೆ ಸಾಕಷ್ಟು ಕೆಎಸ್ಆರ್ಟಿಸಿ ಬಸ್ಗಳು ಲಭ್ಯವಿದೆ. ಇನ್ನು ನೀವು ಹೊಸಪೇಟೆಯಿಂದ ರಿಕ್ಷಾ ಹಿಡಿದು ಹಂಪಿಯನ್ನು ತಲುಪಬಹುದು.
ಬೆಂಗಳೂರಿನಿಂದ ರಾತ್ರಿ ಹಂಪಿ ಎಕ್ಸ್ಪ್ರೆಸ್ ರೈಲು ಹತ್ತಿ ಹೊಸಪೇಟೆ ಜಂಕ್ಷನ್ನಲ್ಲಿ ಇಳಿಯಿರಿ. ಹೊಸಪೇಟೆಯಿಂದ ರಿಕ್ಷಾ ಮೂಲಕ ಹಂಪಿ ತಲುಪಬಹುದು. ಬೆಂಗಳೂರಿನಿಂದ ಹೊಸಪೇಟೆಗೆ ರೈಲಿನಲ್ಲಿ 9 ಗಂಟೆ ಹಿಡಿಯುತ್ತದೆ.