ಬೇಸಿಗೆಯಲ್ಲೂ ಹಸಿರಾಗಿ ಸದಾ ತಂಪಾದ ವಾತಾವರಣ ನೀಡಬಲ್ಲ ಸ್ಥಳವೆಂದರೆ ಸಕಲೇಶಪುರ. ಸುಂದರವಾದ ಬೆಟ್ಟಗಳ ಇಳಿಜಾರು ಹಾಗೂ ಕಾಫಿ ಬೆಳೆಯ ಹಸಿರು ಸಿರಿ ಪ್ರವಾಸಿಗರನ್ನು ಸದಾ ಆಕರ್ಷಿಸುತ್ತದೆ. ಸುಂದರವಾದ ಗಿರಿಧಾಮಗಳನ್ನು ಒಳಗೊಂಡಿರುವ ಈ ತಾಣಕ್ಕೆ ಬಡವರ ಊಟಿ ಎಂದು ಕರೆಯುತ್ತಾರೆ. ಬೆಂಗಳೂರಿಗೆ ಸಮೀಪವೇ ಇರುವುದರಿಂದ ವಾರದ ರಜೆಯಲ್ಲಿ ಬರಬಹುದು.
ಸಕಲೇಶಪುರದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮಲೆನಾಡು ಪ್ರದೇಶದ ಒಂದು ಭಾಗವಾಗಿರುವ ಸಕಲೇಶಪುರ ಹಾಸನ ಜಿಲ್ಲೆಯಲ್ಲಿದೆ. ಪಶ್ಚಿಮ ಘಟ್ಟಗಳ ಸಾಲಿನಿಂದ ಆವೃತ್ತವಾದ ಈ ತಾಣ ಸುಂದರ ಅನುಭವವನ್ನು ನೀಡಬಲ್ಲದು. ಬೆಂಗಳೂರಿನಿಂದ 223 ಕಿ.ಮೀ. ವ್ಯಾಪ್ತಿಯಲ್ಲಿರುವ ಈ ಪ್ರದೇಶದಲ್ಲಿ ಏನೆಲ್ಲಾ ನೋಡಬಹುದು ಎಂಬುವುದನ್ನು ತಿಳಿಯೋಣ ಬನ್ನಿ....
ಮಂಜಾರಾಬಾದ್ ಕೋಟೆ
ನಕ್ಷತ್ರಾಕೃತಿಯಲ್ಲಿ ನಿರ್ಮಾಣ ಗೊಂಡ ಈ ಕೋಟೆ ಸುಂದರವಾದ ಐತಿಹಾಸಿಕ ಇತಿಹಾಸವನ್ನು ತೆರೆದಿಡುತ್ತದೆ. ಇದನ್ನು ಟಿಪ್ಪು ಸುಲ್ತಾನನು 1785-1792ರ ಅವಧಿಯಲ್ಲಿ ನಿರ್ಮಿಸಿದ್ದ. ಶಾಂತವಾದ ಪರಿಸರವನ್ನು ಹೊಂದಿರುವ ಈ ತಾಣಕ್ಕೆ ಒಮ್ಮೆ ಭೇಟಿ ನೀಡಲೇಬೇಕು.
A view of Manjarabad Fort
Photo Courtesy: Chandu6119
ಬಿಸ್ಲೆ ವೀಕ್ಷಣ ಸ್ಥಳ
ಬಿಸ್ಲೆ ಹಳ್ಳಿಯ ಬೆಟ್ಟದ ಮೇಲಿರುವ ಒಂದು ಸ್ಥಳ. ಈ ಸ್ಥಳದಲ್ಲಿ ಬಂದು ನಿಂತರೆ ಮೂರು ಬೆಟ್ಟಗಳಾದ ಕುಮಾರ ಪರ್ವತ, ಪುಷ್ಪಗಿರಿ ಮತ್ತು ದೊಡ್ಡ ಬೆಟ್ಟಗಳ ತುದಿಯನ್ನು ನೋಡಬಹುದು. ಬಿಸ್ಲೆ ಬೆಟ್ಟದ ತುದಿಯಲ್ಲಿ ನಿಂತರೆ ಪ್ರಕೃತಿಯ ರಮ್ಯವಾದ ಸೊಬಗನ್ನು ಸೆರೆಹಿಡಿಯಬಹುದು.
Bisle Ghat View
Point Photo Courtesy: Ashwin Kumar
ಸುಂದರ ರೈಲ್ವೆ ಮಾರ್ಗ
ಸಕಲೇಶಪುರದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗುವ ರೈಲ್ವೆ ಮಾರ್ಗವು ದಟ್ಟವಾದ ಪ್ರಕೃತಿ ಸೌಂದರ್ಯವನ್ನು ಒಳಗೊಂಡಿದೆ. ಕಾಡಿನ ಮಧ್ಯೆ ಸಾಗುವ ಈ ಮಾರ್ಗದಲ್ಲಿ ಜಲಧಾರೆಗಳು ಮತ್ತು ಸುರಂಗ ಮಾರ್ಗಗಳು ಸಿಗುತ್ತವೆ. ಈ ದಾರಿಯಲ್ಲಿ ಒಮ್ಮೆ ಸಾಗಿದರೆ ಸುಂದರ ಅನುಭವ ನಮ್ಮದಾಗುತ್ತದೆ.
Green Route Trek
Photo Courtesy: Rahul Nair
ಜೇನುಕಲ್ಲು ಗುಡ್ಡ
ಸಕಲೇಶಪುರದಲ್ಲಿರುವ ಒಂದು ಪುಟ್ಟಗಿರಿಧಾಮ ಇದು. ಭವ್ಯವಾದ ಹಸಿರು ಸಿರಿ ಹಾಗೂ ಗಿರಿಗಳ ಶ್ರೇಣಿಗಳಿರುವುದರಿಂದ ಚಾರಣ ಪ್ರಿಯರಿಗೆ ಸ್ವರ್ಗತಾಣ ಆಗುವುದರಲ್ಲಿ ಸಂದೇಹವಿಲ್ಲ. ಇಲ್ಲಿ ನಯನ ಮನೋಹರವಾದ ಪ್ರಕೃತಿ ದೃಶ್ಯಗಳನ್ನು ಸೆರೆ ಹಿಡಿಯಬಹುದು.
Jenukal Gudda
Photo Courtesy: L. Shamal
ಮಂಜೇ ಹಳ್ಳಿ ಜಲಪಾತ
ಮಳೆಗಾಲದಲ್ಲಿ ನೋಡಲೇ ಬೇಕಾದ ಮನೋಹರ ಜಲಪಾತ ಇದು. ಬೇಸಿಗೆಯಲ್ಲಿ ನೀರಿನ ಹರಿವು ಅಷ್ಟಾಗಿ ಇರುವುದಿಲ್ಲ.
Chestnut-Headed Bee-Eaters at Sakleshpur
Photo Courtesy: shrikant rao
ಬೆಟ್ಟ ಬೈರವೇಶ್ವರ ದೇಗುಲ
ಈ ದೇಗುಲವು ಬೆಟ್ಟದ ತುದಿಯಲ್ಲಿರುವ ಒಂದು ಪವಿತ್ರ ದೇವಸ್ಥಾನ. 600 ವರ್ಷಗಳ ಇತಿಹಾಸ ಹೊಂದಿರುವ ಈ ದೇಗುಲ ಆಕರ್ಷಕ ವಾಸ್ತುಶಿಲ್ಪಗಳಿಂದ ಕೂಡಿದೆ. ಇಲ್ಲಿಂದ ಪರ್ವತಗಳ ಸಾಲನ್ನು ನೋಡುತ್ತಿದ್ದರೆ ಮನಸ್ಸಿಗೊಂದು ನಿರಾಳ ಭಾವ ಉಂಟಾಗುತ್ತದೆ.
ರಕ್ಷಿದಿ ತೋಟ
ಈ ತೋಟವು ಕಾಫಿ ಹಾಗೂ ಮಸಾಲೆ ಬೆಳೆಗಳಿಂದ ಕೂಡಿದೆ. ಹಸಿರಾದ ತೋಟವು ಇಳಿಜಾರಿನ ಆಕಾರದಲ್ಲಿರುವುದನ್ನು ನೋಡುತ್ತಿದ್ದರೆ ಒಂದು ಬಗೆಯ ಖುಷಿಯುಂಟಾಗುತ್ತದೆ. ಈ ತೋಟದ ಸುತ್ತ ಒಮ್ಮೆ ನಡೆದು ಸಾಗಿದರೆ ಸುಂದರ ಅನುಭವ ನಮ್ಮ ಪಾಲಾಗುವುದರಲ್ಲಿ ಸಂದೇಹವಿಲ್ಲ.
ಸಕಲೇಶಪುರ ದೇಗುಲ
ಈ ದೇಗುಲವು ಹೊಯ್ಸಳರ ಕಾಲದ್ದಾಗಿದ್ದು, ಈಶ್ವರನನ್ನು ಆರಾಧಿಸಲಾಗುತ್ತದೆ. ಸೊಗಸಾದ ವಾಸ್ತುಶಿಲ್ಪವು ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತದೆ.