ಪೌನರ್ ಗ್ರಾಮವು ವಾರ್ಧಾದ ಪ್ರಾಚೀನ ಇತಿಹಾಸಕ್ಕೆ ಒಂದು ಸಾಕ್ಷಿಯಾಗಿದೆ. ಧಂ ನದಿಯ ತೀರದಲ್ಲಿರುವ, ಈ ಗ್ರಾಮಕ್ಕೆ ಪೌರಾಣಿಕ ರಜಪೂತ ರಾಜನಾದ ಪವನನ ಹೆಸರನ್ನು ಇರಿಸಲಾಗಿದೆ. ಪೌನರ್ ಗ್ರಾಮದಲ್ಲಿ ಪರಂಧಾಮ ಆಶ್ರಮ ಮತ್ತು ಗಾಂಧಿ ಕುಟಿಯಂತಹ ಕೆಲವು ಪ್ರಮುಖ ಆಕರ್ಷಣೆಗಳು ಹಾಗೂ ಆಚಾರ್ಯ ವಿನೋಬಾ ಭಾವೆಯವರ ಸ್ಮಾರಕದಲ್ಲಿ ಅವರ ಚಿತಾಭಸ್ಮವನ್ನು ಕಾಣಬಹುದು.
ಪೌನರ್ ಗ್ರಾಮವು ವಾರ್ಧಾ ಪಟ್ಟಣದಿಂದ ಸುಮಾರು ಎಂಟು ಕಿಲೋಮೀಟರ್ ದೂರದಲ್ಲಿದೆ.