ಗಿತೈ ಮಂದಿರವು ಗೊಪುರಿ ಗ್ರಾಮದ ವಿಶ್ವ ಶಾಂತಿ ಸ್ತೂಪದ ಬಳಿ ಇರುವ ಒಂದು ಸುಂದರ ದೇವಾಲಯ. ಇದು ವಾರ್ಧಾ ನಗರದ ಅತ್ಯಂತ ಪ್ರಸಿದ್ಧ ಆಕರ್ಷಣೆಯಾಗಿದ್ದು, ಇದನ್ನು1980 ರಲ್ಲಿ ಆಚಾರ್ಯ ವಿನೋಬಾ ಭಾವೆಯವರು ಉದ್ಘಾಟಿಸಿದ್ದರು.
ಅನನ್ಯ ವಾಸ್ತುಶಿಲ್ಪದ ಈ ದೇವಾಲಯವನ್ನು ಕಲ್ಲುಗಳನ್ನು ಬಳಸಿ ಕಟ್ಟಲಾಗಿದೆ. ಭಗವದ್ಗೀತೆಯ ಹದಿನೆಂಟನೇ ಅಧ್ಯಾಯವನ್ನು ಚಿತ್ರಿಸಲಾಗಿರುವ ಈ ಕಲ್ಲುಗಳನ್ನು ಹಸುವಿನ ಆಕಾರದಲ್ಲಿ ಲಂಬವಾಗಿ ಜೋಡಿಸಲಾಗಿದೆ. ಈ ದೇವಸ್ಥಾನದ ಇನ್ನೊಂದು ಆಶ್ಚರ್ಯಕರ ವಿಷಯವೆಂದರೆ ಇಲ್ಲಿ ಯಾವುದೇ ದೇವರ ವಿಗ್ರಹವಿಲ್ಲ ಹಾಗೂ ಈ ದೇವಾಲಯಕ್ಕೆ ಛಾವಣಿ ಕೂಡ ಇಲ್ಲ.
ದೇವಾಲಯದ ಹತ್ತಿರದಲ್ಲೆ, ಸುಂದರವಾದ ಪುಟ್ಟ ಉದ್ಯಾನವನ್ನೂ ಕಾಣಬಹುದು. ಶಾಂತಿ ಕುಟಿಯಲ್ಲಿ ಜಮ್ನಾಲಾಲ್ ಬಜಾಜ್, ಆಚಾರ್ಯ ವಿನೋಬಾ ಭಾವೆ ಮತ್ತು ಮಹಾತ್ಮಾ ಗಾಂಧಿಯವರ ಜೀವನವನ್ನು ಚಿತ್ರಿಸುವ ಪ್ರದರ್ಶನವೊಂದನ್ನು ಆಯೋಜಿಸಲಾಗಿದೆ.