ಯಮುನಾ ನದಿಯು ಉತ್ತರ್ ಖಂಡ್ನಲ್ಲಿರುವ ಯಮುನೋತ್ರಿ ಎಂಬ ಹಿಮನದಿಯಲ್ಲಿ ಸಮುದ್ರ ಮಟ್ಟದಿಂದ 6.387 ಮೀಟರ್ ಎತ್ತರದಲ್ಲಿ ಉಗಮಗೊಳ್ಳುತ್ತದೆ. ಅಲ್ಲಿಂದ ಈ ನದಿಯು ಬಂಡೆರ್ ಪೂಚ್ ಕಣಿವೆಗಳ ಮೂಲಕ ಹರಿಯುತ್ತದೆ. ದಕ್ಷಿಣದತ್ತ ಸಾಗುವ ಈ ನದಿಯು ದೆಹಲಿ, ವೃಂದಾವನ ಮತ್ತು ಮಥುರಾದ ಮೂಲಕ ಹಾದು ಹೋಗುತ್ತದೆ.
ವೃಂದಾವನದ ಕೇಸಿ ಘಾಟ್ಗೆ ಸಮೀಪದ ನದಿ ತೀರವು ಭಾರೀ ಪವಿತ್ರವೆಂದು ಭಾವಿಸಲಾಗುತ್ತದೆ. ಏಕೆಂದರೆ ಶ್ರೀ ಕೃಷ್ಣನು ರಾಕ್ಷಸನಾದ ಕೇಸಿಯನ್ನು ಕೊಂದ ನಂತರ ಇಲ್ಲಿಯೇ ಸ್ನಾನ ಮಾಡಿದನಂತೆ. ಹಾಗಾಗಿ ಇಲ್ಲಿ ತೀರ್ಥ ಸ್ನಾನ ಮಾಡಿದರೆ ಮುಕ್ತಿ ದೊರೆಯುತ್ತದೆಯೆಂದು ನಂಬಲಾಗುತ್ತದೆ.
ಇಲ್ಲಿ ನದಿಗೆ ಇಳಿಯಲು ಹಲವಾರು ಘಾಟ್ಗಳು ಅಥವಾ ಮೆಟ್ಟಿಲುಗಳು ಇವೆ. ಈ ಘಾಟ್ಗಳಲ್ಲಿ ಹಲವಾರು ಧಾರ್ಮಿಕ ವಿಧಿಗಳನ್ನು ನೆರವೇರಿಸಲಾಗುತ್ತದೆ. ಇವುಗಳ ಜೊತೆಗೆ ಬೆಳಗ್ಗೆ ಮತ್ತು ಸಂಜೆ ಇಲ್ಲಿ ಆರತಿ ಸೇವೆಯನ್ನು ಸಹ ನಡೆಸಲಾಗುತ್ತದೆ.