ಸೇವ ಕುಂಜ್ ಮತ್ತು ನಿಧಿವನ್ಗಳು ಶ್ರೀ ಕೃಷ್ಣನ ಕಾಲದಿಂದಲು ಅತ್ಯಂತ ಸುಂದರವಾದ ಉದ್ಯಾನವನಗಳಾಗಿವೆ. ನಂಬಿಕೆಗಳ ಪ್ರಕಾರ ಸೇವಾ ಕುಂಜ್ನಲ್ಲಿ ಶ್ರೀ ಕೃಷ್ಣನು ರಾಧಾ ಮತ್ತು ಇತರ ಗೋಪಿಯರ ಜೊತೆಗೆ ರಾಸ ಲೀಲೆಯನ್ನು ಆಡಿದನೆಂದು ಹೇಳಲಾಗುತ್ತದೆ. ಈ ಉದ್ಯಾನವನದ ಒಳಗೆ ಸೂಕ್ಷ್ಮ ಕೆತ್ತನೆಗಳಿಂದ ಕೂಡಿದ ರಾಧ ಕೃಷ್ಣರ ದೇವಾಲಯವನ್ನು ನಾವು ಕಾಣಬಹುದು.
ಇಲ್ಲಿಗೆ ಸಮೀಪದಲ್ಲಿ ನಿಧಿವನ್ ಎಂಬ ಸ್ಥಳವಿದೆ. ಇಲ್ಲಿ ಕೃಷ್ಣ ಮತ್ತು ರಾಧೆಯರು ವಿಶ್ರಾಂತಿ ಪಡೆದರೆಂದು ನಂಬಲಾಗುತ್ತದೆ. ಬಹುತೇಕ ಮಂದಿ ಪ್ರವಾಸಿಗರು ಈ ಉದ್ಯಾನವನಕ್ಕೆ ಸಂಜೆ ಅಥವಾ ರಾತ್ರಿಗಳ ಸಮಯದಲ್ಲಿ ಇಲ್ಲಿಗೆ ಆಗಮಿಸುತ್ತಾರೆ. ಏಕೆಂದರೆ ನಂಬಿಕೆಗಳ ಪ್ರಕಾರ ಶ್ರೀ ಕೃಷ್ಣ ಮತ್ತು ರಾಧೆಯರು ಸಂಜೆಯಾದ ನಂತರ ರಾಸ ಲೀಲೆಯನ್ನು ಆಡಿದರೆಂದು ನಂಬಲಾಗುತ್ತದೆ. ಇಲ್ಲಿ ಇನ್ನಿತರ ದೇವಾಲಯಗಳನ್ನು ಸಹ ನಾವು ಕಾಣಬಹುದು.