ರಾಧಾ ಗೋಕುಲಾನಂದ ದೇವಾಲಯವನ್ನು ಕೇಸಿ ಘಾಟ್ ಮತ್ತು ರಾಧಾ- ರಮಣ್ ದೇವಾಲಯವೆಂಬ ಪ್ರಾಚೀನ ದೇವಾಲಯದ ನಡುವೆ ನಿರ್ಮಿಸಲಾಗಿದೆ. ಈ ದೇವಾಲಯವನ್ನು ರಾಧಾ, ವಿಜಯ ಗೋವಿಂದ ಮುಂತಾದ ಅನುಯಾಯಿಗಳಿಗಾಗಿ ನಿರ್ಮಿಸಲಾಗಿದೆ. ಹಿಂದಿನ ಕಾಲದಲ್ಲಿ ಈ ಎಲ್ಲಾ ದೇವರುಗಳನ್ನು ಒಟ್ಟಿಗೆ ಪೂಜಿಸಲಾಗುತ್ತಿತ್ತು. ಆದರೆ ವಿಶ್ವನಾಥ್ ಚಕ್ರವರ್ತಿಯವರು ಈ ದೇವಾಲಯವನ್ನು ನಿರ್ಮಿಸಿದ ಮೇಲೆ ಎಲ್ಲಾ ದೇವರುಗಳನ್ನು ಒಟ್ಟಿಗೆ ಪೂಜಿಸಲು ಆರಂಭಿಸಲಾಯಿತು.
ಈ ದೇವಾಲಯದ ಸಂಕೀರ್ಣದಲ್ಲಿ ನರೋತ್ತಮ ದಾಸ ಮತ್ತು ಗಂಗನಾರಾಯಣರ ಸಮಾಧಿಯನ್ನು ಸಹ ಇಲ್ಲಿನ ಸಭಾಂಗಣದಲ್ಲಿ ನಾವು ಕಾಣಬಹುದು. ಈ ದೇವಾಲಯದಲ್ಲಿ ಪ್ರಾಚೀನ ಕಾಲದಲ್ಲಿ ನಿರ್ಮಿಸಲಾಗಿರುವ ಹಲವಾರು ರಚನೆಗಳನ್ನು ಸಹ ನಾವು ಕಾಣಬಹುದು. ಈ ರಚನೆಗಳು ಸಹ ಮಹತ್ವವನ್ನು ಪಡೆದಿದೆ.