ವೃಂದಾವನದಲ್ಲಿರುವ ಇಸ್ಕಾನ್ ದೇವಾಲಯವನ್ನು ಶ್ರೀ ಕೃಷ್ಣ ಬಲರಾಮ ದೇವಾಲಯವೆಂದು ಸಹ ಕರೆಯುತ್ತಾರೆ. ಇದನ್ನು 1975ರಲ್ಲಿ ನಿರ್ಮಿಸಿದರು. ಈ ದೇವಾಲಯವನ್ನು ಶ್ರೀ ಕೃಷ್ಣ ತನ್ನ ಸ್ನೇಹಿತರ ಜೊತೆಗೆ 5000 ವರ್ಷಗಳ ಹಿಂದೆ ಆಟವಾಡಿದ ಅದೇ ನಿರ್ದಿಷ್ಟ ಸ್ಥಳದಲ್ಲಿ ನಿರ್ಮಿಸಲಾಗಿದೆ.
ಈ ದೇವಾಲಯದಲ್ಲಿ ಶ್ರೀಕೃಷ್ಣನ ಬೋಧನೆಗಳನ್ನು ಮತ್ತು ಜೀವನವನ್ನು ಬಿಂಬಿಸುವ ಸುಂದರವಾದ ಚಿತ್ರಗಳನ್ನು ಇಡಲಾಗಿದೆ. ಈ ದೇವಾಲಯವು ಇನ್ನಿತರ ಹಿಂದೂ ದೇವಾಲಯಗಳಿಗಿಂತ ಪ್ರತ್ಯೇಕತೆಯನ್ನು ಹೊಂದಿದೆ. ಏಕೆಂದರೆ ಜನರು ಇಲ್ಲಿಗೆ ಕೇವಲ ಧ್ಯಾನ ಮಾಡಲು ಮಾತ್ರ ಬರುವುದಿಲ್ಲ. ಜೊತೆಗೆ ಭಗವದ್ಗೀತೆಯನ್ನು ಓದಿ, ಧ್ಯಾನ ಮಾಡಲು ಸಹ ಬರುತ್ತಾರೆ. ಇದರ ಜೊತೆಗೆ ಕೆಲವು ಭಕ್ತಾಧಿಗಳು ಇಲ್ಲಿ ಅರೆಕಾಲಿಕ ಕೆಲಸಗಳಲ್ಲಿ ಪಾಲ್ಗೊಳ್ಳಲು ಸಹ ಆಗಮಿಸುತ್ತಿರುತ್ತಾರೆ.
ಈ ದೇವಾಲಯದಲ್ಲಿ ಮೂರು ಯಙ್ಞ ಪೀಠಗಳನ್ನು ನಾವು ಕಾಣಬಹುದು. ಇದರ ದೇವಾಲಯದ ಗೋಡೆಗಳನ್ನು ಚಿತ್ರಗಳು ಮತ್ತು ಕೆತ್ತನೆಗಳಿಂದ ಅಲಂಕರಿಸಲಾಗಿದೆ. ಈ ದೇವಾಲಯವು ಕೇವಲ ಭಾರತೀಯರನ್ನಷ್ಟೇ ಅಲ್ಲದೆ ವಿದೇಶಿಯರನ್ನು ಸಹ ಧ್ಯಾನ ಮತ್ತು ಆತ್ಮ ಸಾಕ್ಷಾತ್ಕಾರ ನೀಡುವ ಸಲುವಾಗಿ ಆಕರ್ಷಿಸುತ್ತಿದೆ. ಜೊತೆಗೆ ಇಲ್ಲಿ ವೇದಗಳ ಕುರಿತು ಇಂಗ್ಲೀಷಿನಲ್ಲಿ ಪ್ರವಚನಗಳನ್ನು ನೀಡಲಾಗುತ್ತದೆ.