ಗೋವಿಂದ್ ದೇವ್ ದೇವಾಲಯವು ಶ್ರೀ ಕೃಷ್ಣನಿಗಾಗಿ ನಿರ್ಮಿಸಲಾಗಿರುವ ದೇವಾಲಯಗಳಲ್ಲಿ ಎದ್ದು ಕಾಣುವಂತಹ ದೇವಾಲಯವಾಗಿದೆ. ಇಲ್ಲಿ ಕೃಷ್ಣನನ್ನು ಗೋವಿಂದ್ ದೇವ್ ಎಂದು ಕರೆಯುತ್ತಾರೆ. ವೃಂದಾವನದಲ್ಲಿ ಕೃಷ್ಣನು ತನ್ನ ಬಾಲ್ಯವನ್ನು ಕಳೆದಿದ್ದನು. ಹಾಗಾಗಿ ಆತನಿಗಾಗಿ ಮತ್ತು ಆತನ ಜೀವನವನ್ನು ಬಿಂಬಿಸುವ ಹಲವಾರು ದೇವಾಲಯಗಳನ್ನು ಇಲ್ಲಿ ನಿರ್ಮಿಸಲಾಗಿದೆ.
ಈ ದೇವಾಲಯವನ್ನು ಸಾವಿರ ಜನ ಕಾರ್ಮಿಕರು 7 ವರ್ಷಗಳ ಅವಿರತ ಪರಿಶ್ರಮದಿಂದ ನಿರ್ಮಿಸಲಾಗಿದೆ. ಅಮೃತ ಶಿಲೆಯಿಂದ ನಿರ್ಮಿಸಲಾದ ಯಙ್ಞ ಕುಂಡ ಮತ್ತು ಛಾವಣಿಯಲ್ಲಿ ಕೆತ್ತಲ್ಪಟ್ಟ ಕಮಲವು ಈ ದೇಗುಲ ವೈಶಿಷ್ಟ್ಯಗಳಾಗಿವೆ. ಔರಂಗಜೇಬನ ಕಾಲದಲ್ಲಿ ಈ ದೇವಾಲಯದ ಪ್ರಮುಖ ಭಾಗಗಳು ನಾಶಗೊಂಡವು. ಆದರೂ ಈ ದೇವಾಲಯವು ತನ್ನ ಆಕರ್ಷಣೆಯನ್ನು ಕಳೆದುಕೊಂಡಿಲ್ಲ. ಹಾಗಾಗಿ ಇದು ಇಡೀ ವಿಶ್ವದಲ್ಲಿಯೇ ಭಕ್ತಾಧಿಗಳ ಪಾಲಿಗೆ ಅತ್ಯಂತ ಪ್ರಮುಖ ದೇವಾಲಯವಾಗಿದೆ. ಜನ್ಮಾಷ್ಟಮಿ ಮತ್ತು ಹೋಳಿ ಹಬ್ಬದ ಸಂದರ್ಭದಲ್ಲಿ ಈ ದೇವಾಲಯವನ್ನು ಹೂವು ಮತ್ತು ದೀಪಗಳಿಂದ ಅಲಂಕರಿಸಲಾಗಿರುತ್ತದೆ.