ಗೋಪೇಶ್ವರ್ ಮಹಾದೇವ್ ದೇವಾಲಯವು ವೃಂದಾವನದಲ್ಲಿರುವ ಅತ್ಯಂತ ಪ್ರಮುಖ ದೇವಾಲಯವಾಗಿದೆ. ಈ ದೇವಾಲಯವು ಶ್ರೀ ಕೃಷ್ಣನ ಜೊತೆಗೆ ಅವಿನಾಭಾವ ಸಂಬಂಧವನ್ನು ಹೊಂದಿರುವ ಈ ಊರಿನಲ್ಲಿರುವ ಶಿವನ ದೇವಾಲಯಗಳಲ್ಲಿ ಒಂದಾಗಿದೆ. ದಂತ ಕತೆಗಳ ಪ್ರಕಾರ ಶಿವನು ಶ್ರೀ ಕೃಷ್ಣ ಮತ್ತು ಗೋಪಿಯರ ನಡುವೆ ನಡೆಯುವ ರಾಸಲೀಲೆಯನ್ನು ನೋಡಲು ಬಯಸಿದನಂತೆ. ಆದರೆ ಆತನು ಪುರುಷನಾಗಿದ್ದ ಕಾರಣಕ್ಕೆ ರಾಸಲೀಲೆ ನಡೆಯುವ ಸ್ಥಳಕ್ಕೆ ಪ್ರವೇಶ ನಿರಾಕರಿಸಲಾಗಿತ್ತು. ಹಾಗಾಗಿ ಶಿವನು ಈ ಉದ್ದೇಶಕ್ಕಾಗಿ ಹೆಣ್ಣಿನಂತೆ ವೇಷವನ್ನು ಬದಲಾಯಿಸಿಕೊಂಡು ಹೋಗಿ ರಾಸಲೀಲೆಯನ್ನು ನೋಡಿದನಂತೆ. ಈ ಸಲುವಾಗಿ ಇಲ್ಲಿನ ಶಿವಲಿಂಗವನ್ನು ಹೆಣ್ಣಿನ ಒಡವೆ- ವಸ್ತ್ರಗಳಿಂದ ಅಲಂಕರಿಸಲಾಗುತ್ತದೆ.