ಭೀಮ್ ಕಿ ಡುಂಗಾರಿಯು ವಿರಾಟ್ ನಗರಿನಲ್ಲಿರುವ ಒಂದು ದೊಡ್ಡ ಗುಹೆಯಾಗಿದ್ದು, ಜನಪ್ರಿಯ ಪೌರಾಣಿಕ ಕಥೆಗಳ ಹಿನ್ನಿಲೆಯನ್ನು ಹೊಂದಿದೆ. ಜನಗಳ ನಂಬಿಕೆ ಪ್ರಕಾರ, ಪಾಂಡವರು ಕೌರವರೊಡನೆ ಪಗಡೆ ಯುದ್ಧದಲ್ಲಿ ಸಂಪೂರ್ಣವಾಗಿ ಎಲ್ಲವನ್ನು ಸೋತ ನಂತರ 12 ವರ್ಷಗಳ ಕಾಲ ವನವಾಸ ಮತ್ತು ಹೆಚ್ಚುವರಿಯಾಗಿ 1 ವರ್ಷಗಳ ಕಾಲ ಅಜ್ಞಾತವಾಸ (ಕಣ್ಮರೆ ಅಥವಾ ಬೇರೆ ವೇಶ) ಅನುಭವಿಸಬೇಕಾಯಿತು. ಈ ಒಂದು ವರ್ಷಗಳ ಅಜ್ಞಾತವಾಸವನ್ನು ಪಾಂಡವರು ವಿರಾಟ ರಾಜನ ರಾಜ್ಯವಾದ ವಿರಾಟ್ ನಗರದಲ್ಲಿ ಕಳೆದರೆನ್ನಲಾಗಿದೆ. ಈ ಸಮಯದಲ್ಲಿ ಪಾಂಡವರಲ್ಲಿ ಬಲಶಾಲಿಯಾದ ಭೀಮನು ಈ ಗುಹೆ (ಭೀಮ್ ಕಿ ಡುಂಗಾರಿ)ಯಲ್ಲಿ ವಾಸಿಸಲು ಬಯಸಿದನು. ಅಡುಗೆ ಮಾಡುವುದು ಮತ್ತು ತಿನ್ನುವುದನ್ನು ಪ್ರಿತಿಸುತ್ತಿದ್ದ ಭೀಮನು, ವಿರಾಟ ರಾಜನ ಅರಮನೆಯಲ್ಲಿ ಅಡುಗೆ ಮಾಡುವವನಾಗಿ ಸೇವೆ ಸಲ್ಲಿಸಿದ್ದ ಎನ್ನಲಾಗುತ್ತದೆ.