ಅಶೋಕ ಶಿಲಾಲೇಖವು, ಅಶೋಕ ಚಕ್ರವರ್ತಿಯ ಒಂದು ಪ್ರಾಚೀನ ಶಿಲಾಶಾಸನವಾಗಿದ್ದು, ವಿರಾಟ್ ನಗರ್ ದಿಂದ 100 ಕಿ.ಮೀ ದೂರದಲ್ಲಿದೆ. ಇದೊಂದು ಅದ್ಭುತ ಸೌಂದರ್ಯ ಮತ್ತು ಐತಿಹಾಸಿಕ ಮಹತ್ವವುಳ್ಳ ಏಕಾಂತ ಸ್ಥಳವಾಗಿದೆ. ಮೌರ್ಯ ವಂಶದ ಸಾಮ್ರಾಟ ಅಶೋಕ ಚಕ್ರವರ್ತಿಯು ಭಾರತವನ್ನು ಕ್ರಿ.ಪೂ 269 ರಿಂದ 232 ರ ಮಧ್ಯೆ ಆಳಿದ್ದನು. ಅಶೋಕನು ಆಜ್ಞೆಮಾಡಿದ ನಿಯಮಗಳು, ಉಪದೇಶಗಳು ಮತ್ತು ಘೋಷಣೆಗಳನ್ನು ಅನಾವರಣಗೊಳಿಸುವ ಶಾಸನಗಳನ್ನು ಭಾರತದ ವಿವಿಧ ಸ್ಥಳಗಳಲ್ಲಿ ನೋಡಬಹುದಾಗಿದೆ.