ವಿಂಧ್ಯಾಚಲದ ಪೋಷಕ ದೇವಿ ವಿಂಧ್ಯಾವಾಸಿನಿ ಹುಟ್ಟಿದ ದಿನದಂದು ವಿಂಧ್ಯಾವಾಸಿನಿ ಜಯಂತಿ ಸಮಾರೋಹ ನಡೆಯುತ್ತದೆ ಮತ್ತು ಈ ಪ್ರದೇಶದ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಆಚರಣೆಗಳನ್ನು ಕೂಡ ಮಾಡಲಾಗುತ್ತದೆ. 1971 ಉತ್ತರ ಪ್ರದೇಶ ಸರ್ಕಾರದಿಂದ ಈ ಹಬ್ಬವನ್ನು ಆಚರಣೆಗೆ ತರಲಾಯಿತು.
ಈ ಹಬ್ಬದಲ್ಲಿ ರಾಜ ಕನ್ನಿತ್ ನರೇಶನ ಮಗಳು ಕಲಾಜಿಯ ಜೀವನ ಶೈಲಿಯನ್ನು ನೆನಪಿಸಲಾಗುತ್ತದೆ. ನಂಬಿಕೆಯ ಪ್ರಕಾರ, ರಾಜಕುಮಾರಿಯು ತನ್ನ ಗಂಡನಿಂದ ಬೇರ್ಪಟ್ಟಿದ್ದಳು. ಆದರೂ ಆತನ ನೆನಪಿನಲ್ಲಿ ತನ್ನ ಜೀವಮಾನವನ್ನೆಲ್ಲ ಹಾಡುತ್ತಾ ಕಳೆದಳು.
ಈ ಹಬ್ಬವು ರಾಜ್ಯದ ಜನಪ್ರಿಯ ಗಾಯನ ಕಲಾವಿದರು ಮತ್ತು ಜನಪದ ಗಾಯಕರನ್ನು ಆಕರ್ಷಿಸುತ್ತದೆ. ಈ ಸಮಯದಲ್ಲಿ ಅವರು ಹಾಡುವುದರ ಜೊತೆಗೆ ನೃತ್ಯವನ್ನು ಮಾಡಿ ಜನರ ಮೆಚ್ಚುಗೆ ಗಳಿಸುತ್ತಾರೆ. ಬೇಗಂ ಅಕ್ತರ್ ಮತ್ತು ಇತರ ಶಾಸ್ತ್ರೀಯ ಗಾಯಕರಿಂದ ಜನಪ್ರಿಯಗೊಂಡ ಕಜ್ರಿ ಮೂಲತಃ ಈ ಪ್ರದೇಶದ್ದು ಎಂದು ನಂಬಲಾಗಿದೆ.