ವಿಂಧ್ಯಾಚಲದ ಮುಂಗೇರ್ ಎಂಬಲ್ಲಿ ಮಿನಿ ಪರ್ವತ ಮತ್ತು ವಿಧ್ಯಾ ಕುಂಡ ಎಂಬ ಸಣ್ಣ ಬೆಟ್ಟದ ಹತ್ತಿರದಲ್ಲಿ ಈ ಸೀತಾ ಕುಂಡವಿದೆ. ಇದು ರಾಮಾಯಣದ ಕಥೆಯನ್ನು ಒಳಗೊಂಡಿದೆ. ರಾಮ, ಲಕ್ಷ್ಮಣ ಮತ್ತು ಸೀತೆ ಲಂಕೆಯಿಂದ ಗೆದ್ದು ಬರುವಾಗ ಸೀತೆಗೆ ಬಾಯಾರಿಕೆಯಾಯಿತು ಆಗ ಹತ್ತಿರದಲ್ಲೆಲ್ಲೂ ನೀರು ಸಿಗದುದರಿಂದ ಲಕ್ಷ್ಮಣನು ಬಾಣವನ್ನು ಭೂಮಿಗೆ ಬೀಟ್ಟನು, ಆಗ ನೀರು ಚಿಮ್ಮಿತು ಅದೇ ಸೀತಾ ಕುಂಡ ಎನ್ನಲಾಗಿದೆ.
ಸೀತಾ ಕುಂಡ ದೀರ್ಘಕಾಲದಿಂದಿರುವ ಕೊಳ. ಸೀತೆಗೆ ಸಂಬಂಧ ಪಟ್ಟದ್ದರಿಂದ ಸ್ಥಳೀಯರಿಗೆ ಮತ್ತು ಪ್ರವಾಸಿಗರಿಗೆ ಇದು ಯಾತ್ರಾ ಸ್ಥಳವಾಗಿದೆ. ಬೆಟ್ಟಗಳ ನಡುವೆ ಈ ಸುಂದರ ಕೊಳ ಇರುವುದರಿಂದ ಭಕ್ತರಲ್ಲಿ ಪೂಜ್ಯ ಭಾವನೆ ಹೊಂದಿದ್ದು, ಇದನ್ನು ಭಕ್ತಾದಿಗಳು ತೀರ್ಥವಾಗಿ ಬಳಸುತ್ತಾರೆ. ಈ ಕೊಳವನ್ನು ತಲುಪಲು 48 ಮೆಟ್ಟಿಲುಗಳ ಮೂಲಕ ಬೆಟ್ಟವನ್ನು ಹತ್ತಬೇಕಾಗುತ್ತದೆ. ಹನುಮಂತ, ಜಾನಕಿ ರಾಮ, ದುರ್ಗಾ ದೇವಿಗೆ ಸಂಬಂಧಿಸಿದ ದೇವಾಲಯಗಳು ಕೂಡ ಈ ಬೆಟ್ಟದ ಹತ್ತಿರದಲ್ಲಿವೆ. ಚೌರಾಸಿ ಪರಿಕ್ರಮ, ರಾಮನವಮಿ, ಶ್ರಾವಣಗಳಲ್ಲಿ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಇಲ್ಲಿ ಸೇರುತ್ತಾರೆ.