ವಿಂಧ್ಯಾವಾಸಿನಿ ದೇವಾಲಯದಿಂದ 3 ಕಿ.ಮೀ ಮತ್ತು ಮಿರ್ಜಾಪುರದಿಂದ 8 ಕಿ.ಮೀ ಅಂತರದಲ್ಲಿರುವ ವಿಂಧ್ಯಾಚಲದಲ್ಲಿರುವ ರಾಮ ಗಯಾ ಘಾಟ್ ನಲ್ಲಿ ಈ ದೇವಾಲಯವಿದೆ. ರಾಮನು ಶಿವನಿಗೆ ಅರ್ಪಿಸಿದ ಪೂಜೆ ಮತ್ತು ಶ್ರದ್ಧೆಯ ಪ್ರತೀಕವಾಗಿ ಈ ದೇವಾಲಯವಿದೆ. ರಾಮನು ವಸಿಷ್ಠ ಗುರುವಿನ ಮಾರ್ಗದರ್ಶನದಂತೆ ಇದನ್ನು ಕಟ್ಟಿ ಶಿವ ಲಿಂಗವನ್ನು ಪ್ರತಿಷ್ಠಾಪಿಸಿದ ಎಂದು ನಂಬಲಾಗಿದೆ.
ಈ ದೇವಾಲಯ ವಿಂಧ್ಯಾವಾಸಿನಿ ದೇವಾಲಯ ಮತ್ತು ಅಷ್ಟಭುಜ ದೇವಾಲಯದ ಮಧ್ಯೆಯಿದೆ. ಈ ಮೂರೂ ದೇವಾಲಯಗಳು ಸೇರಿ ಮಹಾತ್ರಿಕೋನ ಎಂದು ಕರೆಯಲ್ಪಟ್ಟಿದೆ. ಭಕ್ತಾದಿಗಳು ಈ 3 ದೇವಾಲಯದ ಸುತ್ತ ಸುತ್ತು ತಿರುಗುವುದು ಪವಿತ್ರ ಎಂದು ಪರಿಗಣಿಸಿದ್ದು ಇದನ್ನು ತ್ರಿಲೋಕ ಪರಿಕ್ರಮ ಎಂದು ಕರೆಯಲಾಗಿದೆ. ಜಾನಪದ ಕಥೆಯ ಪ್ರಕಾರ, ರಾಮನು ಗೌರವ ಪೂಜೆಯ ನಂತರ ವಿಂಧ್ಯಾವಾಸಿನಿ ದೇವಾಲಯಕ್ಕೆ ಹೋದನು ಎಂದು ಹೇಳಲಾಗುತ್ತದೆ. ರಾಮನ ಉದಾಹರಣೆಯಂತೆ ಆತನ ತಮ್ಮ ಲಕ್ಷ್ಮಣನು ಕೂಡ ಲಕ್ಷ್ಮಣೇಶ್ವರ ಮಹಾದೇವ ದೇವಾಲಯವನ್ನು ಸ್ಥಾಪಿಸಿದ್ದು ಇದು ಹತ್ತಿರದಲ್ಲಿಯೇ ಇದೆ.