ಉಂದವಲ್ಲಿ ಗುಹೆಗಳು ವಿಜಯವಾಡ ನಗರದಿಂದ 6 ಕೀ. ಮಿ ಅಂತರದಲ್ಲಿ ನೆಲೆಗೊಂಡಿದೆ. ಇದು ವಿಜಯವಾಡದ ನೈಋತ್ಯ ಭಾಗ. ಈ ಗುಹೆಗಳನ್ನು ಮರಳುಗಲ್ಲಿನ ಬೆಟ್ಟಗಳನ್ನು ಕತ್ತರಿಸಿ ನಿರ್ಮಾಣ ಮಾಡಲಾಗಿದೆ. ಈ ಗುಹೆಗಳು ಪ್ರವಾಸಿಗರನ್ನು ಕ್ರಿ.ಶ 4 ಹಾಗೂ 5 ನೇ ಶತಮಾನಗಳ ಹಿಂದಕ್ಕೆ ಕರೆದೊಯ್ಯುತ್ತವೆ. ಈ ಗುಹೆಗಳು ನಾಲ್ಕು ಮಹಡಿಯ ಎತ್ತರವನ್ನು ಹೊಂದಿದ್ದು ಭಗವಾನ್ ವಿಷ್ಣುವಿನ ನೆಲೆಯಾಗಿದೆ. ಈ ವಿಷ್ಣುವಿನ ಪ್ರತಿಮೆಯನ್ನು ಒಂದೇ ಗ್ರಾನೈಟ್ ಕಲ್ಲಿನಿಂದ ಕೆತ್ತನೆ ಮಾಡಲಾಗಿದೆ. ಅಲ್ಲದೇ ಈ ಗುಹೆಯ ಸುತ್ತ ಮುತ್ತ ಬೇರೆ ಬೇರೆ ದೇವ – ದೇವತೆಗಳ ವಿಗ್ರಹಗಳಿರುವ ಹಲವಾರು ಗುಹೆಗಳಿವೆ. ಅಷ್ಟೇ ಅಲ್ಲದೇ ಇಲ್ಲಿನ ಗುಹೆಗಳು ಬೌದ್ಧ ಮತೀಯ ಸನ್ಯಾಸಿಗಳ ವಿಗ್ರಹಗಳ ಶೈಲಿಗಳಲ್ಲಿಯೂ ವಿನ್ಯಾಸಗೊಂಡಿವೆ.
ಬೌದ್ಧ ಮತೀಯ ಸನ್ಯಾಸಿಗಳು ಅತೀತಾದ ಮಳೆ ಬೀಳುವ ಸಂದರ್ಭದಲ್ಲಿ ಈ ಗುಹೆಗಳಲ್ಲಿ ಆಶ್ರಯ ಪಡೆಯುತ್ತಿದ್ದರು ಎನ್ನಲಾಗುತ್ತದೆ. ಕೃಷ್ಣಾ ನದಿಯ ಎದುರಿನಲ್ಲಿ ಗುಹೆಗಳನ್ನು ಕಾಣಬಹುದು. ಇಲ್ಲಿನ ಸೊಬಗನ್ನು ನೋಡಲು ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ದಿನೆ ದಿನೆ ಹೆಚ್ಚುತ್ತಲೆ ಇದೆ.