ಸುಬ್ರಹ್ಮಣ್ಯ ಸ್ವಾಮಿ ದೇವಾಲಯವು ವಿಜಯವಾಡಾ ನಗರದ ಪ್ರಮುಖ ದೇವಾಲಯಗಳಲ್ಲಿ ಒಂದು. ನಗರಕ್ಕೆ ಹಾಗೂ ಕೃಷ್ಣಾ ನದಿಗೆ ಅಭಿಮುಖವಾಗಿರುವ ಇದು ಇಂದ್ರಕೀಲಾದ್ರಿ ಬೆಟ್ಟದ ಮೇಲಿದೆ. ಈ ದೇವಸ್ಥಾನದ ಅತ್ಯಂತ ಪ್ರಮುಖ ಹಬ್ಬವೆಂದರೆ ’ಸ್ಕಂದ ಷಷ್ಟಿ’ ಹಬ್ಬ. ಈ ಸಮಯದಲ್ಲಿ ಇಲ್ಲಿಗೆ ಭಕ್ತ ಸಾಗರವೇ ಹರಿದು ಬರುತ್ತದೆ. ಪ್ರಸಿದ್ಧ ಇಡಿಪಿಳಿ/ಲಿ ಕುಟುಂಬದವರಿಂದ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನವು ನಿರ್ವಹಿಸಲ್ಪಡುತ್ತಿದೆ.