ಶ್ರೀ ನಗರಳಾ ಮಹಾಲಕ್ಷ್ಮೀ ಅಮ್ಮಾವರಿ ದೇವಾಲಯವನ್ನು ಚಿತ್ತಿನಗರ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯವನ್ನು ನಗರಲಾ/ಳಾ ಸಮುದಾಯದವರಿಂದ ನಿರ್ವಹಿಸಲ್ಪಟ್ಟಿದೆ ಆದ್ದರಿಂದ ದೇವಾಲಯಕ್ಕೆ ಈ ಸಮುದಾಯದ ಹೆಸರನ್ನೇ ಇಡಲಾಗಿದೆ. ಶ್ರೀ ನಗರಳಾ ಮಹಾಲಕ್ಷ್ಮೀ ಅಮ್ಮಾವರಿ ದೇವಾಲಯವು ವಿಜಯವಾಡದಲ್ಲಿಯೇ ಅತ್ಯಂತ ಪ್ರಸಿದ್ಧ ದೇವಾಲಯ. ಈ ದೇವಾಲಯದಲ್ಲಿ ಪ್ರತಿ ವರ್ಷ ದಸರಾ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು ಈ ಸಮಯದಲ್ಲಿ ಇಲ್ಲಿಗೆ ಸಹಸ್ರಾರು ಸಂಖ್ಯೆಯ ಭಕ್ತರ ಗುಂಪು ಹಬ್ಬದಲ್ಲಿ ಪಾಲ್ಗೊಂಡು ತಮ್ಮ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಈ ಸಮಯದಲ್ಲಿ ಇಲ್ಲಿಗೆ ಪ್ರವಾಸಕ್ಕೆ ಬರುವುದು ಸೂಕ್ತ.