ವೇಣೂರಿನ ಪೂರ್ವ ದಿಕ್ಕಿನಲ್ಲಿ ಕಾಣಸಿಗುವ ಪಾರ್ಶ್ವನಾಥ ಸ್ವಾಮಿ ಬಸದಿಯು ಪ್ರವಾಸಿಗರು ಅನ್ವೇಷಿಸಬಯಸುವ ಮತ್ತೊಂದು ತಾಣವಾಗಿದೆ. ಹೊಳೆಯುತ್ತಿರುವ ಕಂಚಿನ ಪಾರ್ಶ್ವನಾಥ ಸ್ವಾಮಿಯ ವಿಗ್ರಹವು ನೋಡಲು ಸೊಗಸಾಗಿದ್ದು, ಈ ಬಸದಿಯ ಪ್ರಮುಖ ಆಕರ್ಷಣೆಯಾಗಿದೆ. ಏಕಶಿಲಾ ಗೊಮ್ಮಟೇಶ್ವರ ಪ್ರತಿಮೆಯ ಹಿಂಬಾಗದಲ್ಲೆ ಈ ಬಸದಿಯನ್ನು ಕಾಣಬಹುದು. ದಾಖಲೆಗಳ ಪ್ರಕಾರ ಹೇಳುವುದಾದರೆ ಈ ಬಸದಿಯ ಜೀರ್ಣೋದ್ಧಾರ ಕಾರ್ಯವು 1936 ರಲ್ಲೆ ಮೂಡಬಿದ್ರಿ ಜೈನ ಮಠದ ಪೂಜ್ಯರಾದ ಸ್ವಸ್ತಿ ಶ್ರೀ ಚಾರುಕೀರ್ಥಿ ಭಟ್ಟಾರಕ ಸ್ವಾಮಿಜಿ ಅವರಿಂದ ನೆರವೇರಲ್ಪಟ್ಟಿದೆ.