ಸಮಯಾವಕಾಶವಿದ್ದರೆ, ಬಾಹುಬಲಿ ಪ್ರತಿಮೆಯ ಪಶ್ಚಿಮ ಭಾಗದಲ್ಲಿರುವ ಈ ಬಸದಿಗೂ ಕೂಡ ಪ್ರವಾಸಿಗರು ಭೇಟಿ ನೀಡಬಹುದು. ಎಡ ಬಸದಿ ಎಂದೂ ಕರೆಯಲ್ಪಡುವ ಈ ಬಸದಿಯು ಮಲ್ಲಿ ದೇವಿ ಮತ್ತು ಪಾಂಡ್ಯಕ್ಕ ದೇವಿ (ತಿಮ್ಮಣ್ಣಜಿಲನ ಪತ್ನಿಯರು) ಅವರಿಂದ 1604 ರಲ್ಲಿ ನಿರ್ಮಾಣಗೊಂಡಿದೆ. ಚಾರುಕೀರ್ಥಿ ಸ್ವಾಮಿಯ ಆಶೀರ್ವಾದವನ್ನು ಪಡೆದ ನಂತರ ರಾಣಿಯರು ಈ ಬಸದಿಯ ನಿರ್ಮಾಣ ಮಾಡಲು ತಿರ್ಮಾನಿಸಿದರು. ಚಂದ್ರನಾಥ ಸ್ವಾಮಿಯ ವಿಗ್ರಹವನ್ನು ಇಲ್ಲಿ ಕಾಣಬಹುದು.