ಶ್ರೀಪುರಂ ಚಿನ್ನದ ದೇವಾಲಯ ವೆಲ್ಲೂರಿನ ಮಲೈಕೊಡಿಯಲ್ಲಿ ಕಟ್ಟಲಾಗಿದೆ ಹಾಗೂ ಇದೊಂದು ಆಧ್ಯಾತ್ಮಿಕವಾಗಿ ಮಹತ್ವ ಹೊಂದಿರುವ ಸ್ಥಳವಾಗಿದೆ. ಈ ದೇವಾಲಯದ ಸಂಪೂರ್ಣ ವಿನ್ಯಾಸವನ್ನು ನಾರಾಯಣಿ ಅಮ್ಮ ಮಾಡಿದ್ದಾರೆ. ಇಲ್ಲಿನ ಮಹತ್ವವಾದ ಲಕ್ಷಣವೆಂದರೆ ಇಲ್ಲಿರುವ ಮಹಾಲಕ್ಷ್ಮಿ ದೇವಿ ದೇವಾಲಯ.
ಇಲ್ಲಿ ನೀವು ದೇವಾಲಯದ ಒಳ ಭಾಗ ಮತ್ತು ಹೊರಭಾಗಗಳೆರಡನ್ನೂ ಚಿನ್ನದಿಂದ ಮಾಡಿರುವುದನ್ನು ನೀವು ಕಾಣಬಹುದು. ಇಲ್ಲಿ ಸುಮಾರು ಒಂಭತ್ತರಿಂದ ಹದಿನೈದು ಪದರಗಳು ಚಿನ್ನದ ತಗಡುಗಳನ್ನು ಹೊಂದಿದೆ. ಹಾಗೂ ಇದರ ಮೇಲೆ ಕೈಯಿಂದ ವಿನ್ಯಾಸಗೊಳಿಸಲಾಗಿದೆ. ಇಲ್ಲಿರುವ ಚಿನ್ನದ ತಗಡುಗಳ ಮೇಲಿರುವ ಲೇಖಗಳು ವೇದಗಳ ಕಾಲದ ಹಲವು ವಿಷಯಗಳನ್ನು ಹೊಂದಿದೆ.
ಇಲ್ಲಿ ಭೇಟಿ ನೀಡುವ ಭಕ್ತಾದಿಗಳು ವಿಧಿಸಲಾದ ಶಿಸ್ತಿನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಸಣ್ಣ ಪ್ಯಾಂಟ್, ಮಿಡಿಗಳು ಹಾಗೂ ಕಾಪ್ರಿಸ್ ಅನ್ನು ಇಲ್ಲಿನ ಭೇಟಿಯ ವೇಳೆ ಧರಿಸಬೇಡಿ. ಮೊಬೈಲ್ ಫೊನ್ ಗಳು, ಕ್ಯಾಮೆರಾ ಹಾಗೂ ಇನ್ನಿತರ ಎಲೆಕ್ಟ್ರಾನಿಕ್ ಉತ್ಪನ್ನಗಳು, ತಂಬಾಕು, ಮದ್ಯ, ಮತ್ತು ದಹನಶೀಲ ವಸ್ತುಗಳನ್ನು ಇಲ್ಲಿಗೆ ತರಬಾರದು.
ಇಲ್ಲಿಗೆ ಭಕ್ತಾದಿಗಳು ಬೆಳಗ್ಗೆ ಎಂಟರಿಂದ ಸಂಜೆ ಎಂಟರ ತನಕ ವರ್ಷದ 365 ದಿನಗಳಲ್ಲೂ ಭೇಟಿ ನೀಡಬಹುದಾಗಿದೆ. ಇಲ್ಲಿ ಅಭಿಷೇಕ ನಡೆಯುವ ಸಮಯಗಳು ಬೆಳಗ್ಗೆ 4 ಹಾಗೂ 8 ಆರತಿ ಸೇವೆಯು ಸಂಜೆ 6 ಮತ್ತು 7 ಗಂಟೆಗೆ ನಡೆಯುತ್ತದೆ.