ಬಾಲಮುರುಗನ್ ದೇವರ ಆರಾಧನೆ ನಡೆಯುವ ರತ್ನಗಿರಿ ದೇವಾಲಯವು ಬಹಳ ಹಳೆಯ ಕಾಲದ ದೇವಾಲಯವಾಗಿದೆ. ಇದು ವೆಲ್ಲೂರಿನ ಗ್ರಾಮವೊಂದರ ಬೆಟ್ಟದ ಮೇಲೆ ಇದೆ. ಬಾಲಮುರುಗನ್ ಆದಿಮೈಗಲ್ ಈ ಬೆಟ್ಟದ ತುದಿಯನ್ನು ಅಭಿವೃದ್ಧಿಪಡಿಸಿದನು. ಇದರ ಜೊತೆಗೆ ಇಲ್ಲೇ ಒಂದು ಆಸ್ಪತ್ರೆ ಹಾಗೂ ಒಂದು ಶಾಲೆಯನ್ನೂ ಇಲ್ಲಿನ ಗ್ರಾಮಸ್ಥರ ಸಹಾಯದಿಂದ ಕಟ್ಟಿಸಿದನು.
ಇಲ್ಲಿನ ದೇವಾಲಯದ ಒಳಗಿನ ದಿವ್ಯವಾದ ಮೂರು ಶಕ್ತಿಗಳು ಇಲ್ಲಿನ ಜನರನ್ನು ಆಶೀರ್ವದಿಸುತ್ತದೆ ಎಂದು ಹೇಳುತ್ತಾರೆ. ಮೊದಲಯೆನಯದಾಗಿ ಮುರುಗನ್ ದೇವರ ರೂಪದಲ್ಲಿ ಎರಡನೆಯದಾಗಿ ಗುರು ಸ್ವಾಮಿ ಬಾಲಮುರುಗನ್ ಆದಿಮಾಯಿ ಯ ಅವತಾರದ ರೂಪದಲ್ಲಿ ಹಾಗೂ ಮೂರನೆಯದಾಗಿ ಭಕ್ತರ ರೂಪದಲ್ಲಿ. ಇಲ್ಲಿ ಪ್ರತಿ ದಿನ ಸಾವಿರಾರು ಭಕ್ತರು ಸ್ವಾಮಿ ಮುರುಗನ್ ಆಶೀರ್ವಾದವನ್ನು ಪಡೆಯಲು ಸಾಲುಗಟ್ಟಿ ನಿಂತಿರುತ್ತಾರೆ.
ಬೆಳಗ್ಗೆ 6 ರಿಂದ ಮಧ್ಯಾಹ 1 ರ ತನಕ ಮತ್ತು ಸಂಜೆ 4 ರಿಂದ ರಾತ್ರಿ 8 ರ ತನಕ ದರ್ಶನ ಪಡೆಯಬಹುದಾಗಿದೆ. ಅಭೀಷೇಕವನ್ನು ಬೆಳಗ್ಗೆ 6, ಮತ್ತು 10.30 ಮತ್ತು ಸಂಜೆ 5.30 ರ ಹೊತ್ತಿಗೆ ಪ್ರತಿ ದಿನ ನಡೆಸಲಾಗುತ್ತದೆ. ದೇವಾಲಯದ ಆಡಳಿತ ಅಧಿಕಾರಿಗಳನ್ನು ಭೇಟಿಯಾಗಬೇಕಾದರೆ ಬೆಳಗ್ಗೆ 9 ರಿಂದ ಮಧ್ಯಾಹ್ನ 1 ರ ತನಕ ಹಾಗೂ ಸಂಜೆ 3 ರಿಂದ 6 ರ ತನಕ ಬರಬಹುದಾಗಿದೆ.