ವರ್ಕಲಾದ ಶಿವಗಿರಿ ಮಠ ಕೇರಳಾದ ಪ್ರಸಿದ್ಧ ಸಮಾದಿಗಳಲ್ಲಿ ಒಂದು. ಇದೊಂದು ಕೊನೆಯ ವಿಶ್ರಾಂತಿ ಸ್ಥಳ ಎನ್ನಬಹುದು. ಅಥವಾ ಹೆಸರುವಾಸಿ ಸಮಾಜ ಸೇವಕ, ತತ್ವಜ್ಞಾನಿ ಶ್ರೀ ನಾರಾಯಣ ಗುರು ಅವರ ಸಮಾದಿ ಇರುವ ಸ್ಥಳ ಶಿವಗಿರಿ ಮಠ. ಶ್ರೀ ಗುರುವು,ತನ್ನ ಜೀವಿತಾವಧಿಯಲ್ಲಿ ’ಒಂದೇ ಜಾತಿ ಒಂದೇ ಧರ್ಮ, ಹಾಗೂ ಒಂದೇ ದೇವರು’ ಎಂಬ ಸಂದೇಶವನ್ನು ಸಾರಿದವರು.
ಈ ಮಠವನ್ನು 1904ರಲ್ಲಿ ಸ್ಥಾಪಿಸಲಾಗಿದ್ದು, ಈಗಲೂ ಸಾವಿರಾರು ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ. ಅದರಲ್ಲೂ ವಿಶೇಷವಾಗಿ ಡಿಸೆಂಬರ್ 30 ಹಾಗೂ ಜನವರಿ 01 ರಂದು ಶಿವಗಿರಿ ಯಾತ್ರಾರ್ಥಿಗಳಿಗೆ ಸಂಭ್ರಮದ ದಿನ. ಪ್ರತಿ ವರ್ಷ ಅಗಸ್ಟ್ ಹಾಗೂ ಸೆಪ್ಟಂಬರ್ ನಲ್ಲಿ ಶ್ರೀ ಗುರು ಜಯಂತಿ ಹಾಗೂ ಸಮಾದಿ ದಿನವನ್ನು ಅತ್ಯಂತ ಗೌರವ ಪೂರ್ವಕವಾಗಿ ಆಚರಿಸಲಾಗುತ್ತದೆ. ವರ್ಷದ ಈ ತಿಂಗಳುಗಳಲ್ಲಿ ಮಠದಲ್ಲಿ ಸಾಂಸ್ಕೃತಿಕ ಪ್ರದರ್ಶನಗಳು, ಸಭೆಗಳು, ಸಮುದಾಯ ಭೋಜನ, ಸಾರ್ವಜನಿಕ ಸಭೆಗಳು ಹಾಗೂ ವಿಶೇಷ ಸೇವೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಈ ಶಿವಗಿರಿ ಮಠವು ಬೆಳಿಗ್ಗೆ 5.30 ರಿಂದ 12 ವರೆಗೆ ಹಾಗೂ ಸಾಯಂಕಾಲ 4.30 ಹಾಗೂ 6.30 ರಿಂದ ವರೆಗೆ ತೆರೆದಿರುತ್ತದೆ.
ಶಿವಗಿರಿ ಮಠವು ವರ್ಕಲಾ ಪಟ್ಟಣದಿಂದ 3 ಕೀ.ಮಿ ದೂರದಲ್ಲಿ ಸ್ಥಾಪಿತವಾಗಿದೆ. ಈ ಮಠವು 200 ಎಕರೆ ಪ್ರದೇಶದಲ್ಲಿ ವ್ಯಾಪಕವಾಗಿದೆ.