ಜನಾರ್ಧನ ಸ್ವಾಮಿ ದೇವಾಲಯವು ಭಾರತದ ಪ್ರಸಿದ್ಧ ವೈಷ್ಣವ ದೇವಾಲಯಗಳಲ್ಲೊಂದು. ಇದನ್ನು ’ದಕ್ಷಿಣದ ಬನಾರಸ್’ ಎಂದು ಕರೆಯಲಾಗುತ್ತಿದ್ದು, ಈ ದೇವಾಲಯವು 2000 ವರ್ಷ ಹಳೆಯದಾದ ದೇವಾಲಯವಾಗಿದೆ. ಈ ದೇವಾಲಯವನ್ನು ಪಾಪನಾಶಂ ಬೀಚ್ ನ ಹತ್ತಿರದಲ್ಲಿ ಕಾಣಬಹುದು. ಒಂದು ಪುರಾತನ ಹೇಳಿಕೆಯ ಪ್ರಕಾರ ಈ ದೇವಾಲಯದಲ್ಲಿರುವ ಹಳೆಯ ಗಂಟೆಯೊಂದನ್ನು ಡಚ್ ನಾವೆಯ ನಾವಿಕ ನೀಡಿದ್ದಾನೆಂದೆ ಹೇಳಲಾಗುತ್ತಿದ್ದು ಇದು ಇಲ್ಲಿ ಬರುವ ಹಲವಾರು ಪ್ರವಾಸಿಗಳ ಆಸಕ್ತಿ ಕೆರಳಿಸುವ ಅಂಶವಾಗಿದೆ.
ಶ್ರೀ ಕೃಷ್ಣನು ಈ ಜನಾರ್ಧನ ಸ್ವಾಮಿ ದೇವಾಲಯದ ದೇವರು. ಪ್ರತಿ ವರ್ಷ ಆಚರಿಸುವ ಅರತ್ತು ಹಬ್ಬವು ಇಲ್ಲಿ ಆಚರಿಸಲಾಗುವ ಸಂಭ್ರಮದ ಹಬ್ಬ. ಹಿಂದೂ ತಿಂಗಳಾದ ಮೀನಂ ತಿಂಗಳಿನಲ್ಲಿ ಹತ್ತು ದಿನಗಳ ಕಾಲ ಈ ಹಬ್ಬವನ್ನು ಆಚರಿಸಲಾಗುತ್ತದೆ. ಅರ್ತ್ತು /ಅರತ್ತು ಹಬ್ಬದ ಆಚರಣೆಯ ಸಂದರ್ಭದಲ್ಲಿ ಸಹಸ್ರಾರು ಭಕ್ತಾದಿಗಳು ದೇಶದ ಮೂಲೆ ಮೂಲೆಗಳಿಂದ ಇಲ್ಲಿಗೆ ಆಗಮಿಸುತ್ತಾರೆ. ಈ ದೇವಾಲಯವು ಹಿಂದುಗಳಿಗೆ ಮಾತ್ರ ಮೀಸಲಾಗಿದೆ. ಇಲ್ಲಿನ ಮುಖ್ಯ ದೇವಾಲಯದ ಒಳಗಡೆ ಹಿಂದು ಧರ್ಮಕ್ಕೆ ಸೇರದವರು ಪ್ರ ವೇಶಿಸುವಂತಿಲ್ಲ. ಈ ದೇವಾಲಯದ ಹೊರವಲಯಗಳಿಗೆ ಅವರು ತಿರುಗಾಡಬಹುದಷ್ಟೇ. ಹಿಂದುಗಳು ಈ ದೇವಾಲಯದ ಒಳಗೆ ಪ್ರಾರ್ಥನೆಯನ್ನು ಸಲ್ಲಿಸಬಹುದಾಗಿದೆ. ದೇವಾಲಯದ ಕೊಳದಲ್ಲಿರುವ ನೀರನ್ನು ತಲೆಯ ಮೇಲೆ ಹಾಕಿಕೊಂಡರೆ ಸಕಲ ಪಾಪಗಳೂ ಪರಿಹಾರವಾಗುತ್ತವೆ ಎಂಬ ನಂಬಿಕೆ ಜನರದ್ದು.
ದಕ್ಷಿಣ ಭಾರತದ ವಾಸ್ತು ಶಿಲ್ಪದ ಶೈಲಿಯಲ್ಲಿ ಈ ದೇವಾಲಯವನ್ನು ಕಟ್ಟಲಾಗಿದೆ. ಹಾಗೂ ವರ್ಕಲಾ ರೈಲ್ವೆ ನಿಲ್ದಾಣದಿಂದ 3 ಕೀ.ಮಿ ದೂರದಲ್ಲಿ ಜನಾರ್ಧನ ದೇವಾಲಯವನ್ನು ಕಾಣಬಹುದಾಗಿದೆ.