ಅಂಬೆರ್ ಅಂದರೆ ಈಗಿನ ಅಜ್ಮೇರ್ ನ ಸವಾಯಿ ರಾಜ ಮಾನ್ ಸಿಂಗ್ 1585ರಲ್ಲಿ ಈ ಘಾಟ್ ನ್ನು ನಿರ್ಮಿಸಿದ್ದ. ಮನ್ ಮಂದಿರ್ ಘಾಟ್ ನ್ನು ಮೊದಲು ಸೋಮೇಶ್ವರ ಘಾಟ್ ಎಂದು ಕರೆಯಲಾಗುತ್ತಿತ್ತು. 1730ರಲ್ಲಿ ಮಹಾರಾಜ ಜೈ ಸಿಂಗ್ ಇಲ್ಲೊಂದು ವೀಕ್ಷಣಾಲಯವನ್ನು ನಿರ್ಮಿಸಿದ್ದ. ಮಹಾರಾಜ ಜೈಸಿಂಗ್ ದೆಹಲಿ ಮತ್ತು ಜೈಪುರದಲ್ಲಿ ಪ್ರಸಿದ್ಧ ಜಂತರ್ ಮಂತರ್ ನ್ನು ಕೂಡ ನಿರ್ಮಿಸಿದ್ದ.
ವೀಕ್ಷಣಾಲಯದಲ್ಲಿರುವ ಕಿಟಕಿಗಳಿಗೆ ಆಕರ್ಷಕ ಗಾಜುಗಳನ್ನು ಅಳವಡಿಸಲಾಗಿದೆ. ಇಲ್ಲಿ ನಾಲ್ಕು ಖಗೋಳ ಉಪಕರಣಗಳಿದೆ ಮತ್ತು ಇಂದು ಕೂಡ ಇವುಗಳು ಉತ್ತಮ ಸ್ಥಿತಿಯಲ್ಲಿದ್ದು, ಅಂದಿನ ಕಾಲದಲ್ಲಿ ಇದ್ದ ಖಗೋಳ ಜ್ಞಾನಕ್ಕೆ ಇದು ಸಾಕ್ಷಿಯಾಗಿದೆ. 1850ರಲ್ಲಿ ಈ ವೀಕ್ಷಣಾಲಯವನ್ನು ನವೀಕರಿಸಲಾಗಿತ್ತು ಮತ್ತು 1912ರಲ್ಲಿ ಜೈಪುರದ ರಜಪುತ ಮನೆತನದವರು ಇದನ್ನು ಮತ್ತೊಮ್ಮೆ ನವೀಕರಿಸಿದರು.
ಮನ್ ಮಂದಿರ ಘಾಟ್ ನಲ್ಲಿ ಸ್ಥುಲದಂತ ವಿನಾಯಕ, ರಾಮೇಶ್ವರ ಮತ್ತು ಸೋಮೇಶ್ವರ ದೇವಾಲಯದಂತಹ ಹಲವಾರು ಪ್ರಾಮುಖ್ಯ ಮಂದಿರಗಳಿವೆ. ಸೋಮೇಶ್ವರ ಮಂದಿರದಲ್ಲಿ ಸೋಮೇಶ್ವರ ಲಿಂಗವಿದ್ದು, ಇದು ಗುಜರಾತ್ ನ ಸೋಮನಾಥ ಮಂದಿರದ ಪ್ರತಿರೂಪವಾಗಿದೆ. ಭಾರತದಲ್ಲಿರುವ 9 ಜ್ಯೋತಿರ್ಲಿಂಗಗಳಲ್ಲಿ ಇದು ಒಂದಾಗಿದೆಯೆಂದು ನಂಬಲಾಗಿದೆ.