ಬ್ರಿಟಿಷರ ವಿರುದ್ಧ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮ ಗಾಂಧಿ ಅವರ ಹೆಸರನ್ನು 1995ರಲ್ಲಿ ಕಾಶಿ ವಿದ್ಯಾಪೀಠಕ್ಕೆ ಇಡಲಾಗಿತ್ತು.ರಾಷ್ಟ್ರವಾದಿ ಮತ್ತು ಶಿಕ್ಷಣತಜ್ಞ ಬಾಬು ಶಿವಪ್ರಸಾದ್ ಗುಪ್ತಾ ಅವರು ಮಹಾತ್ಮ ಗಾಂಧಿ ಮತ್ತು ಸಮಾಜ ಸೇವಕ ಡಾ. ಭಗ್ವಾನ್ ದಾಸ್ ನೆರವಿನಿಂದ ಇದನ್ನು ನಿರ್ಮಿಸಿದ್ದರು. ಡಾ. ಭಗ್ವಾನ್ ದಾಸ್ ಅವರು ಇದರ ಮೊದಲ ಉಪಕುಲಪತಿಯಾಗಿದ್ದರು. ಬನಾರಸ್ ನ ಭಾರತ್ ಮಾತಾ ದೇವಾಲಯದ ಸ್ಥಾಪನೆ ಹಿಂದೆ ಕೂಡ ಬಾಬು ಶಿವ ಪ್ರಸಾದ್ ಶ್ರಮವಿತ್ತು.
ವಿದ್ಯಾಪೀಠವು 1963ರಲ್ಲಿ ಯುಜಿಸಿಯಿಂದ ಡೀಮ್ಡ್ ಯೂನಿವರ್ಸಿಟಿ ಮಾನ್ಯತೆ ಪಡೆದುಕೊಂಡಿದೆ. 1921ರ ಫೆಬ್ರವರಿ 10ರ ಬಸಂತ ಪಂಚಮಿಯಂದು ಭಗವದ್ಗೀತೆ ಮತ್ತು ಖುರಾನ್ ಓದುವ ಮೂಲಕ ಮಹಾತ್ಮ ಗಾಂಧಿ ಅವರು ವಿಶ್ವವಿದ್ಯಾನಿಯಲವನ್ನು ಉದ್ಘಾಟಿಸಿದ್ದರು.
ಮೊದಲ ಆಡಳಿತ ಮಂಡಳಿಯಲ್ಲಿ ಮಹಾತ್ಮ ಗಾಂಧಿ, ಲಾಲಾ ಲಜಪತ್ ರಾಯ್, ಪಂಡಿತ್ ಜವಾಹರ್ ಲಾಲ್ ನೆಹರೂ, ಜಮುನಾ ಲಾಲ್ ಬಜಾಜ್, ಆಚಾರ್ಯ ನರೇಂದ್ರ ದೇವ್, ಪಿ.ಡಿ. ಟಂಡನ್, ಬಾಬು ಶಿವ ಪ್ರಸಾದ್ ಗುಪ್ತಾ ಮತ್ತು ಡಾ. ಭಗ್ವಾನ್ ದಾಸ್ ಅವರಿದ್ದರು.
ವಿದ್ಯಾಪೀಠದ ಹಳೆ ವಿದ್ಯಾರ್ಥಿಗಳಲ್ಲಿ ಚಂದ್ರಶೇಖರ್ ಅಜಾದ್, ಪಂಡಿತ್ ಕಮಲಪತಿ ತ್ರಿಪಾಠಿ, ಲಾಲ್ ಬಹದ್ದೂರ್ ಶಾಸ್ತ್ರಿ, ಬಿ.ವಿ. ಕೆಸ್ಕರ್, ಮನನನಾಥ್ ಗುಪ್ತಾ, ಭೋಲಾ ಪಸ್ವಾನ್ ಶಾಸ್ತ್ರಿ, ರಾಮಕೃಷ್ಣ ಹೆಗ್ಡೆ ಮತ್ತು ಪ್ರೊ. ರಾಜ ರಾಂ ಶಾಸ್ತ್ರಿ ಅವರಿದ್ದರು.