ಜುನಾ ಅಖಾಡ್ ನಲ್ಲಿ ನೆಲೆನಿಂತಿರುವ ಹನುಮಾನ್ ಘಾಟ್ ವಾರಣಾಸಿಯ ಜನಪ್ರಿಯ ಧಾರ್ಮಿಕ ತಾಣ. ಇದನ್ನು ಮೊದಲು ರಾಮೇಶ್ವರಂ ಘಾಟ್ ಎಂದು ಕರೆಯಲಾಗುತ್ತಿತ್ತು. ತನ್ನ ಭಕ್ತ ಹಾಗೂ ಬಂಟ ಹನುಮಂತನಿಗಾಗಿ ಶ್ರೀರಾಮ ಈ ಘಾಟ್ ನ್ನು ನಿರ್ಮಿಸಿದನೆಂಬ ನಂಬಿಕೆಯಿದೆ.
ಹನುಮಂತ ಒಳ್ಳೆಯ ದೇಹದಾರ್ಢ್ಯವನ್ನು ಹೊಂದಿದ್ದ ಕಾರಣಕ್ಕಾಗಿ ಈ ಘಾಟ್ ಗೆ ದೇಹದಾರ್ಢ್ಯಪಟುಗಳು, ಕುಸ್ತಿಪಟುಗಳಿಗೆ ನೆಚ್ಚಿನ ತಾಣವಾಗಿದೆ. ಕುಸ್ತಿಪಟುಗಳು ಮತ್ತು ದೇಹದಾರ್ಢ್ಯಪಟುಗಳು ವ್ಯಾಯಾಮ ಮತ್ತು ಪ್ರದರ್ಶನ ನೀಡುವ ಸ್ಥಳವನ್ನು ಅಖಾಡವೆನ್ನುತ್ತಾರೆ.
ಕೃಷ್ಣನ ಭಕ್ತರಾಗಿದ್ದ ವೈಷ್ಣವ ಪಂಥದ ಸಂತ ವಲ್ಲಭಾಚಾರ್ಯರು ಹನುಮಾನ್ ಘಾಟ್ ನಲ್ಲಿ ವಾಸವಾಗಿದ್ದರು. ರಾಮಾಯಣವನ್ನು ಮತ್ತೆ ಬರೆದಿದ್ದ ಸಂತ-ಕವಿ ತುಳಸಿ ದಾಸ ಅವರು ನಿರ್ಮಿಸಿದ ಮಂದಿರವೂ ಈ ಘಾಟ್ ನಲ್ಲಿದೆ. ವಾರಣಾಸಿಯ ಶ್ರೀ ಕಾಂಚಿ ಕಾಮಕೋಟಿ ಪೀಠ ಶ್ರೀ ಶಂಕರಾಚಾರ್ಯ ಮಠ ಈ ಘಾಟ್ ನಲ್ಲಿದೆ. ಶ್ರೀ ಕಾಮಕೋಟೀಶ್ವರ ಮಂದಿರವನ್ನು ಈ ಮಠದವರು ಸ್ಥಾಪಿಸಿದ್ದು, ಇಲ್ಲಿ ಯಾವಾಗಲೂ ಪೂಜಾ ಕಾರ್ಯಗಳು ನಡೆಯುತ್ತಿರುತ್ತದೆ.