ಗಣಪತಿ ಮಂದಿರ ಅಥವಾ ಚಿಟ್ಟಿ ವಿನಾಯಗರ್ ಮಂದಿರ ವಾಲ್ಪಾರೈನಿಂದ ಕೇವಲ ಮೂರು ಕಿ.ಮೀ. ದೂರದಲ್ಲಿದೆ. ಜಯಶ್ರೀ ಟೀ ಇಂಡಸ್ಟ್ರೀ ಈ ದೇವಳದ ಆಡಳಿತವನ್ನು ನೋಡಿಕೊಳ್ಳುತ್ತಿದೆ. ಮುಂಬಯಿಯ ಸಿದ್ದಿವಿನಾಯಕ ಮಂದಿರ ಮೂರ್ತಿಯಂತೆ ಇಲ್ಲಿನ ಗಣಪತಿಯ ಮೂರ್ತಿಯೂ ಇದೆ. ಮೂರ್ತಿಯ ಮತ್ತೊಂದು ವಿಶೇಷವೆಂದರೆ ಇದನ್ನು ಕೇವಲ ಒಂದು ತುಂಡು ಮಾರ್ಬಲ್ ನಲ್ಲಿ ಕೆತ್ತಲಾಗಿದೆ. ಮಂದಿರಕ್ಕೆ ಪ್ರಯಾಣಿಸುವ ವೇಳೆ ಸುತ್ತಮುತ್ತಲಿನ ಟೀ ತೋಟವು ಕಣ್ಮನ ಸೆಳೆಯುತ್ತದೆ. ಚಹಾ ತೋಟ ಮತ್ತು ಜಲಪಾತದ ಹಿಂದಿರುವ ಈ ಮಂದಿರ ಪ್ರಶಾಂತ ವಾತಾವರಣ ಬಯಸುವವರನ್ನು ಹೆಚ್ಚು ಆಕರ್ಷಿಸುತ್ತದೆ.