ವಾಲ್ಪಾರೈ ಗಿರಿಧಾಮದಿಂದ ಪೂರ್ವಕ್ಕೆ 26 ಕಿ.ಮೀ. ಸಾಗಿದರೆ ಸಿಗುವುದೇ ಚಿನ್ನಕಲಾರ್ ಜಲಪಾತ. ಇದು ದೇಶದಲ್ಲೇ ಅತೀ ಹೆಚ್ಚು ಮಳೆಯಾಗುವ ಎರಡನೇ ಪ್ರದೇಶ. ಇದನ್ನು ದಕ್ಷಿಣದ ಚಿರಾಪೂಂಜಿಯೆಂದೇ ಕರೆಯುತ್ತಾರೆ. ಈ ಜಲಪಾತದ ಮೇಲೆ ಕಟ್ಟಿರುವಂತಹ ತೂಗು ಸೇತುವೆ ಪ್ರವಾಸಿಗಳ ಸಾಹಸ ಪ್ರವೃತ್ತಿಗೆ ಸವಾಲಾಗಿದೆ. ಈ ಜಲಪಾತದಿಂದ ಬೀಳುವ ನೀರು ಸಿಂಹ ಘರ್ಜಿಸಿದಂತಿರುತ್ತದೆ. ವಾಲ್ಪಾರೈನಿಂದ ಇಲ್ಲಿಗೆ ರಸ್ತೆ ಮಾರ್ಗದ ಮೂಲಕ ಪ್ರಯಾಣಿಸಿದರೆ ಅದೇ ಒಂದು ಮೈನವಿರೇಳಿಸುವ ಅನುಭವ.