ವಡೋದರದ ದಾಂಡಿಯಾ ಬಜಾರ್ ನಲ್ಲಿ ಈ ಆಶ್ರಮವಿದೆ. ಇಂಗ್ಲಿಷ್ ನ ಉಪನ್ಯಾಸಕ ಮತ್ತು ಬರೋಡಾ(ಈಗ ಎಂ.ಎಸ್. ವಿ.ವಿ) ಕಾಲೇಜಿನ ಉಪಪ್ರಾಂಶುಪಾಲ ರಿಶಿ ಅರಬಿಂದೊ ಘೋಷ್ ಅವರು ಮೂರನೇ ಸಯಜಿರಾವ್ ಅವರ ಖಾಸಗಿ ಕಾರ್ಯದರ್ಶಿಯಾಗಿದ್ದರು. ಗುಜರಾತ್ ನಲ್ಲಿದ್ದಷ್ಟು ಕಾಲ ಇಲ್ಲಿಯೇ ವಾಸ್ತವ್ಯ ಹೂಡಿದ್ದ ಅರಬಿಂದೊ ಘೋಷ್ ಅವರು ಸ್ವಾತಂತ್ರ್ಯ ಹೋರಾಟದ ಬಳಿಕ ಯೋಗಿಯಾಗಿದ್ದರು. ಆಶ್ರಮದಲ್ಲಿ ಯೋಗಿಯ ಸ್ಮಾರಕಗಳಿವೆ ಮತ್ತು ಧ್ಯಾನಕ್ಕೆ ಯಾವಾಗಲೂ ತೆರೆದಿರುತ್ತದೆ.