Search
  • Follow NativePlanet
Share
ಮುಖಪುಟ » ಸ್ಥಳಗಳು » ವಡೋದರಾ » ಆಕರ್ಷಣೆಗಳು
  • 01ವಡೋದರ ಮ್ಯೂಸಿಯಂ

    ಸಯಜಿ ಬಾಗ್ ನಲ್ಲಿರುವ ಎರಡು ಪ್ರಮುಖ ಮ್ಯೂಸಿಯಂನಲ್ಲಿ ವಡೋದರ ಮ್ಯೂಸಿಯಂ ಒಂದಾಗಿದೆ. ಮಹಾರಾಜ ಮೂರನೇ ಸಯಜಿರಾವ್ ಆಡಳಿತಾವಧಿಯಲ್ಲಿ 1894ರಲ್ಲಿ ಈ ಮ್ಯೂಸಿಯಂನ್ನು ಮೇಜರ್ ಚಾರ್ಲ್ಸ್ ಮಂಟ್ ಮತ್ತು ಆರ್. ಎಫ್. ಚಿಸ್ಲೊಮ್ ನಿರ್ಮಿಸಿದರು. ಮುಘಲ್ ಸಾಮ್ರಾಜ್ಯದ ಚಿತ್ರಕಲೆಯಿಂದ ಹಿಡಿದು ಶಿಲ್ಪಕಲೆ, ಜಪಾನ್, ಟಿಬೆಟ್, ನೇಪಾಳ ಮತ್ತು...

    + ಹೆಚ್ಚಿಗೆ ಓದಿ
  • 02ಸಯಜಿ ಬಾಗ್

    ಮಹಾರಾಜ ಮೂರನೇ ಸಯಜಿರಾವ್ 1879ರಲ್ಲಿ ನಿರ್ಮಿಸಿರುವ ಈ ಪಾರ್ಕ್ ನ 45 ಹೆಕ್ಟೇರ್ ಪ್ರದೇಶದಲ್ಲಿ ಉದ್ಯಾನ, ಪುಷ್ಪ ಗಡಿಯಾರ, ಎರಡು ಮ್ಯೂಸಿಯಂ, ತಾರಾಲಯ, ಝೂ ಮತ್ತು ಆಟಿಕೆ ರೈಲಿದೆ. ತಾರಾಲಯದ ಹಿಂದುಗಡೆ ಇರುವ ಬಾಹ್ಯಾಕಾಶ ಪಾರ್ಕ್ ನಲ್ಲಿ ಭಾರತದ ಪ್ರಾಚೀನ ಬಾಹ್ಯಾಕಾಶ ಸಾಧನಗಳಿವೆ. ಈ ಪಾರ್ಕ್ ನ್ನು ಕಮತಿ ಬಾಗ್ ಎಂದೂ...

    + ಹೆಚ್ಚಿಗೆ ಓದಿ
  • 03ಇಎಂಇ ಮಂದಿರ

    ಇಎಂಇ ಮಂದಿರ

    ಎಲೆಕ್ಟ್ರಾನಿಕ್ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್(ಇಎಂಇ) ಕಂಪನಿಗಳು ಈ ಮಂದಿರವನ್ನು ಅಲ್ಯೂಮಿನಿಯಂ ಶೀಟ್ ಗಳನ್ನು ಬಳಸಿ ನಿರ್ಮಿಸಿರುವುದು ಒಂದು ವಿಶೇಷ. ಇಲ್ಲಿ ದಕ್ಷಿಣಮೂರ್ತಿ ಅಥವಾ ಶಿವನ ಮೂರ್ತಿಯಿದೆ. ಇತರ ಧರ್ಮಗಳ ಸಂಕೇತಗಳು ಇಲ್ಲಿವೆ. ಮಂದಿರದ ವಾಸ್ತುಶಿಲ್ಪವು ಆಧುನಿಕತೆಗೆ ಕನ್ನಡಿ ಹಿಡಿದಂತಿದೆ.

    + ಹೆಚ್ಚಿಗೆ ಓದಿ
  • 04ಮಹಾರಾಜ ಸಯಜಿರಾವ್ ವಿಶ್ವವಿದ್ಯಾನಿಲಯ

    ಮಹಾರಾಜ ಸಯಜಿರಾವ್ ವಿಶ್ವವಿದ್ಯಾನಿಲಯವು ಪಶ್ಚಿಮ ಭಾರತದಲ್ಲಿರುವ ಪ್ರಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಒಂದು. ಇಲ್ಲಿರುವ ಪುರಾತತ್ವ ಇಲಾಖೆಯು ಹರಪ್ಪನ್ ನಾಗರೀಕತೆ ಮತ್ತು ದೇವಿ-ನಿ-ಮೊರಿಯಲ್ಲಿರುವ ಬೌದ್ಧ ತಾಣವನ್ನು ಪತ್ತೆ ಹಚ್ಚಿತ್ತು. ಮಾನವ ಜಿನೊಮ್ ಸಂಶೋಧನಾ, ಸಾಮಾಜಿಕ ಕೆಲಸ ಮತ್ತು ತಂತ್ರಜ್ಞಾನದಂತಹ ವಿಭಾಗಗಳು, ಆಧುನಿಕ...

    + ಹೆಚ್ಚಿಗೆ ಓದಿ
  • 05ಕದಿಯಾ ದುಂಗರ್ ಗುಹೆಗಳು

    ಭರೂಚಗೆ ಸಮೀಪದಲ್ಲಿರುವ ಈ ಗುಹೆಗಳು ಕ್ರಿ.ಶ. 1 ಮತ್ತು 2ನೇ ಶತಮಾನ ಪುರಾತನವಾದದ್ದು. ಏಕಶಿಲೆಯ ಸಿಂಹದ ಕಂಬಗಳನ್ನು ಹೊಂದಿರುವ ಇವು ಬೌದ್ಧ ಗುಹೆಗಳಾಗಿವೆ. ಬೆಟ್ಟದ ತಪ್ಪಲಿನಲ್ಲಿ ಏಳು ಗುಹೆಗಳು ಮತ್ತು ಒಂದು ಸ್ತೂಪ ಇದೆ.

    + ಹೆಚ್ಚಿಗೆ ಓದಿ
  • 06ಸುರ್ ಸಾಗರ್ ತಲಾವ್

    ಸುರ್ ಸಾಗರ್ ತಲಾವ್

    ಪ್ರವಾಸಿಗಳಿಗೆ ಬೋಟ್ ಸೌಲಭ್ಯವನ್ನು ನೀಡಿರುವ ಕೃತಕ ಕೆರೆಯಲ್ಲಿ ಗಣೇಶ ಚತುರ್ಥಿ ವೇಳೆ ಬೃಹತ್ ಸಂಖ್ಯೆಯಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಗುತ್ತದೆ.

    + ಹೆಚ್ಚಿಗೆ ಓದಿ
  • 07ವಧವನ ಜವುಗು ಪ್ರದೇಶ ಮತ್ತು ಪರಿಸರ ಶಿಬಿರತಾಣ

    ವಧವನ ಜವುಗು ಪ್ರದೇಶ ಮತ್ತು ಪರಿಸರ ಶಿಬಿರತಾಣ

    ವಧವನ ಜವುಗು ಪ್ರದೇಶ ಮತ್ತು ಪರಿಸರ ಶಿಬಿರತಾಣವು ನೀರಾವರಿ ಜಲಾಶಯವಾಗಿದ್ದು, ಇದು ಸುತ್ತಲಿನ 25 ಗ್ರಾಮಗಳಿಗೆ ನೀರನ್ನು ಒದಗಿಸುತ್ತದೆ. ಜಲಾಶಯ ಮತ್ತು ಜವುಗು ಭೂಮಿ ದಾಭೊಯಿಯಿಂದ 10 ಕಿ.ಮೀ. ದೂರದಲ್ಲಿದೆ. ಸ್ಟಾಕ್, ಕಡಲಕಾಗೆ, ಐಬಿಸ್ ಮತ್ತು ಚಮಚಕೊಕ್ಕಿನ ಹಕ್ಕಿಗಳ ಸಹಿತ ಹಲವಾರು ವಿಧದ ಪ್ರಭೇದದ ಪಕ್ಷಿಗಳಿಂದ ಈ ತಾಣವು...

    + ಹೆಚ್ಚಿಗೆ ಓದಿ
  • 08ಛೋಟಾ ಉದೇಪುರ್

    ರಾಜಸ್ಥಾನದ ಗಡಿಭಾಗದಲ್ಲಿರುವ ಛೋಟಾ ಉದೇಪುರ್ ಗುಜರಾತ್ ನ ಪೂರ್ವಭಾಗದಲ್ಲಿರುವ ರಾಜಾಧೀನವಾಗಿದ್ದ ರಾಜ್ಯ. ಸರೋವರದ ಒಂದು ಬದಿಯಲ್ಲಿರುವ ಇಲ್ಲಿ ಹಲವಾರು ಮಂದಿರಗಳಿವೆ. ಇಲ್ಲಿರುವ ಜೈನ ಮಂದಿರವು ವಿಕ್ಟೋರಿಯನ್ ವಾಸ್ತುಶಿಲ್ಪ ಶೈಲಿಯ ಪ್ರಭಾವ ಹೊಂದಿದೆ.

    ಕುಸುಮ ವಿಲಾಸ ಅರಮನೆ ಮತ್ತು ಪ್ರೇಮ್ ಭವನ ಅರಮನೆಗಳಿಗೆ ರಾಜ...

    + ಹೆಚ್ಚಿಗೆ ಓದಿ
  • 09ಸಂಖೇಡಾ

    ಸಂಖೇಡಾವು ಖರಾಡಿ ಸಮುದಾಯದವರು ಮರಗೆಲಸಕ್ಕೆ ಮೆರುಗೆಣ್ಣೆ  ನೀಡುವ ಪ್ರದೇಶ. ಇಲ್ಲಿ ಮಾಡಲ್ಪಟ್ಟ ನಯಗೊಳಿಸಿದ ಜಾಲರಿಯನ್ನು ಪ್ರದೇಶದ ಹೆಸರಾದ ಸಂಖೇಡಾದಿಂದ ಕರೆಯಲಾಗುತ್ತದೆ. ಇವುಗಳು ಜಟಿಲತೆಗೆ ಇದು ವಿಶ್ವದಾದ್ಯಂತ ಪ್ರಸಿದ್ಧಿ ಹೊಂದಿದೆ.

    + ಹೆಚ್ಚಿಗೆ ಓದಿ
  • 10ಅರಮನೆಗಳು

    ಲಕ್ಷ್ಮೀ ವಿಲಾಸ ಅರಮನೆ

    1890ರಲ್ಲಿ ಮಹಾರಾಜ ಸಯಜಿರಾವ್ ಆಡಳಿತಾವಧಿಯಲ್ಲಿ ಈ ಅರಮನೆ ನಿರ್ಮಿಸಲಾಗಿತ್ತು. ಅರಮನೆ ನಿರ್ಮಾಣಕ್ಕೆ ಆತ ಮೇಜರ್ ಚಾರ್ಲ್ಸ್ ಮಂತ್ ಎಂಬವರನ್ನು ನೇಮಿಸಿದ್ದ. ಆದರೆ ಇದರ ನಿರ್ಮಾಣವನ್ನು ಆರ್. ಎಫ್. ಚಿಸ್ಲೊಮ್ ಪೂರ್ಣಗೊಳಿಸಿದ. ಇಂಡೋ-ಸ್ಯಾರಸೆನಿಕ್ಶೈಲಿ ಸಂಪ್ರದಾಯದಂತೆ...

    + ಹೆಚ್ಚಿಗೆ ಓದಿ
  • 11ಶ್ರೀ ಅರಬಿಂದೊ ನಿವಾಸ

    ವಡೋದರದ ದಾಂಡಿಯಾ ಬಜಾರ್ ನಲ್ಲಿ ಈ ಆಶ್ರಮವಿದೆ. ಇಂಗ್ಲಿಷ್ ನ ಉಪನ್ಯಾಸಕ ಮತ್ತು ಬರೋಡಾ(ಈಗ ಎಂ.ಎಸ್. ವಿ.ವಿ) ಕಾಲೇಜಿನ ಉಪಪ್ರಾಂಶುಪಾಲ ರಿಶಿ ಅರಬಿಂದೊ ಘೋಷ್ ಅವರು ಮೂರನೇ ಸಯಜಿರಾವ್ ಅವರ ಖಾಸಗಿ ಕಾರ್ಯದರ್ಶಿಯಾಗಿದ್ದರು. ಗುಜರಾತ್ ನಲ್ಲಿದ್ದಷ್ಟು ಕಾಲ ಇಲ್ಲಿಯೇ ವಾಸ್ತವ್ಯ ಹೂಡಿದ್ದ ಅರಬಿಂದೊ ಘೋಷ್ ಅವರು ಸ್ವಾತಂತ್ರ್ಯ...

    + ಹೆಚ್ಚಿಗೆ ಓದಿ
  • 12ಇತರ ಕಟ್ಟಡಗಳು

    ತಾಂಬೇಕರ್ ವಾಡ

    ಈ ಕಟ್ಟಡವು ಒಂದು ಕಾಲದಲ್ಲಿ ವಡೋದರದ ದಿವಾನರ ಮನೆಯಾಗಿತ್ತು. ಇಂದು ಪುರಾತತ್ವ ಇಲಾಖೆಯ ಅಧೀನದಲ್ಲಿರುವ ಈ ಕಟ್ಟಡದಲ್ಲಿ 19ನೇ ಶತಮಾನದಲ್ಲಿ ಮಾರಾಠ ಶೈಲಿಯಲ್ಲಿ ಮಾಡಿದಂತಹ ವರ್ಣಚಿತ್ರಗಳಿವೆ. ಇದರಲ್ಲಿರುವ ವರ್ಣಚಿತ್ರಗಳು ಮಹಾರಾಷ್ಟ್ರ, ಶ್ರೀಕೃಷ್ಣನ ಜೀವನ ಮತ್ತು ಆಂಗ್ಲೋ ಮರಾಠ...

    + ಹೆಚ್ಚಿಗೆ ಓದಿ
  • 13ಪುರಾತತ್ವ ಇಲಾಖೆ

    ಪುರಾತತ್ವ ಇಲಾಖೆ

    ಎಂಎಸ್ ಯೂನಿವರ್ಸಿಟಿ ಅಧೀನದಲ್ಲಿರುವ ಪುರಾತತ್ವ ಇಲಾಖೆ ಇಲ್ಲಿನ ದೇವಿ-ನಿ-ಮೊರಿಯಲ್ಲಿ ಬೌದ್ಧ ಅವಶೇಷಗಳು ಮತ್ತು ಹರಪ್ಪನ್ ನಾಗರಿಕತೆಗೆ ಸಂಬಂಧಪಟ್ಟ ಐತಿಹಾಸಿಕ ಕುರುಹುಗಳನ್ನು ಪತ್ತೆಹಚ್ಚಿದೆ.

    + ಹೆಚ್ಚಿಗೆ ಓದಿ
  • 14ಅನ್ಕೊಟಾಕ

    ಅನ್ಕೊಟಾಕ

    ಅನ್ಕೊಟಾಕ(ಪ್ರಸಕ್ತ ಅಕೋಟಾ)ವು ವಿಶ್ವಮಿತ್ರಿ ನದಿ ದಡದಲ್ಲಿರುವ ಒಂದು ಸಣ್ಣ ನಗರ. ತಾಣವು 5 ಮತ್ತು 6ನೇ ಶತಮಾಣದಲ್ಲಿ ಜೈನಿಸಂ ಮತ್ತು ಜೈನ ಶಿಕ್ಷಣದ ಪ್ರಮುಖ ಕೇಂದ್ರ. ಇಲ್ಲಿ ಇದುವರೆಗೆ ಜೈನ ತೀರ್ಥಂಕರರ 68 ಕಂಚಿನ ಮೂರ್ತಿಗಳು ಸಿಕ್ಕಿವೆ. ಇವುಗಳನ್ನು ಈಗ ವಡೋದರದ ಮ್ಯೂಸಿಯಂನಲ್ಲಿಡಲಾಗಿದೆ.

    + ಹೆಚ್ಚಿಗೆ ಓದಿ
  • 15ದಾಭೊಯಿ

    ಹಿಂದೆ ದರ್ಭಾವತಿ ಎಂದು ಕರೆಯಲ್ಪಡುತ್ತಿದ್ದ ದಾಭೊಯಿ ವಡೋದರದ ಒಂದು ನಗರ. ಪ್ರಾಚೀನ ಕೋಟೆಯ ಈ ಪಟ್ಟಣ ಜೈನರ ಗ್ರಂಥ ಗಿರ್ನಾರ್ ನಲ್ಲಿ ತುಂಬಾ ಪ್ರಾಮುಖ್ಯತೆ ಪಡೆದಿದೆ. ದಾಭೊಯಿ ಕೋಟೆ ಹಿಂದೂ ಸೇನೆಯ ವಾಸ್ತುಶಿಲ್ಪಕ್ಕೆ ಜೀವಂತ ಸಾಕ್ಷಿಯಾಗಿದೆ.

    ಪೂರ್ವದಲ್ಲಿ ಹಿರಾ ಭಾಗೊಲಾ, ಪಶ್ಚಿಮದಲ್ಲಿ ವಡೋದರಾ ಗೇಟ್, ಉತ್ತರದಲ್ಲಿ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun