ಸ್ಥಳೀಯವಾಗಿ ಗುರುದ್ವಾರ ಮಂಜಿ ಸಾಹಿಬ್ ಎಂದೇ ಕರೆಯಲ್ಪಡುವ ಡೇರಾ ಬಾಬಾಸಿಂಗ್ ಭರ್ಬಾಗ್ ಉನಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಉನಾ ದಿಂದ 40 ಕಿ.ಮೀ ಅಂತರದಲ್ಲಿರುವ ಈ ಪ್ರದೇಶ ಸುಂದರವಾದ ನೀಲಗಿರಿ ಮರಗಳಿಂದ ಆವೃತವಾಗಿದ್ದು, ಇಲ್ಲಿಗೆ ಭೇಟಿ ನೀಡಿದವರ ಮನಸ್ಸಿಗೆ ಆನಂದ ನೀಡುತ್ತದೆ. ಜನಪ್ರಿಯ ಸಂತರಾದ ಬಾಬಾ ಬರ್ಯಾಭಾಗ್ ಸಿಂಗ್ ಅವರು ಈ ದೇಗುಲವನ್ನು ನಿರ್ಮಿಸಿದರು. ಇದನ್ನು ಅವರು ತಮ್ಮ ಗುರುಗಳಾದ ಬಾಬಾ ಭರ್ಬಾಂಗ್ ಸಿಂಗ್ಗೆ ಅರ್ಪಿಸಿದರು. ಬಾಬಾ ರಾಮ್ಸಿಂಗ್ರ ಪುತ್ರ ಈ ದೇಗುಲವನ್ನು ನಂತರ ನವೀಕರಿಸಿದರು. ಇವರು ಸಾಮಾಜಿಕ ಕಾರ್ಯಕರ್ತ ಹಾಗೂ ಧಾಮರ್ಮಿಕ ಮುಖಂಡರಾಗಿದ್ದರು ಎನ್ನುವುದು ವಿಶೇಷ.
ಪ್ರತಿ ವರ್ಷ ಇಲ್ಲಿ ಬಾಬಾ ಭರ್ಬಾಗ್ ಸಿಂಗ್ ಮೇಳ ನಡೆಯುತ್ತದೆ. ಇದನ್ನು ಹೋಲಾ ಮೊಹಲ್ಲಾ ಜಾತ್ರೆ ಅಂತಲೂ ಕರೆಯಲಾಗುತ್ತದೆ. ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ನಡುವಿನ ಅವಧಿಯಲ್ಲಿ ಇದನ್ನು ಆಯೋಜನೆಯಾಗುತ್ತದೆ. ತಮ್ಮ ಜಾದೂ ಶಕ್ತಿಯಿಂದ ಬಾಬಾ ಭರ್ಬಾಗ್ ಸಿಂಗ್ ಸ್ಥಳೀಯ ನಾಗರಿಕರ ನಡುವೆ ಅತ್ಯಂತ ಜನಪ್ರಿಯ ವ್ಯಕ್ತಿಯಾಗಿ ಬಿಂಬಿತರಾಗಿದ್ದರು. ಇವರ ಹೆಸರಿನಲ್ಲಿ ಈ ಜಾತ್ರೆಯು 10 ದಿನಗಳ ವರೆಗೆ ನಡೆಯುತ್ತದೆ. ಈ ಸ್ಥಳದ ವಿಶೇಷ ನಂಬಿಕೆಯೆಂದರೆ, ಮಾನಸಿಕ ಅಸ್ವಸ್ಥತೆಯನ್ನು ಹೊಂದಿರುವ ಸಾವಿರಾರು ಮಂದಿ ಇಲ್ಲಿಗೆ ಬರುತ್ತಾರೆ. ಇಲ್ಲಿನ ಅರ್ಚಕರು ಪೂಜೆ ಮೂಲಕ ಹಿಡಿದ ಮಾನಸಿಕ ವ್ಯಾಧಿಯನ್ನು ಬಿಡಿಸುತ್ತಾರೆ. ಇವರನ್ನು ಮಾಸಂದರು ಎಂದು ಕೂಡ ಕರೆಯಲಾಗುತ್ತದೆ. ಭೂತ, ಪ್ರೇತ ಇತ್ಯಾದಿ ಭಾದೆಗೆ ಒಳಗಾದವರು ಕೂಡ ಪರಿಹಾರ ಬಯಸಿ ಇತ್ತ ಬರುತ್ತಾರೆ. ಈ ಜಾತ್ರೆಯಲ್ಲಿ ಅವರಿಗೂ ಪರಿಹಾರ ಕಲ್ಪಿಸಲಾಗುತ್ತದೆ.