ಹಿಮಾಚಲ ಪ್ರದೇಶ ರಾಜ್ಯದ ಉನಾದಿಂದ 62 ಕಿ.ಮೀ. ದೂರದಲ್ಲಿರುವ ಅತ್ಯಂತ ಜನಪ್ರಿಯ ಪ್ರವಾಸಿ ತಾಣ ಧರ್ಮಶಾಲಾ ಮಹಾಂತ. ಇದನ್ನು ಬಾಬಾ ನಕೋದರ್ ದಾಸ್ ಪತ್ತೆಹಚ್ಚಿದರು. ಇವರು ಪಂಚದೇವ ಉಪಾಸಕ ಅಥವಾ ಐದು ದೇವರ ಆರಾಧಕರಾಗಿದ್ದರು. ಇವರಿದ್ದದ್ದು ಜನಪ್ರಿಯ ಮೊಘಲ್ ಅರಸು ಅಕ್ಬರನ ಆಡಳಿತ ಇದ್ದ ಸಂದರ್ಭದಲ್ಲಿ. ದಾಸರು ಹಿಂದು ದೇವರಾದ ವಿಷ್ಣುವಿನ ಮಹಾನ್ ಭಕ್ತರಾಗಿದ್ದರು. ಇಲ್ಲಿ ಎರಡು ಕಟ್ಟಡಗಳಿದ್ದು, ಇವು ಮ್ಯೂರಲ್ ಪೇಂಟಿಂಗ್ಗೆ ಜನಪ್ರಿಯವಾಗಿವೆ. ಇದಲ್ಲದೇ ಚಿತ್ರಕಲೆಗಳ ಅಪಾರ ಸಂಗ್ರಹದ ಜತೆ ಇಲ್ಲಿ ಒಂದು ಬೈಠಕ್ ಕೋಣೆ ಅಥವಾ ಕುಳಿತು ವಿರಮಿಸುವ ಕೋಣೆ ಇದೆ.
ಮಹಾಂತ ಲಕ್ಷ್ಮೀ ಧಾರ್ ಅವರ ಪ್ರಕಾರ, ಇಲ್ಲಿ ಪ್ರದರ್ಶನಕ್ಕಿರುವ ಚಿತ್ರಗಳು ಅವರ ತಾತನ ಕಾಲದಲ್ಲಿ ನಿರ್ಮಿಸಲಾಗಿದ್ದವು. ಇದನ್ನು ಮಿಸ್ಟರಿ ಅಥವಾ ಮಾನ್ಸನ್ ಎನ್ನಲಾಗಿದೆ. ಮ್ಯೂರಲ್ ಪೇಂಟಿಂಗ್ಸ್ ಅಲ್ಲದೇ ದೇವಾಲಯದ ಗೋಡೆ ಅಲಂಕರಿಸಿರುವ ಜಾನಪದ ಕಲಾಚಿತ್ರ ಕೂಡ ಪ್ರವಾಸಿಗರನ್ನು ಸೆಳೆಯುತ್ತದೆ.
ಪಶ್ಚಿಮ ಹಿಮಾಲಯದ ಗೋಡೆ ಚಿತ್ರಕಲೆಗಳು (ವಾಲ್ ಪೇಂಟಿಂಗ್ಸ್ ಆಫ್ ವೆಸ್ಟರ್ನ್ ಹಿಮಾಲಯಾಸ್)ಎಂಬ ಕೃತಿಯಲ್ಲಿ ಖ್ಯಾತ ಬರಹಗಾರರಾದ ಮೀರಾ ಸೇಠ್ ಅವರು ಕೆಲವು ವರ್ಷಗಳ ಹಿಂದೆ ನಿಧನರಾದ ಮಹಾಂತ ಲಕ್ಷ್ಮೀ ಧಾರ್ (ಪ್ರಸ್ತುತ ಮಹಾಂತರ ತಂದೆ) ಅವರಿಗೆ ವಿಶೇಷ ಅನುಮತಿಯಿತ್ತೆಂದು ಬರೆಯುತ್ತಾರೆ. ಈ ಅನುಮತಿಯು 1667ರಲ್ಲಿ ಮೊಘಲ್ ಅರಸ ಔರಂಗಜೇಬನ ಕಾಲಾವಧಿಯಲ್ಲೆ ಇವರ ಪೂರ್ವಜರಿಗೆ ಕೊಟ್ಟಲ್ಪಟ್ಟಿತ್ತು ಎಂದು ಹೇಳಲಾಗುತ್ತದೆ.