ವಿಕ್ರಮ್ ಕೀರ್ತಿ ಮಂದಿರ್ ಮೌರ್ಯ ರಾಜವಂಶದ ಬಗ್ಗೆ ಯುವಜನತೆಯಲ್ಲಿ ಜಾಗೃತಿ ಮುಡಿಸುವ ಕಾರಣದಿಂದ ಕಟ್ಟಲಾಗಿದೆ. ಸಿಂಧಿಯಾ ಓರಿಯೆಂಟಲ್ ರಿಸರ್ಚ್ ಸಂಸ್ಥೆ, ಪುರಾತತ್ವ ವಸ್ತುಸಂಗ್ರಹಾಲಯ, ಒಂದು ಕಲಾ ಗ್ಯಾಲರಿ ಹಾಗೂ ಒಂದು ಆಡಿಟೋರಿಯಂ ವಿಕ್ರಮ್ ಕೀರ್ತಿ ಮಂದಿರ್ ನ ಒಡೆತನದಲ್ಲಿದೆ. ವಿಕ್ರಮ್ ಯುಗದ ಎರಡನೆ ಸಹಸ್ರವರ್ಷ ಆಚರಿಸಲು ಇದನ್ನು ಕಲಾ ಕೇಂದ್ರವಾಗಿ ಕಟ್ಟಲಾಗಿತ್ತು. ಈ ವಸ್ತುಸಂಗ್ರಹಾಲಯದಲ್ಲಿ ನರ್ಮದಾ ಕಣಿವೆಯಲ್ಲಿ ಸಿಕ್ಕ ದೊಡ್ಡ ಸಂಖ್ಯೆಯ ಚಿತ್ರಗಳು, ತಾಮ್ರದ ತಟ್ಟೆಗಳು, ಹಾಗೂ ಪಳೆಯುಳಿಕೆಗಳು ಇವೆ.
ಇಲ್ಲಿ ಹಳೆಯ ಕಾಲದ ಆನೆಯ ಪಳೆಯುಳಿಕೆ ಇದ್ದು ಇದು ಜನರಲ್ಲಿ ಬಹಳ ಆಕರ್ಷಣೆಯಾಗಿದೆ. ಇಲ್ಲಿ ಹದಿನೆಂಟು ಸಾವಿರಕ್ಕೂ ಹೆಚ್ಚಿನ ಹಸ್ತಪ್ರತಿಗಳಿದ್ದು ಇವು ವಿವಿಧ ವಿಷಯಗಳಿಗೆ ಸಂಬಂಧಿಸಿವೆ. ಇಲ್ಲಿ ಪರ್ಷಿಯನ್, ಅರೆಬಿಕ್ ಮತ್ತು ಇತರ ಭಾರತೀಯ ಭಾಷೆಯ ಹಸ್ತಪ್ರತಿಗಳಿವೆ. ವಿಕ್ರಮ್ ಕೀರ್ತಿ ಮಂದಿರದ ಬಹಳ ಪ್ರಮುಖ ಸ್ಥಳ ಈ ಸಂಶೋಧನಾ ಸಂಸ್ಥೆಯಾಗಿದೆ.