ವೇದ ಶಾಲೆ ಇಲ್ಲಿನ ಪ್ರಮುಖ ವೀಕ್ಷಣಾಲಯವಾಗಿದ್ದು ಇದನ್ನು ಜೈಪುರದ ಮಹಾರಾಜ ಸವಾಯಿ ರಾಜ್ ಜೈ ಸಿಂಗ್ 1719 ರಲ್ಲಿ ಕಟ್ಟಿಸಿದನು. ಖಗೋಳ ಶಾಸ್ತ್ರದ ಅಧ್ಯಯನದಲ್ಲಿ ಉಜ್ಜಯಿನಿ ಹಿಂದಿನಿಂದಲೂ ಪ್ರಮುಖ ಸ್ಥಳವಾಗಿದೆ. ಉತ್ತರ ಭಾರತದಲ್ಲಿ ಪಂಚಾಂಗ ಎಂದು ಕರೆಯಲ್ಪಡುವ ಕ್ಯಾಲೆಂಡರನ್ನು ಉಜ್ಜಯಿನಿಯಲ್ಲೇ ಮಾಡಲಾಗುತ್ತದೆ. ಇದು ನಗರದ ಆಗ್ನೇಯ ಭಾಗದಲ್ಲಿದ್ದು ಇದೇ ಸ್ಥಳದಲ್ಲಿ ವೀಕ್ಷಣಾಲಯವೂ ಇದೆ. ಹಾಗೂ ಈ ವೀಕ್ಷಣಾಲಯ ನಾಲ್ಕು ಸ್ಮಾರಕಗಳನ್ನು ಹೊಂದಿದೆ. ಇಲ್ಲಿ ತಾರಾಲಯ ಹಾಗೂ ದೂರದರ್ಶಕ ಇದ್ದು ಇದು ಪ್ರವಾಸಿಗಳ ಮೆಚ್ಚಿನ ತಾಣವಾಗಿದೆ. ಇಲ್ಲಿನ ನಾಲ್ಕು ಸ್ಮಾರಕಗಳಲ್ಲಿ ಮೂರನೆಯದು ದಿಗ್ನಶಾ ಯಂತ್ರ ಹಾಗೂ ನಕ್ಷತ್ರಗಳ ಸ್ಥಾನ ಎಂದು ಹೆಸರಿಸಲಾಗಿದೆ. ಹಾಗೂ ಗ್ರಹಗಳನ್ನು ಈ ಯಂತ್ರದ ಮೂಲಕ ಲೆಕ್ಕಾಚಾರ ಮಾಡಲಾಗುತ್ತದೆ. ಇಲ್ಲಿನ ನೆರಳಿನ ಗಡಿಯಾರ (ಸನ್ ಡಯಲ್) ಬಹಳ ಪ್ರಸಿದ್ಧವಾಗಿದ್ದು ಸಮಭಾಜಕ ವೃತ್ತದಿಂದ ಯಾವುದೇ ಖಗೋಳ ಭಾಗವು ಬೀಳುತ್ತಿದೆಯೇ ಎಂದು ನೋಡಲು ಬಳಸಲಾಗುತ್ತಿತ್ತು.