ಸಾಂದೀಪನಿ ಆಶ್ರಮ ಉಜ್ಜಯಿನಿ ನಗರದಿಂದ ಕೇವಲ ಎರಡು ಕಿ.ಮೀ ದೂರದಲ್ಲಿದ್ದು ಬಹಳ ಪ್ರಮುಖ ಪ್ರವಾಸಿ ತಾಣ ಎಂದು ಹೆಸರು ಮಾಡಿದೆ. ಇದೊಂದು ಪುರಾಣ ಪ್ರಸಿದ್ಧವಾದ ಸ್ಥಳವಾಗಿದೆ. ಈ ಸ್ಥಳದಲ್ಲಿ ಸಾಂದೀಪನಿ ಗುರು ಶ್ರೀಕೃಷ್ಣ, ಸುಧಾಮ ಮತ್ತು ಕೃಷ್ಣನ ಅಣ್ಣ ಬಲರಾಮನಿಗೆ ವಿದ್ಯಾಭ್ಯಾಸ ಮಾಡಿಸಿದ್ದರು. ಈ ಸ್ಥಳವನ್ನು ಮಹಾಭಾರತದಲ್ಲಿ ಉಲ್ಲೇಖಿಸಲಾಗಿದೆ. ಅಂದಿನಿಂದ ಈ ಸ್ಥಳವನ್ನು ಸಾಂದೀಪನಿ ಮಹರ್ಷಿಗೆ ಅರ್ಪಿಸಿ ಇದನ್ನು ದೇವಾಲಯವನ್ನಾಗಿಸಲಾಗಿದೆ.
ಇಲ್ಲಿಯೇ ಇರುವ ಬಂಡೆ ಕಲ್ಲಿನ ಮೇಲೆ 1 ರಿಂದ 100 ರ ತನಕ ಅಂಕಿಗಳನ್ನು ನಮೂದಿಸಲಾಗಿದ್ದು, ಈ ಸಂಖ್ಯೆಗಳನ್ನು ಸಾಂದೀಪನಿ ಗುರುವೇ ಬರೆದಿದ್ದಾರೆ ಎಂದು ನಂಬಲಾಗಿದೆ. ಗೋಮಾತ್ ಕುಂಡ ಇಲ್ಲಿನ ಕೊಳವಾಗಿದೆ. ಶ್ರೀಕೃಷ್ಣನು ಎಲ್ಲಾ ಕೊಳಗಳ ಪವಿತ್ರವಾದ ನೀರನ್ನು ಸಂಗ್ರಹಿಸಿ ತಂದು ಇಲ್ಲಿ ತಂದಿದ್ದಾನೆ ಎನ್ನಲಾಗಿದೆ. ಇದನ್ನು ತನ್ನ ಗುರು ಸಾಂದೀಪನಿಗೆ ಪವಿತ್ರ ನೀರು ಹುಡುಕುವುದನ್ನು ತಪ್ಪಿಸುವುದಕ್ಕಾಗಿ ಮಾಡಿದ್ದ ಎಂದು ಹೇಳುತ್ತಾರೆ. ಸಾಂದೀಪನಿಯ ಅವಧಿಯಲ್ಲಿ ಇಲ್ಲಿ ಯುದ್ಧ ಕಲೆಗಳನ್ನೂ ಕಲಿಸಲಾಗುತ್ತಿತ್ತು. ಇದರ ಮೂಲ ಉದ್ದೇಶ ಆಧ್ಯಾತ್ಮಿಕ ಹೊಂದಾಣಿಕೆಯ ಬಗ್ಗೆ ಶಿಕ್ಷಣ ನೀಡುವುದಾಗಿತ್ತು.