ನಾಥ ಪಂಥದ ಪ್ರಸಿದ್ಧ ಶೈವನಾದ ಮತ್ಸ್ಯೇಂದ್ರನಾಥನ ಹೆಸರಿನಿಂದ ಈ ದೇವಸ್ಥಾನವಿದೆ. ಈ ಸಂತನನ್ನು ಪೀರ್ ಎಂದು ಕರೆಯಲಾಗುತ್ತದೆ ಹಾಗೂ ಈ ಸ್ಥಳವನ್ನು ಹಿಂದೂ ಗಳು ಹಾಗು ಮುಸ್ಲೀಮರಿಬ್ಬರೂ ಬಹಳ ಪವಿತ್ರ ಭಾವದಿಂದ ಕಾಣುತ್ತಾರೆ. ಈ ಸ್ಥಳವು ಶಿಪ್ರಾ ನದಿಯ ದಂಡೆಯ ಮೇಲೆ ಇದೆ. ಇದು ಭರ್ತಿಹಾರಿ ಗುಹೆಗಳು ಮತ್ತು ಗಡ್ಕಾಲಿಕಾ ದೇವಾಲಯದ ಪಕ್ಕದಲ್ಲಿ ಇದೆ. ಇದು ಉಜ್ಜಯಿನಿ ನಗರದಿಂದ ಕೇವಲ ಒಂದು ಕಿ.ಮೀ ಮಾತ್ರ ದೂರದಲ್ಲಿರುವುದರಿಂದ ಇಲ್ಲಿಗೆ ತಲುಪುವುದು ಬಹಳವೇ ಸುಲಭವಾಗಿದೆ.
ಇಲ್ಲಿ ಉತ್ಖನನ ಸಮಯದಲ್ಲಿ ಸಿಕ್ಕಿರುವ ಬಹಳ ಹಳೆಯ ಕಾಲದ ಕೆಲವು ವಸ್ತುಗಳಿವೆ. ಇವು ಸುಮಾರು ಕ್ರಿ.ಪೂ. 6 ಮತ್ತು 7 ನೆಯ ಶತಮಾನದವು ಎಂದು ನಂಬಲಾಗಿದೆ. ಇಲ್ಲಿನ ವಾಸ್ತುಶಿಲ್ಪ ನೀವು ಇಲ್ಲಿಯವರೆಗೆ ಕಂಡ ವಾಸ್ತುಶಿಲ್ಪಗಳಿಗಿಂದ ಭಿನ್ನ ಮತ್ತು ಶ್ರೇಷ್ಠವಾಗಿದೆ. ಇದು ಸರಳ ಬಿಳಿಯ ರಚನೆಯಾದರೂ ವಿಭಿನ್ನ ಶೈಲಿಯದ್ದಾಗಿದೆ. ಇಲ್ಲಿನ ವಾಸ್ತುಶಿಲ್ಪದ ವಿಭಿನ್ನತೆಯನ್ನು ನೋಡಿ ಆನಂದಿಸಲು ಸೂಕ್ಷ್ಮವಾಗಿ ನೋಡಬೇಕಾಗಿದೆ. ಇಲ್ಲಿ ಪ್ರತಿದಿನ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಆಗಮಿಸುತ್ತಾರೆ.