ಶಿಪ್ರಾ ನದಿಯ ದಂಡೆಯ ಮೇಲೆ ನವಗ್ರಹ ಮಂದಿರ ಇದೆ. ಇಲ್ಲಿ ನಮ್ಮ ಸೌರಗ್ರಹದ ಎಲ್ಲಾ ಗ್ರಹಗಳಿಗೆ ಪೂಜೆ ಸಲ್ಲಿಸುವ ಕಾರಣ ಇದು ಇಡಿಯ ಉಜ್ಜಯಿನಿಯಲ್ಲೇ ವಿಶೇಷವಾದ ದೇವಾಲಯವಾಗಿದೆ. ಉಜ್ಜಯಿನಿಯ ಜನಸಾಮಾನ್ಯರಲ್ಲಿ ಖಗೋಳ ಶಾಸ್ತ್ರ ಮಹತ್ವದ ಪಾತ್ರ ವಹಿಸಿದೆ. ಹಾಗೂ ತ್ರಿವೇಣಿ ಘಾಟ್ ಉಜ್ಜಯಿನಿ ಅತ್ಯಂತ ಮಹತ್ವದ ಸ್ಥಳವಾಗಿದೆ. ಈ ದೇವಾಲಯದ ಆವರಣದಲ್ಲಿ ಅಮಾವಾಸ್ಯೆ ದಿನ ಹಾಗೂ ಶನಿವಾರಗಳಂದು ಬೃಹತ್ ಸಂಖ್ಯೆಯಲ್ಲಿ ಜನ ಸೇರಿಸುತ್ತಾರೆ. ಇಲ್ಲಿಯ ಸಾಮಾನ್ಯ ಜನತೆ ಈ ಸ್ಥಳವನ್ನು ತ್ರಿವೇಣಿ ತೀರ್ಥಂ ಎಂದೂ ಕರೆಯುತ್ತಾರೆ. ಈ ದೇವಾಲಯ ಉಜ್ಜಯಿನಿ ನಗರದಿಂದ ಕೇವಲ ಆರು ಕಿ.ಮೀ ದೂರದಲ್ಲಿದೆ. ಹಾಗೂ ಇಲ್ಲಿಗೆ ತಲುಪಲು ಹಲವು ಸಾಅರಿಗೆ ವಿಧಾನಗಳು ಲಭ್ಯವಿವೆ. ಇಲ್ಲಿ ಬಹಳ ವರ್ಷಗಳ ಹಿಂದೆಯೇ ಖಗೋಳ ಶಾಸ್ತ್ರಕ್ಕೆ ಸಂಬಂಧಿಸಿದ ಅಧ್ಯಯನಗಳು ನಡೆದಿವೆ ಎಂದು ಹೇಳಲಾಗಿದೆ. ಇಲ್ಲಿ ದೇವರಿಗೆ ತೆಂಗಿನಕಾತಿ, ಹೂವು ಮತ್ತು ಕುಂಕುಮವನ್ನು ಅರ್ಪಿಸಲಾಗುತ್ತದೆ.