ಮಂಗಳನಾಥ್, ಪುರಾತನ ಪಟ್ಟಣ ಉಜ್ಜಯಿನಿಯಲ್ಲಿ ನೆಲೆಸಿರುವ ಭಗವಂತನಾದ ಶಿವನನ್ನು ಪೂಜಿಸುವ ಒಂದು ಮಂಗಳಕರ ದೇವಾಲಯವಾಗಿದೆ. ಈ ದೇವಾಲಯ ಗದ್ದಲಮಯ ಪ್ರಮುಖ ನಗರದಿಂದ ದೂರದಲ್ಲಿ ನೆಲೆಗೊಂಡಿದೆ. ದೇವಾಲಯವು ಶಿಪ್ರ ನದಿಯ ಪಕ್ಕದಲ್ಲಿದೆ. ಮತ್ಸ್ಯ ಪುರಾಣದ ಪ್ರಕಾರ ಮಂಗಳನಾಥ್, ಮಂಗಳ ಹುಟ್ಟಿದ ಸ್ಥಳವಾಗಿದೆ ಎಂಬ ನಂಬಿಕೆ ಇದೆ.
ಪ್ರವಾಸಿಗರು ಈ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಊಹಿಸಲಾಗದಷ್ಟು ಶಾಂತಿಯನ್ನು ಪಡೇಯುವುದರಲ್ಲಿ ಸಂಶಯವೇ ಇಲ್ಲ. ಮೊದಲ ಮೆರಿಡಿಯನ್ (ನಡುಹಗಲು) ದೇವಸ್ಥಾನವಿರುವ ಜಾಗದಲ್ಲೇ ನಿಖರವಾಗಿ ಹಾದುಹೋಗುತ್ತದೆ.
ಆದ್ದರಿಂದ ಈ ದೇವಸ್ಥಾನವು ಹೆಚ್ಚು ಪ್ರಾಮುಖ್ಯತೆಯನ್ನು ಗಳಿಸಿದ್ದು, ಹೆಚ್ಚಿನ ಪ್ರವಾಸಿಗರು ಗ್ರಹಗಳ ಒಂದು ಸ್ಪಷ್ಟ ನೋಟವನ್ನು ಪಡೆಯಲು ಸ್ಥಳಕ್ಕೆ ಭೇಟಿ ನೀಡುತ್ತಾರೆ. ದೇವಾಲಯವು ಭಕ್ತರ ಮನಸ್ಸನ್ನು ಶಾಂತಿಗಳಿಸುವ ಅದ್ಭುತವಾದ ಸ್ಥಳವಾಗಿದೆ. ಈ ಸ್ಥಳವು ಖಗೋಳ ಅಧ್ಯಯನಕ್ಕೂ ಸೂಕ್ತ ಸ್ಥಳವಾಗಿದೆ. ಮಂಗಳವಾರವನ್ನು ಅತ್ಯಂತ ಪವಿತ್ರವಾದ ದಿನ ಎಂದು ಪರಿಗಣಿಸಲಾಗಿದ್ದು ಭಕ್ತರುಈ ದಿನ ಪ್ರಾರ್ಥನೆ ಸಲ್ಲಿಸಲು ಇಲ್ಲಿಗೆ ಬರುತ್ತಾರೆ.