ಗೋಪಾಲ ಮಂದಿರ ಇಲ್ಲಿನ ಒಂದು ಪ್ರಸಿದ್ಧ ದೇವಾಲಯವಾಗಿದ್ದು ಇಲ್ಲಿ ಶ್ರೀ ಕೃಷ್ಣ ದೇವರನ್ನು ಆರಾಧಿಸಲಾಗುತ್ತದೆ. ಈ ದೇವಾಲಯವನ್ನು ದ್ವಾರಕಾಧೀಶ ದೇವಾಲಯ ಎಂದೂ ಕರೆಯಲಾಗುತ್ತದೆ. ಇದನ್ನು ಬಯಾಜಿಬಾಯಿ ಶಿಂಧೆ 19 ನೆಯ ಶತಮಾನದಲ್ಲಿ ಕಟ್ಟಿಸಿದಳು. ಬಯಾಜಿಬಾಯಿ ಮಹಾರಾಜಾ ದೌಲತ್ ರಾವ್ ನ ಹೆಂಡತಿಯಾಗಿದ್ದಳು. ಇದು ಮರಾಠಾ ವಾಸ್ತುಶಿಲ್ಪದ ಶ್ರೇಷ್ಟತೆಗೆ ಬಹಳ ಸುಂದರವಾದ ಉದಾಹರಣೆಯಾಗಿದೆ.
ಇಲ್ಲಿನ ವಿಗ್ರಹ ಬೆಳ್ಳಿಯದ್ದಾಗಿದ್ದು ಸುಮಾರು ಎರಡು ಅಡಿ ಎತ್ತರವಾಗಿದೆ. ಅಮೃತಶಿಲೆಯಲ್ಲಿ ಈ ವಿಗ್ರಹವನ್ನು ಇಡಲಾಗಿದೆ. ಹಾಗೂ ಬಾಗಿಲುಗಳು ಕೂಡ ಬೆಳ್ಳಿಯಿಂದ ಆವೃತವಾಗಿವೆ. ಇಲ್ಲಿನ ಬೆಳ್ಳಿಯ ಲೇಪದ ಬಾಗಿಲುಗಳ ಬಗ್ಗೆ ಒಂದು ಕಥೆ ಇದೆ. ಇದನ್ನು ಮಹಮ್ಮದ್ ಘಾಜಿ ಕಳ್ಳತನ ಮಾಡಿದ್ದನು ಹಾಗೂ ಇದನ್ನು ಸೋಮನಾಥ ದೇವಾಲಯದಿಂದ ಕದ್ದು ತರಲಾಗಿದೆ ಎಂಬ ಕಥೆಯಿದೆ. ಇದನ್ನು ಮಹಮುದ ಶಾ ಅಬ್ದಾಲಿ ಎಂಬ ಅಫ್ಘನ್ ಆಕ್ರಮಣಕಾರ ಲಾಹೋರ್ ಗೆ ಒಯ್ದಿದ್ದನು. ನಂತರ ದೊಡ್ಡ ಹೋರಾಟದ ನಂತರ ಈ ಬಾಗಿಲುಗಳನ್ನು ಮರಳಿ ಪಡೆಯಲಾಯಿತು ಎಂದು ಹೇಳಲಾಗಿದೆ. ಇಲ್ಲಿ ವರ್ಷಪೂರ್ತಿ ಹಲವು ಹಬ್ಬಗಳನ್ನು ಆಚರಿಸಲಾಗುತ್ತದೆ. ಇವುಗಳಲ್ಲಿ ಜನ್ಮಾಷ್ಟಮಿ ಪ್ರಮುಖವಾಗಿದೆ.