ದುರ್ಗಾದಾಸ್ ಕೀ ಛತ್ರಿ ಒಂದು ವಿಭಿನ್ನ ರೂಪದ ಸ್ಮಾರಕವಾಗಿದ್ದು ಉಜ್ಜಯಿನಿ ನಗರದಲ್ಲಿದೆ. ಇದನ್ನು ಛತ್ರಿಯ ಆಕಾರದಲ್ಲಿ ಕಟ್ಟಲಾಗಿದ್ದು ರಜಪೂತರ ಇತಿಹಾಸದಲ್ಲಿ ವೀರಪುರುಷನಾದ ವೀರ್ ದುರ್ಗಾದಾಸ್ ನ ನೆನಪಿನಲ್ಲಿ ಕಟ್ಟಲಾಗಿದೆ. ಮಹಾರಾಜ ಜಸ್ವಂತ್ ಸಿಂಗ ನ ನಂತರ ವೀರ್ ದುರ್ಗಾದಾಸ್ ಮೊಘಲರ ವಿರುದ್ಧ ಯುದ್ಧದಲ್ಲಿ ಹೋರಾಡಿದನು ಹಾಗೂ ಔರಂಗಜೇಬನ ಇಚ್ಛೆಯ ವಿರುದ್ಧ ಅಜಿತ್ ಸಿಂಗ್ ಪಟ್ಟಕ್ಕೇರಲು ನೆರವಾದನು. ಈತನು 1718 ರಲ್ಲಿ ಸಾವನ್ನಪ್ಪಿದನು. ಹಾಗೂ ಆತನ ಅಂತಿಮ ಸಂಸ್ಕಾರವನ್ನು ಶಿಪ್ರಾ ನದಿಯ ದಡದಲ್ಲಿ ಮಾಡಲಾಗಿತ್ತು. ಇದು ರಜಪೂತರ ಶೈಲಿಯ ವಾಸ್ತುಶಿಲ್ಪವನ್ನು ಹೋಲುತ್ತಿದ್ದು ಪ್ರವಾಸಿಗರ ನಡುವೆ ಬಹಳ ಪ್ರಸಿದ್ಧವಾಗಿದೆ. ಜೋಧಪುರದ ರಾಜರು ವೀರ್ ದುರ್ಗಾದಾಸ್ ನ ಮರಣದ ನಂತರ ಈ ಛತ್ರಿಯನ್ನು ನಿರ್ಮಿಸಿದರು. ಸುತ್ತಲಿನ ಪರಿಸರವೆಲವೂ ಸುಂದರವಾಗಿರುವ ಕಾರಣ ಇಲ್ಲಿನ ಸ್ಮಾರಕ ವಜ್ರದ ಹಾಗೆ ಹೊಳೆಯುತ್ತದೆ ಎಂದು ಜನರು ನಂಬುತ್ತಾರೆ.