ವಾಲ್ಸಾದ ಜಿಲ್ಲೆಯಲ್ಲಿನ ಸಮುದ್ರಪ್ರದೇಶದ ಪಟ್ಟಣವಾದ ಉದ್ವಾಡ ಪಾರ್ಸಿಗಳ ಮುಖ್ಯ ಕೇಂದ್ರ. ಉದ್ವಾಡ ಎಂದರೆ ‘ಒಂಟೆಗಳು ತಿರುಗಾಡುವ ಮೈದಾನ’ ಎಂದರ್ಥ. ಮುಸ್ಲಿಂರ ಆಕ್ರಮಣದಿಂದ ತಪ್ಪಿಸಿಕೊಳ್ಳಲು 10ನೆಯ ಶತಮಾನದಲ್ಲಿ ಪಾರ್ಸಿಗಳು ಭಾರತಕ್ಕೆ ಬಂದರು. ಇವರು ಭಾರತಕ್ಕೆ ವಾಲ್ಸಾದ ಮೂಲಕ ಪ್ರವೇಶಿಸಿದರು ನಂತರ ಇಲ್ಲಿ ಸಂಜನ್ ಎನ್ನುವ ಬಂದರನ್ನು ನಿರ್ಮಿಸಿದರು. ಇಲ್ಲಿನ ಪ್ರಮುಖ ಆಕರ್ಷಣೆಯೆಂದರೆ ಇಲ್ಲಿನ ಪವಿತ್ರ ಅಗ್ನಿ ಆತಿಷ್ ಬೆಹ್ರಾಂ.
ಇದನ್ನು ಅವರು ಇರಾನಿನಿಂದ ತಂದರಂತೆ. ಮತ್ತವರ ನಂಬಿಕೆಯ ಪ್ರಕಾರ ಇದು ಅತಿ ಹೆಚ್ಚು ಪ್ರಜ್ವಲವಾಗಿರುವ ಅಗ್ನಿ. ಇದನ್ನವರು ಸಂಜನ್ನಲ್ಲಿ ಬಂದರು ನಿರ್ಮಿಸಿದ ನಂತರ ತಂದರು. ನಂತರ ಸಂಜನದ ಮೇಲೆ ಮೊಹಮದ್ ಬಿನ್ ತುಘಲಕ್ನು ಆಕ್ರಮಣ ಮಾಡಿದ್ದರಿಂದ ಇದನ್ನು ಉದ್ವಾಡದ ಆತಾಶ್ ಬೆಹ್ರಾಂನಲ್ಲಿಟ್ಟರು. ಉದ್ವಾಡದ ಆತಶ್ ಬೆಹ್ರಾಂ ಪ್ರಪಂಚದ ಒಂಭತ್ತು ದೇವಾಲಯಗಳಲ್ಲಿ ಪವಿತ್ರ ಅಗ್ನಿಗಳಲ್ಲಿ ಒಂದು. ಇದು ನಿರಂತರವಾಗಿ ಉರಿಯುತ್ತಲೇ ಇದೆ.
ಆತಶ್ ಬೆಹ್ರಾಂನನ್ನು ಇರಾನ್ಷಾ ಎಂದು ಸಹ ಕರೆಯಲಾಗುತ್ತದೆ. ಆತಶ್ ಬೆಹ್ರಾಂನ ಸ್ಥಾಪನಾ ದಿನ ಮತ್ತು ಷಹೆನ್ಷಾಹಿಯ ಒಂಭತ್ತನೇ ತಿಂಗಳ ಒಂಭತ್ತನೇ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಪ್ರತಿ ತಿಂಗಳ 20ನೆ ದಿನವನ್ನು ವೆರೆಥರಂಗ ಅಂದರೆ ‘ವಿಜಯ’ದ ದಿನವನ್ನಾಗಿ ಆಚರಿಸುತ್ತಾರೆ. ಉದ್ವಾಡ ಸಮುದ್ರತೀರ ಮತ್ತು ಪಾರ್ಸಿ ತಿಂಡಿಗಳು ಉದ್ವಾಡದ ಕೆಲವು ಆಕರ್ಷಣೆಗಳು.
ಹವಾಮಾನ:
ಹೆಚ್ಚು ಉಷ್ಣತೆಯಿಂದ ಕೂಡಿದ ಬೇಸಿಗೆ, ಸಾಧಾರಣದಿಂದ ಅತಿ ಹೆಚ್ಚು ಮಳೆ ಬೀಳುವ ಮಳೆಗಾಲ, ಆಹ್ಲಾದಕರ ಚಳಿಗಾಲ ಇದು ಉದ್ವಾಡದ ಹವಾಮಾನ. ಈ ಪಟ್ಟಣಕ್ಕೆ ಬೇಸಿಗೆ ಕಾಲ ಮತ್ತು ಮಳೆಗಾಲಗಳಲ್ಲಿ ಪ್ರವಾಸ ಹೋಗುವುದು ಸೂಕ್ತವಲ್ಲ.