ಹಟ್ಟಿಯಂಗಡಿಯಲ್ಲಿರುವ ಶ್ರೀ ಸಿದ್ದಿವಿನಾಯಕ ದೇವಸ್ಥಾನವು ನಮ್ಮನ್ನು 8ನೇ ಶತಮಾನಕ್ಕೆ ಕರೆದೊಯ್ಯುತ್ತದೆ. ಈ ದೇವಸ್ಥಾನವು ಕುಂದಾಪುರ ತಾಲೂಕಿನಲ್ಲಿದ್ದು, ವಿನಾಯಕನ ಮೂರ್ತಿಯನ್ನು ಹೊಂದಿದೆ. ಈ ಐತಿಹಾಸಿಕ ಕ್ಷೇತ್ರವು ದೇಶಾದ್ಯಂತ ಇರುವ ಹಿಂದೂಗಳಿಗೆ ಪವಿತ್ರವಾದದ್ದಾಗಿದೆ. ವರಾಹಿ ನದಿಯ ಸಮೀಪದಲ್ಲಿ ಈ ದೇವಸ್ಥಾನ ಇದೆ. ಜಟೆಯನ್ನು ಹೊಂದಿರುವ ವಿನಾಯಕನ ಮೂರ್ತಿಯಿರುವುದು ಇಲ್ಲಿ ಮಾತ್ರ. ಮೂರ್ತಿಯು 2.5ಮೀಟರು ಎತ್ತರದ ಸಾಲಿಗ್ರಾಮದಿಂದ ಮಾಡಲಾಗಿದೆ.ದೇವರ ಮೂರ್ತಿಯು ಎಡಗಡೆಗೆ ವಾಲಿಕೊಂಡಿದೆ. ವಿಶೇಷ ಪೂಜೆಗಳನ್ನು ವಿವಿಧ ಸಂದರ್ಭಗಳಲ್ಲಿ ಹಮ್ಮಿಕೊಳ್ಳಲಾಗುತ್ತದೆ. ಭಕ್ತರಿಗೆ ಬೇಡಿದ್ದನ್ನು ಕರುಣಿಸುವವನು ಎಂಬುದರಿಂದಾಗಿ ಸಿದ್ಧಿ ಎಂಬ ಹೆಸರನ್ನು ಈ ವಿನಾಯಕನಿಗೆ ಇಡಲಾಗಿದೆ.ಹಟ್ಟಿಯಂಗಡಿಯು ಕುಂದಾಫುರದಿಂದ ಸುಮಾರು 8 ಕಿ.ಮೀ ದೂರದಲ್ಲಿದೆ. ಉಡುಪಿಗೆ ಹೋದ ನಂತರ ಹಟ್ಟಿಯಂಗಡಿಗೆ ಹೋಗಬೇಕಾಗುತ್ತದೆ. ಉಡುಪಿಯನ್ನು ತಲುಪಿದ ನಂತರ ಕುಂದಾಪುರದ ಕಡೆಗೆ ಮತ್ತು ಅಲ್ಲಿಂದ ಮುರುಡೇಶ್ವರದ ಕಡೆಗೆ ಪ್ರಯಾಣಿಸಬಹುದು. ಈ ದಾರಿಯಲ್ಲಿ ಸುಮಾರು 9 ಕಿ.ಮೀ ತಲುಪಿದ ನಂತರದಲ್ಲಿ ಬಲಗಡೆ ತಿರುಗಿದರೆ ನೀವು ಈ ದೇವಸ್ಥಾನವನ್ನು ಕಾಣುತ್ತೀರಿ.