ಹಲ್ದಿಘಾತಿಯು ಉದಯಪುರದಿಂದ ಸುಮಾರು 40 ಕಿ.ಮೀ ದೂರದಲ್ಲಿದೆ. ಇದನ್ನು ಹಲ್ದಿಘಾತಿ ರಣಾಂಗಣ ಎಂಬುದರಿಂದ ಜನಪ್ರಿಯವಾಗಿದೆ. ಇಲ್ಲಿ ಮೇವಾರಿನ ಮಹಾರಾಣ ಪ್ರತಾಪ್ ಮತ್ತು ಅಂಬರಿನ ರಾಜ ಮಾನ್ ಸಿಂಗ್ರ ಮಧ್ಯೆ ಯುದ್ಧ ನಡೆದಿತ್ತು. ಈ ಯುದ್ಧ ನಡೆದಿದ್ದು 1576ರಲ್ಲಿ. ಈ ಸಂದರ್ಭದಲ್ಲಿ ಸಾಕಷ್ಟು ಸಾವುನೋವುಗಳು ಸಂಭವಿಸಿದವು ಎಂದು ಹೇಳಲಾಗುತ್ತದೆ.
ಈ ಪ್ರದೇಶಕ್ಕೆ ಹಲ್ದಿಘಾಟಿ ಎಂದು ಹೆಸರು ಬಂದಿದ್ದು ಇಲ್ಲಿನ ಮಣ್ಣಿನ ಬಣ್ಣದಿಂದಾಗಿ. ಇಲ್ಲಿನ ಮಣ್ಣು ಹಳದಿ ಬಣ್ಣದ್ದಾಗಿದೆ. ಮಹಾರಾಣ ಪ್ರತಾಪನ ಕುದುರೆ ಚೇತಕ್ ಇಲ್ಲೇ ಕೊನೆಯುಸಿರೆಳೆದಿತ್ತು ಎಂಬ ಕಾರಣದಿಂದಲೂ ಈ ಭೂಮಿ ಪವಿತ್ರವಾಗಿದೆ.ಚೇತಕ್ ನೆನಪಿಗಾಗಿ ಒಂದು ಸಮಾಧಿಯನ್ನು ರಣಾಂಗಣದಿಂದ ಸುಮಾರು 4 ಕಿ.ಮೀ ದೂರದಲ್ಲಿ ನಿರ್ಮಿಸಲಾಗಿದೆ. ಈ ಸಮಾಧಿಯು ಬಿಳಿ ಕಲ್ಲಿನಿಂದ ಮಾಡಲ್ಪಟ್ಟಿದ್ದು ನಂಬಿಕೆಯ ಕುದುರೆಗಾಗಿ ಮತ್ತು ಗೌರವದ ಸಂಕೇತವಾಗಿ ಇಂದೂ ಉಳಿದುಕೊಂಡಿದೆ.
ಬಲೀಚಾ ಹಳ್ಳಿಯು ಈ ಪ್ರದೇಶಕ್ಕೆ ಸಮೀಪದಲ್ಲೇ ಇದೆ. ಇದೊಂದು ಜನಪ್ರಿಯ ಟೆರ್ರಾಕೋಟಾ ಕ್ರಾಫ್ಟ್ ಆಗಿದೆ. ಇನ್ನೊಂದೆಡೆ ಬಶಾಹಿ ಭಾಗ್ ಜನಪ್ರಿಯವಾಗಿದ್ದು, ಇದನ್ನು ಚೈತ್ರಿ ಗುಲಾಬ್ ಎಂದು ಕರೆಯಲಾಗುತ್ತದೆ. ವೈದ್ಯಕೀಯ ಮಹತ್ವವಿರುವ ಗುಲಾಬಿ ನೀರು ಮತ್ತು ಗುಲ್ಕಂಡ್, ಈ ಉದ್ಯಾನದ ಮುಖ್ಯ ಸಂಗತಿ.