ಸಿಟಿ ಪ್ಯಾಲೇಸ್ ಉದಯಪುರದಲ್ಲೇ ಅತ್ಯಂತ ಸುಂದರವಾದ ಕಟ್ಟಡ. ಇದನ್ನು ರಾಜಸ್ತಾನದಲ್ಲೇ ಅತಿ ದೊಡ್ಡ ಕಟ್ಟಡ ಎಂದು ಕರೆಯಲಾಗಿದೆ. ಮಹಾರಾಣ ಉದಯ್ ಮಿರ್ಜಾ ಸಿಂಗ್ ಈ ಅರಮನೆಯನ್ನು 1559ರಲ್ಲಿ ನಿರ್ಮಿಸಿದರು. ಇದು ಸಿಸೋಡಿಯಾ ರಜಪೂತರ ಕಾಲದಲ್ಲಿ ರಾಜಧಾನಿಯೂ ಆಗಿತ್ತು. ಪಿಚೋಲಾ ಕೆರೆಯ ದಡದಲ್ಲಿ ಈ ಅರಮನೆಯಿದೆ....
ಸಿಟಿ ಪ್ಯಾಲೇಸ್ ಮ್ಯೂಸಿಯಂ ಇರುವುದು ಸಿಟಿ ಪ್ಯಾಲೇಸಿನ ಒಳಗೆ. ಕಟ್ಟಡದ ನಿರ್ವಹಣೆಗೆ ಆದಾಯವನ್ನು ಗಳಿಸುವ ಉದ್ದೇಶದಿಂದ 1969ರಲ್ಲಿ ಇದನ್ನು ಸಾರ್ವಜನಿಕರಿಗೆ ಮುಕ್ತವಾಗಿಸಲಾಯಿತು. ಮ್ಯೂಸಿಯಂನಲ್ಲಿ ರಾಜ ಮನೆತನದ ಚಿತ್ರಗಳನ್ನು ಇರಿಸಲಾಗಿದೆ. ಮೇವಾರಿನ ಮಹಾರಾಣರ ಇತಿಹಾಸ, ಸಂಸ್ಕೃತಿ ಮತ್ತು ಸಂಪ್ರದಾಯವನ್ನು...
ಪಿಚೋಲಾ ಕೆರೆಯು ಕೃತಕ ಕೆರೆ. ಇದನ್ನು ನಿರ್ಮಿಸಿದ್ದು 1362ರಲ್ಲಿ. ಪಿಚೋಲಿ ಊರಿನಲ್ಲಿದ್ದುದರಿಂದ ಈ ಕೆರೆಗೆ ಪಿಚೋಲಿ ಕೆರೆ ಎಂದು ಹೆಸರಿಡಲಾಯಿತು. ನೀರಿನ ಅಗತ್ಯಗಳನ್ನು ಪುರೈಸುವುದಕ್ಕಾಗಿ ಇಲ್ಲೊಂದು ಆಣೆಕಟ್ಟನ್ನು ನಿರ್ಮಿಸಲಾಯಿತು. ಇದೇ ಉದ್ದೇಶಕ್ಕೆ ಕೆರೆಯೂ ಕೂಡಾ ನಿರ್ಮಾಣವಾಯಿತು. ಮಹಾರಾಣ ಉದಯ್ ಸಿಂಗ್ಗೆ...
ಫತೇಹ್ ಸಾಗರವು 1678ರಲ್ಲಿ ಮಹಾರಾಣ ಫತೇಹ್ ಸಿಂಗ್ರಿಂದ ನಿರ್ಮಿಸಲ್ಪಟ್ಟ ಸುಂದರವಾದ ಕೆರೆ. ಉದಯಪುರದ ನಾಲ್ಕು ಕೆರೆಗಳಲ್ಲಿ ಇದೂ ಒಂದು. ಈ ಕೆರೆ ನಗರದ ಹೆಮ್ಮೆ ಎಂದೇ ಪರಿಗಣಿತವಾಗಿದೆ. ಸುಂದರವಾದ ನೀಲಿ ವರ್ಣದ ನೀರು, ಸುತ್ತಲಿನ ಹಸಿರು ಪರಿಸರದಿಂದಾಗಿ ಈ ಪ್ರದೇಶಕ್ಕೆ ಎರಡನೇ ಕಾಶ್ಮೀರ ಎಂದು...
ಲೇಕ್ ಪ್ಯಾಲೇಸ್ ಇರುವುದು ಪಿಚೋಲಾ ಕೆರೆಯ ಮಧ್ಯೆ ಇರುವ ಜಗ್ ನಿವಾಸ ದ್ವೀಪದಲ್ಲಿ. ಮಹಾರಾಣ ಜಗತ್ ಸಿಂಗ್ ಈ ಅರಮನೆಯನ್ನು 1743ರಲ್ಲಿ ನಿರ್ಮಿಸಿದರು. ಸದ್ಯ ಈ ಅರಮನೆಯನ್ನು ಫೈವ್ ಸ್ಟಾರ್ ಹೊಟೆಲ್ ಆಗಿ ಪರಿವರ್ತಿಸಲಾಗಿದೆ. ಈ ಕಟ್ಟಡ ವಾಸ್ತುಶಿಲ್ಪ ಶೈಲಿಯು ಅತ್ಯಂತ...
ಸಜ್ಜನಗಢ ವನ್ಯಧಾಮವು ಉದಯಪುರದಿಂದ ಸುಮಾರು 5 ಕಿ.ಮೀ ದೂರದಲ್ಲಿದೆ. ಅಲ್ಲದೇ ಇದು ಸಜ್ಜನಗಢ ಅರಮನೆಯ ಸಮೀಪದಲ್ಲೇ ಇದೆ. ಬನ್ಸ್ದಾರಾ ಬೆಟ್ಟವು ವನ್ಯಧಾಮದ ಹಿಂಬದಿಯಲ್ಲಿದೆ. ಇದರಿಂದಾಗಿ ಈ ಪ್ರದೇಶ ಅದ್ಭುತವಾಗಿ ಕಾಣುತ್ತದೆ. ವನ್ಯಧಾಮದಲ್ಲಿ ಜಿಯಾನ್ ಕೆರೆ ಅಥವಾ ಬಾರಿ ಕೆರೆ ಎಂದು ಕರೆಯಲ್ಪಡುವ ಟೈಗರ್ ಕೆರೆ ಕೂಡಾ ಇದೆ. ಈ...
ಗುಲಾಬ್ ಬಾಘ್ನ್ನು ಸಜ್ಜನ್ ನಿವಾಸ್ ಉದ್ಯಾನ ಎಂದೂ ಕರೆಯುತ್ತಾರೆ, ಇದನ್ನು ಮಹಾರಾಣ ಸಜ್ಜನ್ ಸಿಂಗ್ 1850ರಲ್ಲಿ ನಿರ್ಮಿಸಿದ. ಉದಯಪುರದಲ್ಲೇ ಅತ್ಯಂತ ದೊಡ್ಡ ಉದ್ಯಾನ ಇದು. ಸುಮಾರು 0.40 ಚದರ ಕಿ.ಮೀ ವ್ಯಾಪ್ತಿಯನ್ನು ಇದು ಆಕ್ರಮಿಸಿಕೊಂಡಿದೆ. ಇಲ್ಲಿರುವ ವಿಕ್ಟೋರಿಯಾ ಹಾಲ್...
ದೂದ್ತಲಾಯಿ ಮ್ಯೂಸಿಕಲ್ ಉದ್ಯಾನವು ಪಿಚೋಲಾ ಕೆರೆಯ ಸಮೀಪದಲ್ಲೇ ಇದೆ. ಇದನ್ನು ಉದಯಪುರ ಅರ್ಬನ್ ಡೆವೆಲಪ್ಮೆಂಟ್ ಟ್ರಸ್ಟ್ ನಿರ್ವಹಿಸುತ್ತದೆ. ರಾಜಸ್ತಾನದಲ್ಲೇ ಮೊದಲ ಸಂಗೀತ ಕಾರಂಜಿಯನ್ನು ಇಲ್ಲೇ ಮಾಡಲಾಯಿತು. ಪ್ರವಾಸಿಗರು ಸುಂದರವಾದ ಸೂರ್ಯಾಸ್ತವನ್ನು ಇಲ್ಲಿಂ ದನೋಡಬಹುದು.
ಸಹೇಲಿಯೋಂಕಿ ಬಾರಿ ಎಂದರೆ ಮಹಿಳೆಯರ ಉದ್ಯಾನ ಎಂದರ್ಥ. ಇದನ್ನು 18ನೇ ಶತಮಾನದಲ್ಲಿ ರಾಜ ಮನೆತನದ ಮಹಿಳೆಯರಿಗಾಗಿ ಮಹಾರಾಣ ಸಂಗ್ರಾಮ್ ಸಿಂಗ್ ನಿರ್ಮಿಸಿದ್ದರು. ಈ ಉದ್ಯಾನವನ್ನು ಸ್ವತಃ ರಾಜನೇ ವಿನ್ಯಾಸಗೊಳಿಸಿದ್ದರು ಎಂದು ಹೇಳಲಾಗಿದೆ. ನಂತರ ಇದನ್ನು ತನ್ನ ರಾಣಿಗೆ ಉಡುಗೊರೆಯಾಗಿ ನೀಡಿದ ಎಂದು ಹೇಳಲಾಗಿದೆ....
ಸಿಟಿ ಪ್ಯಾಲೇಸಿನ ಪುರುಷರ ವಿಭಾಗವೇ ಬಡಾ ಮಹಲ್. ಇದನ್ನು 17ನೇ ಶತಮಾನದಲ್ಲಿ ನಿರ್ಮಿಸಲಾಯಿತು. ಬಡಾ ಮಹಲ್ನ ಶಬ್ದಶಃ ಅರ್ಥ, ದೊಡ್ಡ ಅರಮನೆ ಎಂದು. ದೊಡ್ಡದಾದ ಒಂದು ಕಲ್ಲಿನ ಮೇಲೆ ಭೂಮಟ್ಟದಿಂದ ಸುಮಾರು 90 ಅಡಿ ಎತ್ತರದಲ್ಲಿ ನಿರ್ಮಿಸಲಾಗಿದೆ. ಸುಂದರವಾದ ಹಸಿರು ಪರಿಸರ, ಉದ್ಯಾನ, ಟೆರೇಸ್, ಕಂಬಗಳು,...
ಜಗದೀಶ ದೇವಸ್ಥಾವು ಈ ಹಿಂದೆ ಜಗನ್ನಾಥ ರೈ ದೇವಸ್ಥಾನ ಎಂದು ಹೆಸರಾಗಿತ್ತು. ಇದು ಉದಯಪುರದ ಸಿಟಿ ಪ್ಯಾಲೇಸಿನ ಒಂದು ಪ್ರಮುಖ ಭಾಗ. ದೇವಸ್ಥಾನವು ವಿಷ್ಣುವಿಗೆ ಸಮರ್ಪಿತವಾಗಿದೆ. ಇದನ್ನು ನಗರದ ಅತ್ಯಂತ ದೊಡ್ಡ ದೇವಸ್ಥಾನ ಎನ್ನಲಾಗಿದೆ. ಇಂಡೋ ಆರ್ಯನ್ ವಾಸ್ತುಶಿಲ್ಪ ಶೈಲಿಯ ಪ್ರತೀಕವಿದು. 1651ರಲ್ಲಿ ಉದಯಪುರದ ಮಹಾರಾಣ...
ಫತೇಹ್ ಸಾಗರ ಕೆರೆಯಲ್ಲಿರುವ ನೆಹರು ಗಾರ್ಡನ್, ಸುಂದರವಾದ ಒಂದು ದ್ವೀಪ. ಭಾರತದ ಪ್ರಧಾನಿ ಜವಾಹರಲಾಲ್ ನೆಹರು ನೆನಪಿಗೆ ಈ ದ್ವೀಪಕ್ಕೆ ನೆಹರು ಉದ್ಯಾನ ಎಂದು ಹೆಸರಿಡಲಾಗಿದೆ. ಅವರ ಹುಟ್ಟುಹಬ್ಬದ ನೆನಪಿಗೆ 1967 ನವೆಂಬರ್ ಹದಿನಾಲ್ಕರಿಂದ ಸಾರ್ವಜನಿಕ ಪ್ರವೇಶಕ್ಕೆ ತೆರೆಯಲಾಯಿತು. ಉದಯಪುರದಲ್ಲಿ ಪ್ರಸಿದ್ಧ...
ಶಿಲ್ಪಗ್ರಾಮವನ್ನು ಕರಕುಶಲ ಗ್ರಾಮ ಎಂದೂ ಕರೆಯಲಾಗುತ್ತದೆ. ಉದಯಪುರದಿಂದ ಸುಮಾರು 3 ಕಿ.ಮೀ ದೂರದಲ್ಲಿದೆ. ಇಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ನಿರ್ಮಿಸಿದ ಸುಮಾರು 26 ಗುಡಿಸಲುಗಳಿವೆ. ಈ ಗುಡಿಸಲುಗಳಲನ್ನು ದಿನನಿತ್ಯದ ಉಪಯೋಗಕ್ಕೆ ಬಳಸಬಹುದಾದಷ್ಟು ಸುಸಜ್ಜಿತವಾಗಿದೆ. ಎಲ್ಲವುಗಳ ಪೈಕಿ ಐದು ಗುಡಿಸಲುಗಳು ಮೇವಾರಿನ ನೇಕಾರ...
ಸುಖಾದಿಯಾ ಸರ್ಕಲ್ ಅಥವಾ ಸುಖಾದಿಯಾ ಸ್ಕ್ವೇರನ್ನು ಉದಯಪುರದ ಪಂಚವಟಿಯಲ್ಲಿದೆ. 1970ರಲ್ಲಿ ಇದನ್ನು ನಿರ್ಮಿಸಲಾಗಿದ್ದು ಮೋಹನ್ ಲಾಲ್ ಸುಖಾದಿಯಾರಿಂದ ಈ ಹೆಸರು ಬಂದಿದೆ. ಇವರು ರಾಜಸ್ತಾನದ ಮುಖ್ಯಮಂತಿಯಾಗಿದ್ದವರು. ಈ ಸುಂದರ ಪ್ರದೇಶವು ಕೊಳದ ಸುತ್ತಲೂ ಇದ್ದು ಕಾರಂಜಿ ಮತ್ತು ದೊಡ್ಡ ಉದ್ಯಾನವೂ ಕೂಡಾ...
ಫತೇಹ್ ಪ್ರಕಾಶ ಅರಮನೆಯು ಪಿಚೋಲಾ ಕೆರೆಯ ಸಮೀಪದಲ್ಲೇ ಇದೆ. ಮತ್ತು ಇದನ್ನು ಸದ್ಯ ಹೋಟೆಲ್ ಆಗಿ ಪರಿವರ್ತಿಸಲಾಗಿದೆ. ಇದನ್ನು ಮೇವಾರ ರಾಜ ಮಹಾರಾಣ ಫತೇಹ್ ಸಿಂಗ್ರ ಹೆಸರಿನಿಂದ ಗುರುತಿಸಲಾಗಿದೆ.