ಸಂತ ಗರೀಬ್ ನಾಥ್ ಮಠವು ದಶಾವತಾರ ಮಠವೆಂದೂ ಸಹ ಕರೆಯಲ್ಪಡುತ್ತದೆ. ಇದು ತುಳಜಾ ಭವಾನಿಯ ಮುಖ್ಯ ದೇವಾಲಯಕ್ಕೆ ಸಮೀಪದಲ್ಲಿದೆ.
ಈ ಮಠವು ಕೆಲ ಶತಮಾನಗಳ ಹಿಂದೆ ಭಗವಾನ್ ಮಹಾವಿಷ್ಣುವಿನ ಪರಮ ಭಕ್ತನಾದ ಸಂತ ಗರಿಬ್ ನಾಥ್ ರಿಂದ ಸ್ಥಾಪಿಸಲ್ಪಟ್ಟಿತು. ಭಗವಾನ್ ಮಹಾವಿಷ್ಣುವಿನ ಹತ್ತು ಅವತಾರಗಳನ್ನು ಚಿತ್ರಿಸಿರುವ ಚಿತ್ರಗಳಿಂದ ಕೂಡಿರುವ ಈ ಮಠವು ಅತ್ಯಂತ ಆಕರ್ಷಕ ಸ್ಥಳವಾಗಿ ಕಂಗೊಳಿಸುತ್ತದೆ.
ಪ್ರಸ್ತುತ ಈ ಮಠವು ಪ್ರವಾಸಿಗರಿಗೆ ಯೋಗ ಮತ್ತು ಧ್ಯಾನ ತರಗತಿಗಳನ್ನು ನಡೆಸುತ್ತದೆ. ಈ ಮಠವು ತನ್ನ ಭಕ್ತರಿಗಾಗಿ ದಿನದ ಎಲ್ಲಾ ಸಮಯದಲ್ಲಿ ತೆರೆದಿಡಲ್ಪಟ್ಟಿರುತ್ತದೆ.