ಜೀವನದಲ್ಲಿ ಹಲವಾರು ರಹಸ್ಯಗಳು ನಡೆಯುತ್ತಿರುತ್ತವೆ. ಆದರೆ ಅವುಗಳನ್ನು ಕಣ್ಣಾರೆ ಕಂಡಾಗಲೇ ನಮಗೆ ಸತ್ಯ ಸತ್ಯತೆಗಳ ಬಗ್ಗೆ ತಿಳಿಯುತ್ತದೆ. ಜೀವನದಲ್ಲಿ ಅತಿ ಮುಖ್ಯವಾದುದು ಆದಿ ಮತ್ತು ಅಂತ್ಯ. ಇವೆರಡೂ ಸಹಾ ಭೂಮಿಯ ಪ್ರತಿಯೋಂದು ಜೀವಿಗೂ ದೇವರು ನೀಡಿದ ವರ. ಇಂತಹ ವರಗಳು ಕೆಲವೊಮ್ಮೆ ತಲೆಕೆಳಗಾಗುತ್ತವೆ.
ಅಂದರೆ ಜೀವನದ ಅಂತ್ಯದ ಸಮಯದಲ್ಲಿ ಮರಣದ ಅಧಿಪತಿಯಾದ ಯಮ ಧರ್ಮ ಕೂಡ ತಪ್ಪು ಮಾಡುತ್ತಾನೆ ಎಂದರೆ ತಪ್ಪಾಗಲಾರದು. ಸತ್ತವನು ಮತ್ತೇ ಎದ್ದು ಬರುವುದು. ಯಮಪುರಿಯ ರೌರವ ನಗರವನ್ನು ಕಂಡೆವು ಎಂದು ಸತ್ತ ಜೀವ ಎದ್ದು ಹೇಳುವುದು ಸಾಮಾನ್ಯವಾಗಿ ನಾವು ಕಥೆಗಳಲ್ಲಿ ಹಾಗೂ ದೊಡ್ಡವರ ಬಾಯಿಯಲ್ಲಿ ಕೇಳಿದ್ದೇವೆ. ಕೆಲವರು ಇವುಗಳನ್ನು ನಂಬಿದರೆ ಮತ್ತೇ ಕೆಲವರು ಇವೆಲ್ಲಾ ಸುಳ್ಳು ಎಂದು ಭಾವಿಸುತ್ತಾರೆ.
ನಿಜವಾಗಿಯೂ ಜೀವನದಲ್ಲಿ ಇಂಥಹ ಘಟನೆಗಳು ನಡೆಯುತ್ತವೆ ಎಂಬುದನ್ನು ಪ್ರಸುತ್ತ ಲೇಖನದಲ್ಲಿ ತಿಳಿಯೋಣ.
ಸತ್ತ ದೇಹ
ಹೋದ ಜೀವ ಮತ್ತೆ ಬಾರದು ಎಂದು ತಿಳಿದವರು ಹೇಳುತ್ತಾರೆ. ಹಾಗಾದರೆ ಇದು ಸುಳ್ಳೇ ಎಂದು ಅನಿಸದಿರದು. ಸತ್ತ ಒಬ್ಬ ಯುವಕನನ್ನು ಸ್ಮಾಶನಕ್ಕೆ ಕೊಂಡ್ಯುವಾಗ ಸತ್ತವನು ಎದ್ದು ಕೊಳಿತ್ತಿದ್ದಾನೆ. ಇದೇನಪ್ಪ ಆಶ್ಚರ್ಯ ಎಂದು ಕೊಳ್ಳುತ್ತಿದ್ದೀರಾ ಇದು ನಿಜ.
PC:YOUTUBE
ಎಲ್ಲಿ?
ಈ ಆಶ್ಚರ್ಯಕರವಾದ ಘಟನೆ ನಡೆದಿದ್ದು ನಮ್ಮ ಕರ್ನಾಟಕದಲ್ಲಿಯೇ. ಕರ್ನಾಕದ ಹೆಸರಾಂತ ಜಿಲ್ಲೆ ಧಾರವಾಡದಲ್ಲಿ.
PC:YOUTUBE
ಏನಾಗಿತ್ತು?
ಅಸಲಿಗೆ ಸತ್ತ ಯುವಕನಿಗೆ ನಾಯಿ ಕಚ್ಚಿದ್ದರಿಂದ ಆಸ್ಪತ್ರೆಗೆ ಸೇರಿಸಲಾಗಿತ್ತು. ಪರೀಕ್ಷೀಸಿದ ವೈದ್ಯರು ಹೈ ಫಿವರ್ ಎಂದು ವೆಂಟಿಲೇಟರ್ ಮೇಲೆ ಮಲಗಿಸಿದರು.
PC:YOUTUBE
ಏರಿಳಿತ
ಇದ್ದಕ್ಕಿದ್ದ ಹಾಗೆ ಆರೋಗ್ಯದಲ್ಲಿ ಏರಿಳಿತವಾದ್ದರಿಂದ ವೈದ್ಯರು ಎಷ್ಟೇ ಕಷ್ಟ ಪಟ್ಟರೂ ಯುವಕನನ್ನು ಬದುಕಿಸಲು ಸಾಧ್ಯವಾಗಲಿಲ್ಲ.
PC:YOUTUBE
ಮೃತ
ಯುವಕನ ಬಂಧುಗಳು ಯುವಕ ಸತ್ತಿದ್ದಾನೆ ಎಂದು ದೃಡಿಕರಣಗೊಂಡರು. ನಂತರ ಸಂಪ್ರದಾಯಿಕವಾಗಿ ಮರಣ ಕಾರ್ಯವನ್ನು ಮಾಡಲು ಮುಂದಾದರು.
PC:YOUTUBE
ಜೀವ
ಶವವನ್ನು ಸಂಸ್ಕಾರ ಮಾಡಲು ಸ್ಮಶಾನಕ್ಕೆ ಕೊಂಡ್ಯುಯುತ್ತಿದ್ದರು. ಮನೆಯಿಂದ ಸುಮಾರು 2 ಕಿ,ಮೀ ದೂರ ಕ್ರಮಿಸಿದಾಗ ಯುವಕ ಕೈ ಕಾಲು ಅಲ್ಲಾಡಿಸಲು ತೊಡಗಿದ.
PC:YOUTUBE
ಎದ್ದು ಕೂತ
ದೀರ್ಘವಾದ ಊಸಿರನ್ನು ತೆಗೆದುಕೊಳ್ಳುತ್ತಾ ಸತ್ತ ಯುವಕ ಎದ್ದು ಕೊಳಿತನು. ಇದರಿಂದ ಭಯ ಭೀತರಾದ ಜನರು ಆತನಿಗೆ ತ್ವರಿತವಾಗಿ ಆಸ್ಪತ್ರೆಗೆ ದಾಖಲಿಸಿದರು.
PC:YOUTUBE
ಗೌರಿಬಿದನೂರು
ಇದೇ ತರಹದ ಘಟನೆ ಗೌರಿಬಿದನೂರಿನಲ್ಲಿಯೂ ನಡೆದಿತ್ತು. ಸತ್ತ ಮುದುಕಿ ಎದ್ದು ಕೊಳಿತ್ತಿದ್ದು, ಈಗಲೂ ಆ ಜನರಿಗೆ ಕಣ್ಣ ಮುಂದಿದೆ.
PC:YOUTUBE
ಮುದುಕಿ
ಸಂಜೆ 5 ಗಂಟೆಗೆ ಆಕಸ್ಮಿಕವಾಗಿ ಮೃತಳಾದ ಅಜ್ಜಿ. ಆ ಅಜ್ಜಿಯನ್ನು ವೈದ್ಯರಿಂದ ಸತ್ತಿರುವ ರುಜುವಾತನ್ನು ಸಂಬಂಧಿಕರು ಪಡೆದುಕೊಂಡೇ ಅಂತ್ಯಕ್ರೀಯೆಗೆ ಸಿದ್ದ ಪಡಿಸಿದ್ದರು.
PC:YOUTUBE
ವಿಸ್ಮಯ
ಸಂಜೆ 5 ಗಂಟೆಗೆ ಜೀವ ಹೋದ್ದರಿಂದ ಸಂಬಂಧಿಕರೆಲ್ಲಾ ಮರುದಿನ ಮಧ್ಯಾಹ್ನ ಅಂತ್ಯ ಕ್ರಿಯೆ ಮಾಡಲು ಸೂಕ್ತವಾದ ಸಮಯವೆಂದು ತೀರ್ಮಾನಿಸಿದರು.
PC:YOUTUBE
ಮರುದಿನ
ಮರುದಿನ ಮಧ್ಯಾಹ್ನ ಸ್ಮಾಶನಕ್ಕೆ ಅಣಿ ಮಾಡುತ್ತಿದ್ದರು. ನೋಡ ನೋಡುತ್ತಿದ್ದಂತೆಯೇ ಅಜ್ಜಿ ಧೀರ್ಘವಾದ ಊಸಿರು ತೆಗೆದುಕೊಂಡು ಉಸಿರಾಡ ತೊಡಗಿದರು.
PC:YOUTUBE
ಜನರು
ಇದರಿಂದ ಭಯಭೀತರಾದ ಜನರು ಎದ್ದು ಬಿದ್ದು ಓಡಿಹೋದರು. ಸಾಮಾನ್ಯವಾಗಿ ನಾವು ಜೀವನದಲ್ಲಿ ಇಂಥಹ ಘಟನೆಗಳು ಸಂಭವಿಸುವುದಿಲ್ಲ ಎಂದು ಅಂದು ಕೊಂಡಿರುವುದು ನಡೆದಾಗ ಒಂದು ವಿಸ್ಮಯ ಸೃಷ್ಠಿಯಾಗುತ್ತದೆ. ನಂಬದವರು ಕೂಡ ನಂಬಲೇಬೇಕಾದ ಹಲವು ನಿದರ್ಶಗಳು ದಿನನಿತ್ಯ ಸೃಷ್ಟಿಯಾಗುತ್ತದೆ.
PC:YOUTUBE