ಶಿವಾಲಯದಲ್ಲಿ ಶಿವಲಿಂಗವೇ ಇಲ್ಲದ ದೇವಾಲಯ ಎಲ್ಲಿಯಾದರೂ ನೋಡಿದ್ದೀರಾ? ಆದರೆ ಕೇರಳದಲ್ಲಿ ಆಂತಹ ವಿಭಿನ್ನವಾದ ದೇವಾಲಯವಿದೆ. ಕೇರಳ ರಾಜ್ಯದ ತ್ರಿಸೂರ ಜಿಲ್ಲೆ. ಈ ಜಿಲ್ಲೆಯನ್ನು ತ್ರಚೂರ ಎಂದು ಸಹ ಕರೆಯುತ್ತಾರೆ. ಈ ಜಿಲ್ಲೆಯಲ್ಲಿ ಪುರಾತನವಾದ ಹಿಂದೂ ದೇವಾಲಯಗಳು, ಚರ್ಚ್ ಹಾಗೂ ಮಸೀದಿಗಳಿವೆ. ಈ ಪ್ರದೇಶದಲ್ಲಿ ನಡೆಯುವ ಉತ್ಸವಗಳು ಕೇರಳದ ಮಹೋನ್ನತ ಸಮಾರಂಭ ಎಂದು ಭಾವಿಸಲಾಗುತ್ತದೆ.
ತ್ರಿಸೂರ್ ಎನ್ನುವ ಹೆಸರು "ತಿರು-ಶಿವ-ಪೆರೂರ್" ಅಂದರೆ ಪರಮಶಿವನ ಹೆಸರು ಹೊಂದಿರುವ ನಗರವಿದು ಎಂಬ ಅರ್ಥವನ್ನು ನೀಡುತ್ತದೆ. ಪುರಾತನ ಕಾಲದಲ್ಲಿ ಈ ನಗರವನ್ನು "ವಿಷಾಂಭಾದ್ರಿ ಪುರಂ" ಮತ್ತು "ದಕ್ಷಿಣ ಕೈಲಾಸ" ಎಂದೂ ಸಹ ಕರೆಯುತ್ತಿದ್ದರು. ತ್ರಿ-ಶಿವ-ಪರೂರ್ ಎಂದರೇ ಮೂರು ಶಿವಾಲಯವಿರುವ ದೇವಾಲಯ ಎಂದೂ ಕೂಡ ಅರ್ಥವಿದೆ.
ಹಾಗಾಗಿ ಈ ಪ್ರದೇಶದಲ್ಲಿ ವಡಕ್ಕುನಾಥ ದೇವಾಲಯ, ಅಶ್ವಕೇಶ್ವರ ಶಿವಾಲಯ ಮತ್ತು ಇರತ್ತವೀರಾ ಶಿವಾಲಯ ಎನ್ನುವ 3 ದೇವಾಲಯಗಳಿವೆ.
ಪ್ರಸ್ತುತ ಲೇಖನದಲ್ಲಿ ಶಿವಾಲಯದಲ್ಲಿ ಶಿವಲಿಂಗವೇ ಇಲ್ಲದ ದೇವಾಲಯದ ಬಗ್ಗೆ ತಿಳಿಯೋಣ.
ತ್ರಿಸೂರ್
ತ್ರಿಸೂರ್ನಲ್ಲಿ ಪೆರಿಯಾರ್ ನದಿ, ಚಲಕುಡಿ ನದಿ, ಕುರುಮಲಿ ನದಿ (ಕುರುವನ್ನೂರ್ ನದಿಯ ಉಪನದಿ) ಮತ್ತು ಪೊನ್ನೈ ಇನ್ನೂ ಹಲವಾರು ನದಿಗಳು ಈ ಪ್ರದೇಶದ ಸಮೀಪದಲ್ಲಿ ಹರಿಯುತ್ತಿದೆ. ಈ ನದಿಗಳು ಕೇರಳದ ಅತ್ಯಂತ ಪವಿತ್ರವಾದ ನದಿ ಎಂದು ಭಾವಿಸಲಾಗುತ್ತದೆ.
PC:Adarsh Padmanabhan
ಅರೆಬಿಯನ್ ಸಮುದ್ರ
ಈ ಪವಿತ್ರವಾದ ನದಿಗಳು ಪೂರ್ವದ ಪರ್ವತದಿಂದ ಜನ್ಮಿಸಿ ಅಲ್ಲಿಂದ ಪಶ್ಚಿಮ ಭಾಗಕ್ಕೆ ಪ್ರವಹಿಸಿ ಅರೆಬಿಯನ್ ಸಮುದ್ರಕ್ಕೆ ಸೇರುತ್ತದೆ.
PC:Aruna
ಅಥಿರಪಲ್ಲಿ ಜಲಪಾತ
ಈ ಪ್ರಧಾನ ನದಿಗಳಲ್ಲಿ ಕೆಲವು ಉಪನದಿಗಳ ಸಂಗಮವಾಗುತ್ತದೆ. ಈ ಜಿಲ್ಲೆಯಲ್ಲಿ ಅಥಿರಪಲ್ಲಿ ಜಲಪಾತ (ಭಾರತೀಯ ನಯಾಗರಾ) ಗಳನ್ನು ಸಹ ಕಾಣಬಹುದಾಗಿದೆ. ಈ ಜಲಪಾತವು ಅತ್ಯಂತ ರಮಣೀಯವಾಗಿದೆ. ಇಲ್ಲಿಗೆ ಹಲವಾರು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ.
PC:Adarsh Padmanabhan
ಸಂಪ್ರದಾಯ
ತ್ರ್ರಿಸೂರ ಅತ್ಯಂತ ಸುಂದರವಾದ ಚಾರಿತ್ರಿ ಸಂಪ್ರದಾಯವನ್ನು ಹೊಂದಿದೆ. ಕೇರಳದ ಸಾಂಸ್ಕøತಿಕ ಕೇಂದ್ರವಾಗಿ ಗುರುತಿಸಿಕೊಂಡಿರುವ ಪ್ರಸಿದ್ಧವಾದ ಸ್ಥಳ ತ್ರಿಸೂರು. ಸಾಮಾನ್ಯವಾಗಿ ತಿಳಿದಂತೆ ಕೇರಲದ ಸಂಪ್ರದಾಯವು ಅತ್ಯಂತ ವಿಭಿನ್ನವಾಗಿದ್ದು. ದಕ್ಷಿಣ ಭಾರತದ ಹೆಸರಾಂತ ಸಂಸ್ಕ್ರತಿಯೆಂದೇ ಖ್ಯಾತಿಯಾಗಿದೆ.
PC:Mullookkaaran
ಕಣ್ಣಿಗೆ ಕಾಣದ ಶಿವಲಿಂಗ
ಕೇರಳದ ಮುಖ್ಯ ಮೂರು ಶಿವಲಿಂಗಗಳಿವೆ ಅವುಗಳೆಂದರೆ ವಡಕ್ಕುನಾಥ ದೇವಾಲಯ, ಅಶ್ವಕೇಶ್ವರ ಶಿವಾಲಯ ಮತ್ತು ಇರತ್ತವೀರಾ ಶಿವಾಲಯ ಎನ್ನುವ 3 ದೇವಾಲಯಗಳು. ಅವುಗಳಲ್ಲಿ ವಡಕ್ಕು ನಾಥ ದೇವಾಲಯದಲ್ಲಿ ಶಿವಲಿಂಗದ ದರ್ಶನವನ್ನು ಪಡೆಯಲು ಸಾಧ್ಯವಾಗುವುದಿಲ್ಲ.
PC:Rkrish67
ಎಣ್ಣೆಯಿಂದ ಅಭಿಷೇಕ
ವಡಕ್ಕು ನಾಥ ಶಿವಲಿಂಗಕ್ಕೆ ಸಾವಿರಾರು ವರ್ಷಗಳಿಂದ ಎಣ್ಣೆಯಿಂದ ಅಭಿಷೇಕ ಮಾಡಿ ಮಾಡಿ ಶಿವ ಲಿಂಗವು ಒಂದು ಗುಡ್ಡೆಯ ರೀತಿ ಮಾರ್ಪಾಟಾಗಿದೆ ಎಂತೆ. ಸುಮಾರು 5 ರಿಂದ 6 ಮೀಟರ್ ಎತ್ತರದ ಎಣ್ಣೆಯ ಗುಡ್ಡೆಯ ಕೆಳಗೆ ಶಿವಲಿಂಗ ಮುಚ್ಚಿ ಹೋಗಿರುವುದರಿಂದ ಲಿಂಗದ ದರ್ಶನವನ್ನು ಪಡೆಯಲು ಸಾಧ್ಯವಾಗುವುದಿಲ್ಲ.
PC:Jayeshj
ಬೇಸಿಗೆ
ಈ ಶಿವಲಿಂಗದ ಮೇಲೆ ಸಾವಿರಾರು ವರ್ಷದಿಂದ ಅಭಿಷೇಕ ಮಾಡಿ ಗುಡ್ಡೆಯ ರೀತಿಯಾಗಿದೆ. ಅತ್ಯಂತ ಬೇಸಿಗೆ ಕಾಲದಲ್ಲೂ ಕೂಡ ಲಿಂಗದ ಮೇಲೆ ಇರುವ ಎಣ್ಣೆಯ ಗಡ್ಡೆಗಳು ಸ್ವಲ್ಪವೂ ಕರಗುವುದಿಲ್ಲವಂತೆ.
PC:Rkrish67
ಮಕ್ಕಳು
ಈ ದೇವಾಲಯದ ಒಳಗೆ ಒಂದು ವರ್ಷದ ಪುಟ್ಟ ಮಕ್ಕಳನ್ನು ಒಳ ಪ್ರವೇಶವನ್ನು ನೀಡುವುದಿಲ್ಲ. ಇಲ್ಲಿ ಹಲವಾರು ದೇಶ ವಿದೇಶಗಳಿಂದ ಈ ಪವಿತ್ರವಾದ ದೇವಾಲಯಕ್ಕೆ ಬರುತ್ತಾರೆ.
PC:Aruna
ಸಂಪ್ರಾದಾಯ ವಸ್ತ್ರಧಾರಣ
ಈ ಪವಿತ್ರವಾದ ದೇವಾಲಯದ ಒಳಗೆ ಪ್ರವೇಶ ಪಡೆಯಬೇಕಾದರೆ ಸಂಪ್ರದಾಯಿಕ ವಸ್ತ್ರವನ್ನು ಧರಿಸಬೇಕು. ಮಹಾಶಿವ ರಾತ್ರಿಯದಿನದಂದೂ ಈ ದೇವಾಲಯವನ್ನು ಅತ್ಯಂತ ಸುಂದರವಾಗಿ ಅಲಂಕಾರ ಹಾಗೂ ತೆಜೋಮಯವಾಗಿ ಮಾರ್ಪಡಿಸುತ್ತಾರೆ.
PC:Manojk
ಏಕೈಕ ಶಿವಲಿಂಗ
ಪ್ರಪಂಚದಲ್ಲಿ ಶಿವಲಿಂಗ ಕಣ್ಣಿಗೆ ಗೋಚಾರವಾಗದೇ ದರ್ಶನ ನೀಡುವ ಏಕೈಕ ಶಿವಲಿಂಗ ಈ ದೇವಾಲಯವಾಗಿದೆ.
PC:Krish9
ಅರಸರ ಆಳ್ವಿಕೆ
ತ್ರಿಸೂರ್ ಪ್ರದೇಶವನ್ನು 9 ನೇ ಶತಮಾನ ಹಾಗೂ 12 ನೇ ಶತಮಾನದ ಮಧ್ಯೆ ಭಾಗದಲ್ಲಿ ಮಹಾ ಉದಯಪುರಕ್ಕೆ ಸೇರಿದ ಕುಲಶೇಖರ ರಾಜರು ಆಳ್ವಿಕೆ ನಡೆಸಿದರು. ಇವರೇ ಈ ದೇವಾಲಯವನ್ನು ನಿರ್ಮಿಸಿರಬೇಕು ಎಂಬ ಅನುಮಾನಗಳಿವೆ.
PC:Challiyan
ತ್ರಿಸೂರು
ತ್ರಿಸೂರಿನಿಂದ ಸುಮಾರು 25 ಕಿ,ಮೀ ದೂರದಲ್ಲಿ ಗುರುವಾಯೂರೆಲ್ ಎಂಬ ಪ್ರಖ್ಯಾತವಾದ ಕೃಷ್ಣನ ದೇವಾಲಯವಿದೆ. ದೇಶ ವಿದೇಶಗಳಿಂದ ಈ ಪವಿತ್ರವಾದ ಕೃಷ್ಣನ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡುತ್ತಿರುತ್ತಾರೆ. ಇಲ್ಲಿ ಹಿಂದೂಗಳ ದೇವಾಲಯಗಳೇ ಅಲ್ಲದೇ ಮುಸ್ಲಿಮರ ಹಾಗೂ ಕ್ರೈಸ್ತರ ಯಾತ್ರಾ ಸ್ಥಳಗಳು ಕೂಡ ಇವೆ.
ಮಸೀದಿ
ಚರ್ಮನ್ ಜಮಾ ಮಸೀದಿ ಹಿಂದೂ ದೆವಾಲಯದ ಶೈಲಿಯಲ್ಲಿ ನಿರ್ಮಿಸಲಾಗಿದೆ. ಇದು ಪ್ರಪಂಚದಲ್ಲಿನ ಮದೀನಾ ತದನಂತರದ ನಿರ್ಮಾಣ ಮಾಡಿರುವ 2 ನೇ ಮಸೀದಿ ಎಂದು ಭಾವಿಸಲಾಗಿದೆ.