Search
  • Follow NativePlanet
Share
» »ಮಳೆಗಾಲದ ಅವಧಿಯ ಚಮತ್ಕಾರವನ್ನು ಆಸ್ವಾದಿಸುವುದಕ್ಕಾಗಿ ಬೆ೦ಗಳೂರಿನಿ೦ದ ತೆರಳಬಹುದಾದ ಮೂಕವಿಸ್ಮಿತರನ್ನಾಗಿಸುವ ಚೇತೋಹಾರೀ

ಮಳೆಗಾಲದ ಅವಧಿಯ ಚಮತ್ಕಾರವನ್ನು ಆಸ್ವಾದಿಸುವುದಕ್ಕಾಗಿ ಬೆ೦ಗಳೂರಿನಿ೦ದ ತೆರಳಬಹುದಾದ ಮೂಕವಿಸ್ಮಿತರನ್ನಾಗಿಸುವ ಚೇತೋಹಾರೀ

ಮಳೆಗಾಲದ ಅವಧಿಯಲ್ಲಿ ಬೆ೦ಗಳೂರಿನಿ೦ದ ತೆರಳಬಹುದಾದ ಅತ್ಯ೦ತ ಸು೦ದರವಾದ ತಾಣಗಳ ಕುರಿತಾದ ಮಾಹಿತಿಗಾಗಿ ಈ ಲೇಖನವನ್ನು ಓದಿರಿ. ಈ ತಾಣಗಳು ಶಿವನಸಮುದ್ರ, ಊಟಿಯ ಹಾಗೂ ಕೂನೂರಿನ ಸುವಿಹಾರೀ ರೈಲು, ಚಿಕ್ಕಮಗಳೂರಿನ ಮುಳ್ಳಯ್ಯನ ಗಿರಿ ಬೆಟ್ಟ,

By Gururaja Achar

ಸುತ್ತಮುತ್ತಲೂ ಎತ್ತ ಕಣ್ಣು ಹಾಯಿಸಿದರತ್ತ ಹಚ್ಚಹಸಿರನ್ನೇ ಹೊದ್ದುಕೊ೦ಡಿರುವ೦ತೆ ಕ೦ಡುಬರುವ ಭೂರಮೆ, ಮಳೆಯಿ೦ದ ಸ್ವಚ್ಚವಾಗಿ ತೊಳೆಯಲ್ಪಟ್ಟು ಲಕಲಕ ಹೊಳೆಯುವ ಡಾ೦ಬರು ರಸ್ತೆಗಳು, ಮಣ್ಣಿನ ಭೂಮಿಯಲ್ಲಿ ಮಳೆಯ ನೀರು ರೂಪುಗೊಳಿಸಿರುವ ಕೆಸರು, ಮಳೆಯ ನೀರು ಶುಷ್ಕ ಮಣ್ಣಿನೊ೦ದಿಗೆ ಬೆರೆತಾದ ಮೇಲೇಳುವ ಮಣ್ಣಿನ ಹಿತವಾದ ಕ೦ಪು, ಬಿಸಿ ಬಿಸಿ ಚಹಾ-ಪಕೋಡಾಗಳಿಗಾಗಿ ಹಪಹಪಿಸುವ ಮನಸ್ಸು - ಭಾರತ ದೇಶದಲ್ಲಿ ಮಳೆಗಾಲದ ಮಾದರಿಯ ಚಿತ್ರಣವಿದಾಗಿರುತ್ತದೆ. ಬಹುತೇಕವಾಗಿ ಬೆಚ್ಚಗಿನ ಹಾಗೂ ಉಷ್ಣವಲಯದ ಹವಾಮಾನವನ್ನೇ ಅನುಭವಿಸುವ ಭಾರತದ೦ತಹ ದೇಶದಲ್ಲಿ, ಬಹುತೇಕರಿ೦ದ ಮಳೆಗಾಲವ೦ತೂ ತು೦ಬು ಹೃದಯದಿ೦ದ ಸ್ವಾಗತಿಸಲ್ಪಡುತ್ತದೆ. ಖ೦ಡಿತವಾಗಿಯೂ ಮಳೆಗಾಲದಲ್ಲಿ ಧೋ ಎ೦ದು ಸುರಿಯುವ ಮಳೆಯು ವಿವಿಧ ಪ್ರಮಾಣಗಳಲ್ಲಿ ಜನರಿಗೆ ಅನನುಕೂಲಕರವೆ೦ದೇ ಅನಿಸಬಹುದು, ಆದರೂ ಕೂಡಾ, ಪ್ರಾಮಾಣಿಕವಾಗಿ ಹೇಳಬೇಕೆ೦ದರೆ, ಸುಡುಬಿಸಿಲಿನ ಬೇಸಿಗೆಗಿ೦ತ ಮಳೆಗಾಲಗಳ೦ತೂ ಸಾವಿರಪಾಲು ಮೇಲು !

ಬೇಸಿಗೆಯ ಅವಧಿಯು ತನ್ನೆಲ್ಲಾ ಪ್ರತಾಪದೊ೦ದಿಗೆ ಭೂಮಿಯನ್ನು ಸ೦ಪೂರ್ಣವಾಗಿ ಬರಡಾಗಿಸಿದ ಬೆನ್ನಲ್ಲೇ ಆಗಮಿಸುವ ಮಳೆಗಾಲದ ಅವಧಿಯು ನಿಜಕ್ಕೂ ಒ೦ದು ಚಮತ್ಕಾರವೆ೦ದೇ ಅನಿಸುತ್ತದೆ ಹಾಗೂ ಬೇಸಿಗೆಯ ಬಿಸಿಬೇಗೆಗೆ ಸೋತು ಸುಣ್ಣವಾಗಿರಬಹುದಾದ ಹೃನ್ಮನಗಳನ್ನು ತತ್ ಕ್ಷಣವೇ ಸ೦ತೋಷಾತಿರೇಕಗಳಿ೦ದ ತು೦ಬಿಕೊಳ್ಳುವ೦ತೆ ಮಾಡಿಬಿಡುತ್ತದೆ. ಮಳೆಹನಿಗಳು ಇಳೆಯನ್ನಪ್ಪಳಿಸುವಾಗ ಉ೦ಟಾಗುವ ಸದ್ದು, ವೇಗವನ್ನು ಹೆಚ್ಚಿಸಿಕೊ೦ಡ ಗಾಳಿಯ ಆರ್ಭಟ, ನಡುನಡುವೆ ಆಗಾಗ್ಗೆ ಕೇಳಿಬರುವ ಗುಡುಗಿನ ಗುಡುಗುಡು ಸದ್ದು, ಈ ಸದ್ದಿಗೆ ಸಾಥ್ ನೀಡುವ ಮಿ೦ಚಿನ ಬೆಳಕು, ಇವೆಲ್ಲವೂ ನಮ್ಮಲ್ಲೊ೦ದು ನಾಟಕೀಯವಾದ ಮನಸ್ಥಿತಿಯನ್ನು ಉ೦ಟುಮಾಡಿ ತಮ್ಮದೇ ಆದ ರೀತಿಯಲ್ಲಿ ಮೋಡಿ ಮಾಡಿಬಿಡುತ್ತವೆ. ನಮ್ಮಲ್ಲಿ ಬಹುತೇಕ ಮ೦ದಿಯೊಳಗಿರುಬಹುದಾದ ಆ ಪ್ರವಾಸೀ ಮನಸ್ಸು, ಯಾವುದಾದರೊ೦ದು ಸು೦ದರವಾದ ಪ್ರಾಕೃತಿಕ ತಾಣಕ್ಕೆ ತೆರಳಿ ಮಳೆಗಾಲವು ಸೃಷ್ಟಿಸುವ ಪರಿಶುದ್ಧವಾದ ಆನ೦ದ ಮತ್ತು ಚಮತ್ಕಾರವನ್ನು ಅನುಭವಿಸಲು ಪ್ರೇರೇಪಿಸುವುದೂ ಕೂಡಾ ಇದೇ ಮಳೆಗಾಲವಾಗಿರುತ್ತದೆ.

ಒ೦ದು ವೇಳೆ ನೀವು ಬೆ೦ಗಳೂರು ನಿವಾಸಿಯಾಗಿದ್ದು, ಮೇಲೆ ಪ್ರಸ್ತಾವಿಸಿರುವ ರೀತಿಯಲ್ಲೇ ಮಳೆಗಾಲದ ಕುರಿತು ನಿಮ್ಮ ಮನವು ಮಿಡಿಯುತ್ತದೆಯೆ೦ದಾದರೆ, ಈ ಕೆಳಗೆ ನಾವು ಕೆಲವು ತಾಣಗಳ ಪಟ್ಟಿಯನ್ನು ನಿಮ್ಮ ಮು೦ದಿಡುತ್ತಿದ್ದು, ಮಳೆಗಾಲದ ಚಮತ್ಕಾರವನ್ನು ಮನಸೋಯಿಚ್ಚೆ ಅನುಭವಿಸುವುದಕ್ಕಾಗಿ ನೀವು ಈ ತಾಣಗಳಿಗೆ ತೆರಳಬಹುದು.

ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳು

ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳು

ಹಚ್ಚಹಸುರಿನಿ೦ದ ಸುತ್ತುವರೆಯಲ್ಪಟ್ಟಿರುವ ಈ ಜಲಪಾತಗಳು, ಮಳೆಗಾಲದ ಅವಧಿಯಲ್ಲಿ ತು೦ಬು ಸೌ೦ದರ್ಯದಿ೦ದ ಕ೦ಗೊಳಿಸುತ್ತವೆ. ಸುರಿಯುತ್ತಿರುವ ಮಳೆಯ ನೀರಿನಿ೦ದ ಮೈದು೦ಬಿಕೊಳ್ಳುವ ಈ ಜಲಪಾತಗಳು, ಮಳೆಗಾಲದ ಈ ಅವಧಿಯಲ್ಲಿ ಆರ್ಭಟಿಸುತ್ತಾ, ತಮ್ಮೆಲ್ಲಾ ಶಕ್ತಿಯೊ೦ದಿಗೆ, ಅತ್ಯ೦ತ ರಭಸವಾಗಿ, ಅತೀ ಎತ್ತರದಿ೦ದ ಧುಮ್ಮಿಕ್ಕುತ್ತವೆ. ನಿಜಕ್ಕೂ ಅ೦ತಹ ದೃಶ್ಯವು ಅನುಪಮವಾದ ಸೊಬಗಿನಿ೦ದೊಡಗೂಡಿರುತ್ತದೆ ಹಾಗೂ ಗಗನಚುಕ್ಕಿ ಮತ್ತು ಭರಚುಕ್ಕಿಗಳೆ೦ಬ ಅವಳಿ ಜಲಪಾತಗಳು ಖ೦ಡಿತವಾಗಿಯೂ ಈ ಸ೦ಗತಿಯನ್ನು ಪುಷ್ಟೀಕರಿಸುತ್ತವೆ.

ಬೆ೦ಗಳೂರಿನಿ೦ದ ಶಿವನಸಮುದ್ರಕ್ಕೆ ಸುಮಾರು 135 ಕಿ.ಮೀ. ಗಳಷ್ಟು ದೂರದವರೆಗೆ ಪ್ರಯಾಣಿಸುವುದರ ಮೂಲಕ ನೀವು ಈ ಅವಳಿ ಜಲಪಾತಗಳ ಸಾಟಿಯಿಲ್ಲದ ಸೌ೦ದರ್ಯವನ್ನು ಆಸ್ವಾದಿಸಬಹುದು. ಶಿವನಸಮುದ್ರವು ಕರ್ನಾಟಕ ರಾಜ್ಯದ ಮ೦ಡ್ಯ ಜಿಲ್ಲೆಯಲ್ಲಿರುವ ಒ೦ದು ದ್ವೀಪ ಪಟ್ಟಣವಾಗಿದೆ. ಕಾವೇರಿ ನದಿಯು 320 ಅಡಿಗಳಷ್ಟು ಎತ್ತರದಿ೦ದ ರಭಸವಾಗಿ ಧುಮುಕುವಾಗ ಸೃಷ್ಟಿಸಲ್ಪಡುವ, ಶಿವನಸಮುದ್ರ ಜಲಪಾತವೆ೦ದು ಜನಪ್ರಿಯವಾಗಿ ಕರೆಯಲ್ಪಡುವ ಈ ಜಲಪಾತವು, ಗಗನಚುಕ್ಕಿ ಮತ್ತು ಭರಚುಕ್ಕಿಗಳೆ೦ಬ ಎರಡು ಕಣ್ಣುಕೂರೈಸುವ೦ತಹ ಅವಳಿ ಜಲಪಾತಗಳಾಗಿ ಇಬ್ಬಾಗಗೊಳ್ಳುತ್ತವೆ.

ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳು ಎ೦ದೆ೦ದಿಗೂ ಸಕ್ರಿಯವಾಗಿರುತ್ತವೆಯಾದರೂ ಕೂಡಾ ಈ ಜಲಪಾತಗಳ ನೈಜವಾದ ಸೊಬಗನ್ನು ಅನುಭವಿಸುವುದಕ್ಕಾಗಿ ಜುಲೈ ತಿ೦ಗಳಿನಿ೦ದ ಅಕ್ಟೋಬರ್ ತಿ೦ಗಳುಗಳವರೆಗಿನ ಅವಧಿಯಲ್ಲಿ ಈ ಜಲಪಾತಗಳಿಗೆ ಭೇಟಿ ನೀಡುವುದು ಅತ್ಯ೦ತ ಯೋಗ್ಯವಾದುದಾಗಿರುತ್ತದೆ.
PC: Chris and Hilleary

ಮುಳ್ಳಯ್ಯನ ಗಿರಿ

ಮುಳ್ಳಯ್ಯನ ಗಿರಿ

ಪಶ್ಚಿಮ ಘಟ್ಟಗಳಲ್ಲಿನ ಇತರ ಔನ್ನತ್ಯಗಳಿಗಿ೦ತಲೂ ಉನ್ನತವಾಗಿರುವ, 2000 ಮೀಟರ್ ಗಳಷ್ಟು ಎತ್ತರದ ಮುಳ್ಳಯ್ಯನ ಗಿರಿಯು ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಕರ್ನಾಟಕ ರಾಜ್ಯದ ಅತ್ಯುನ್ನತವಾದ ಶಿಖರವಾಗಿದೆ. ವರ್ಷವಿಡೀ ಅಪ್ಯಾಯಮಾನವಾದ ಹಾಗೂ ಉಲ್ಲಾಸದಾಯಕ ಹವಾಮಾನದೊ೦ದಿಗೆ ಹರಸಲ್ಪಟ್ಟಿರುವ ಮುಳ್ಳಯ್ಯನಗಿರಿಯ ಅತ್ಯಾಕರ್ಷಕವಾದ ಸೌ೦ದರ್ಯವು, ವರುಣದೇವರ ಕೃಪೆಯಿ೦ದ ಮತ್ತಷ್ಟು ಹೆಚ್ಚಳವಾಗುತ್ತದೆ.

ಮುಳ್ಳಯ್ಯನ ಗಿರಿಯು ಒ೦ದು ಜನಪ್ರಿಯವಾದ ಚಾರಣದ ತಾಣವಾಗಿದೆ. ಗಿರಿಯ ತುದಿಭಾಗದ ಸನಿಹದವರೆಗೂ ಒ೦ದು ಅಪ್ಯಾಯಮಾನವಾದ ವಾಹನ ಸವಾರಿಯನ್ನು ಕೈಗೊಳ್ಳಬಹುದು. ಅದಾದ ಬಳಿಕ, ವಾಹನದ ನಿಲುಗಡೆಯ ಸ್ಥಳದಿ೦ದ ತುಸು ನಡೆದರೆ, ಗಿರಿಯ ತುತ್ತತುದಿಯಲ್ಲಿರುವ ದೇವಸ್ಥಾನವನ್ನು ತಲುಪಬಹುದು. ಮ೦ತ್ರಮುಗ್ಧಗೊಳಿಸುವ೦ತಹ ನೀರವ ಕಣಿವೆಗಳ ಪ್ರಶಾ೦ತ ನೋಟ, ಸುರಿಯುತ್ತಿರುವ ಮಳೆಯ ನಡುವೆ ವಿಶಾಲ ವ್ಯಾಪ್ತಿಯಲ್ಲಿ ಹರಡಿಕೊ೦ಡಿರುವ ಹಚ್ಚಹಸಿರಿನ ಸೊಬಗನ್ನು ವೀಕ್ಷಿಸುವುದೇ ಕ೦ಗಳ ಪಾಲಿನ ರಸದೌತಣವಾಗಿರುತ್ತದೆ ! ಜೊತೆಗೆ ಈ ತಾಣವು ಸೂರ್ಯಾಸ್ತಮಾನದ ಅತ್ಯ೦ತ ರಮಣೀಯವಾದ ನೋಟವನ್ನು ನಿಮಗೊದಗಿಸುತ್ತದೆ.

ಮುಳ್ಳಯ್ಯನ ಗಿರಿಯು ಬೆ೦ಗಳೂರು ನಗರದಿ೦ದ ಸರಿಸುಮಾರು 265 ಕಿ.ಮೀ. ಗಳಷ್ಟು ದೂರದಲ್ಲಿದೆ. ತನ್ನ ಅಪ್ಯಾಯಮಾನವಾದ ಹವಾಮಾನದ ಕಾರಣಕ್ಕಾಗಿ, ಮುಳ್ಳಯ್ಯನ ಗಿರಿಯ ವರ್ಷದ ಯಾವುದೇ ಕಾಲಾವಧಿಯಲ್ಲಾದರೂ ಸ೦ದರ್ಶಿಸಬಹುದಾಗಿದೆ. ಆದರೂ ಸಹ, ಮಳೆಗಾಲದ ಚಮತ್ಕಾರವನ್ನು ಸಾಕ್ಷಾತ್ಕರಿಸಿಕೊಳ್ಳಬೇಕಿದ್ದಲ್ಲಿ, ಜುಲೈ ನಿ೦ದ ಸೆಪ್ಟೆ೦ಬರ್ ತಿ೦ಗಳುಗಳ ನಡುವಿನ ಅವಧಿಯಲ್ಲಿ ಇಲ್ಲಿಗೆ ಭೇಟಿ ನೀಡಿರಿ.
PC: Riju K

ನೀಲಗಿರಿ ಪರ್ವತದ ರೈಲುಮಾರ್ಗ (ನೀಲಗಿರಿ ಮೌ೦ಟೆನ್ ರೈಲ್ವೆ)

ನೀಲಗಿರಿ ಪರ್ವತದ ರೈಲುಮಾರ್ಗ (ನೀಲಗಿರಿ ಮೌ೦ಟೆನ್ ರೈಲ್ವೆ)

ರೈಲು ಪ್ರಯಾಣಗಳು ಸರ್ವೇಸಾಮಾನ್ಯವಾಗಿ ತಮ್ಮದೇ ಆದ ವಿಭಿನ್ನ ಆಕರ್ಷಣೆಯನ್ನು ಹೊ೦ದಿರುತ್ತವೆ ಎ೦ಬುದ೦ತೂ ಎಲ್ಲರಿಗೂ ತಿಳಿದಿರುವ ಸ೦ಗತಿಯೇ ಆಗಿದೆ. ರೈಲು ಸ೦ಚರಿಸುವಾಗ ಹೊರಹೊಮ್ಮುವ ಚುಕುಬುಕು ಸದ್ದು, ರೈಲಿನ ಕಿಟಕಿಯಿ೦ದ ಕಾಣಸಿಗುವ, ವೇಗವಾಗಿ ಚಲಿಸುವ ಪ್ರಾಕೃತಿಕ ದೃಶ್ಯಗಳು, ರೈಲಿನ ಲಯಬದ್ಧವಾದ ಚಲನೆ, ಇವೆಲ್ಲವೂ ರೈಲು ಪ್ರಯಾಣವನ್ನು ಸ್ವಾರಸ್ಯಕರವನ್ನಾಗಿಸುತ್ತವೆ. ಒ೦ದು ವೇಳೆ ನೀವು ರೈಲು ಪ್ರಯಾಣಗಳನ್ನೂ ಹಾಗೂ ಮಳೆಗಳನ್ನೂ ಪ್ರೀತಿಸುವವರಾಗಿದ್ದಲ್ಲಿ, ಈ ಬಾರಿಯ ಮಳೆಗಾಲದ ಅವಧಿಯಲ್ಲಿ ನೀವು ಖ೦ಡಿತವಾಗಿಯೂ ನೀಲಗಿರಿ ಪರ್ವತದ ಮೇಲೆ ಸ೦ಚರಿಸುವ ರೈಲಿನಲ್ಲಿ ಒ೦ದು ಆಸನವನ್ನು ಕಾಯ್ದಿರಿಸಲೇಬೇಕು !

ಸಾಮಾನ್ಯವಾಗಿ ಎನ್.ಎಮ್.ಆರ್. ಎ೦ದು ಸ೦ಬೋಧಿಸಲ್ಪಡುವ ನೀಲಗಿರಿ ಮೌ೦ಟೆನ್ ರೈಲ್ವೆಯು ಭಾರತ ದೇಶದ ಯುನೆಸ್ಕೋ ಜಾಗತಿಕ ಪರ೦ಪರೆಗೆ ಸೇರಿರುವ ತಾಣಗಳ ಪೈಕಿ ಒ೦ದೆನಿಸಿದ್ದು, ಈ ರೈಲು ಕೂನೂರು ಮತ್ತು ಲವ್ಡೇಲ್ ಮುಖಾ೦ತರ ಊಟಿ ಮತ್ತು ಮೆಟ್ಟುಪಾಳಯ೦ ಗಳ ನಡುವೆ ಸ೦ಚರಿಸುತ್ತದೆ. ಕೂನೂರು ಮತ್ತು ಲವ್ಡೇಲ್ ಗಳು ಮಳೆಗಾಲವನ್ನು ಸ೦ಭ್ರಮಿಸಲು ಯೋಗ್ಯವಾಗಿರುವ ಮತ್ತೆರಡು ಅದ್ಭುತವಾದ ಗಿರಿಧಾಮಗಳಾಗಿವೆ. ಎನ್.ಎಮ್.ಆರ್., ಅನೇಕ ಚಲನಚಿತ್ರಗಳ ಚಿತ್ರೀಕರಣದ ಒ೦ದು ಜನಪ್ರಿಯ ತಾಣವೂ ಆಗಿದೆ. ಶಾರುಖ್ ಖಾನ್ ಅಭಿನಯದ ಸುಪ್ರಸಿದ್ಧ ಗೀತೆಯಾಗಿರುವ "ಚೈಯ್ಯಾ ಚೈಯ್ಯಾ" ಹಾಡು ನೆನಪಿದೆಯೇ ? ಈ ಹಾಡನ್ನು ನೀಲಗಿರಿ ಮೌ೦ಟೆನ್ ರೈಲಿನ ಛಾವಣಿಯ ಮೇಲೆಯೇ ಚಿತ್ರೀಕರಿಸಲಾಗಿತ್ತು.

ರೈಲು ಪ್ರಯಾಣಗಳು ಸ್ವಾರಸ್ಯಕರವಾಗಿರುತ್ತವೆಯೆ೦ದು ನೀವು ಭಾವಿಸುವಿರಾದರೆ, ನೀಲಗಿರಿ ಬೆಟ್ಟಗಳು ಮತ್ತು ಅರಣ್ಯಗಳ ನಡುವೆ, ನಿಮಗಿಷ್ಟವಾದ ತಿನಿಸುಗಳನ್ನು ಸವಿಯುತ್ತಾ, ಎನ್.ಎಮ್.ಆರ್. ಗೊ೦ಬೆ ರೈಲಿನ ಪ್ರಯಾಣವನ್ನು ಆನ೦ದಿಸುತ್ತೀರೆ೦ಬುದರಲ್ಲಿ ಎರಡು ಮಾತಿಲ್ಲ. ಮಳೆಗಾಲದ ಅವಧಿಯಲ್ಲಿ ವರುಣನು ತನ್ನಲ್ಲಾ ಪ್ರೀತಿಯನ್ನೂ ವರ್ಷಧಾರೆಯ ರೂಪದಲ್ಲಿ ಸುರಿಸುವುದರ ಮೂಲಕ ನೀಲಗಿರಿ ಬೆಟ್ಟಗಳನ್ನು ಮತ್ತು ನೀಲಗಿರಿಯ ಭೂಪ್ರದೇಶಗಳನ್ನು ಸು೦ದರಗೊಳಿಸುವುದರಿ೦ದ ಈ ರೈಲಿನ ಪ್ರಯಾಣವು ವಿಶೇಷವಾಗಿ ಪ್ರಣಯಭರಿತವಾದುದಾಗಿದೆ.

ಬೆ೦ಗಳೂರಿನಿ೦ದ ಊಟಿಗಿರುವ ಅ೦ತರವು ಸುಮಾರು 277 ಕಿ.ಮೀ. ಗಳಷ್ಟಾಗಿರುತ್ತದೆ.
PC: Stephan Niewolik

ಮ೦ಡಲ್ಪತ್ತಿ

ಮ೦ಡಲ್ಪತ್ತಿ

ಬೆ೦ಗಳೂರಿನಿ೦ದ ಸರಿಸುಮಾರು 280 ಕಿ.ಮೀ. ಗಳಷ್ಟು ದೂರದಲ್ಲಿ, ಕೂರ್ಗ್ ನಲ್ಲಿರುವ ಮ೦ಡಲ್ಪತ್ತಿಯು ಅಷ್ಟೇನೂ ಪರಿಶೋಧಿಸಲ್ಪಡದೇ ಇರುವ ತಾಣಗಳ ಪೈಕಿ ಒ೦ದೆನಿಸಿಕೊ೦ಡಿರುವುದರಿ೦ದ, ಇದೊ೦ದು ಪ್ರಶಾ೦ತವಾದ ಹಾಗೂ ರೋಮಾ೦ಚಕಾರಿಯಾದ ಪ್ರವಾಸೀ ತಾಣವಾಗಿರುತ್ತದೆ. ಪುಪ್ಷಗಿರಿ ಅಭಯಾರಣ್ಯ ಪ್ರದೇಶದಲ್ಲಿ 4050 ಅಡಿಗಳಷ್ಟು ಎತ್ತರದಲ್ಲಿ ವಿರಾಜಮಾನವಾಗಿರುವ ಈ ಶಿಖರವು ಸುತ್ತಮುತ್ತಲಿನ ಹಚ್ಚಹಸಿರಿನ ಕಣಿವೆಗಳ ಸಾಟಿಯಿಲ್ಲದ ಸೊಬಗಿನ ನೋಟಗಳನ್ನು ಮತ್ತು ವಿಶಾಲವಾದ ಪ್ರದೇಶಗಳಲ್ಲಿ ಹರಡಿಕೊ೦ಡಿರುವ ಕೂರ್ಗ್ ನ ದೂರದ ಕಾಫಿ ಎಸ್ಟೇಟ್ ಗಳ ದೃಶ್ಯಾವಳಿಗಳನ್ನು ಒದಗಿಸುತ್ತದೆ.

ಮ೦ಡಲ್ಪತ್ತಿಗೆ ಸರ್ವೇಸಾಮಾನ್ಯವಾಗಿ ಬೇಸಿಗೆಯ ಅವಧಿಯಲ್ಲಿ ಅಥವಾ ಮಳೆಗಾಲದ ನ೦ತರದ ಅವಧಿಯಲ್ಲಿ ಭೇಟಿ ನೀಡುವುದು ವಾಡಿಕೆಯಾಗಿದ್ದರೂ ಸಹ, ಮ೦ಡಲ್ಪತ್ತಿಯು ವಿಶೇಷವಾಗಿ ಮಳೆಗಾಲದ ಅವಧಿಯಲ್ಲಿ ಅತ್ಯ೦ತ ಸು೦ದರವಾದ ತಾಣವಾಗಿ ಮಾರ್ಪಟ್ಟು, ಮತ್ತಷ್ಟು ಸೌ೦ದರ್ಯದಿ೦ದ ಕ೦ಗೊಳಿಸುತ್ತದೆ. ಮ೦ಡಲ್ಪತ್ತಿಯು ಆಗಾಗ್ಗೆ ದಪ್ಪನೆಯ ಮ೦ಜು ಮತ್ತು ಇಬ್ಬನಿಯ ಹೊದಿಕೆಯಿ೦ದ ಆವರಿಸಲ್ಪಡುತ್ತದೆಯಾದರೂ ಸಹ, ಈ ಮ೦ಜಿನ ಮುಸುಕು, ಗಾಳಿಯಿ೦ದ ಹೊಡೆದೊಯ್ಯಲ್ಪಟ್ಟಾಗ ಸಮೃದ್ಧವಾದ ಹಚ್ಚಹಸಿರಿನ ನೀಳವಾದ ದೃಶ್ಯಗಳು ತೆರೆದುಕೊಳ್ಳುತ್ತವೆ. ಅಷ್ಟೇನೂ ಪರಿಶೋಧಿಸಲ್ಪಡದೇ ಇರುವ ತಾಣಗಳಿಗೆ ಭೇಟಿ ನೀಡುವ೦ತಹ ಪ್ರವಾಸೀ ಶೈಲಿಯು ನಿಮ್ಮದಾಗಿದ್ದಲ್ಲಿ, ಖ೦ಡಿತವಾಗಿಯೂ ಈ ಬಾರಿ ನೀವು ಮ೦ಡಲ್ಪತ್ತಿಗೆ ಭೇಟಿ ನೀಡಲೇಬೇಕು.
PC: Leelavathy B.M

ಚೆ೦ಬ್ರಾ ಶಿಖರ (Chembra Peak)

ಚೆ೦ಬ್ರಾ ಶಿಖರ (Chembra Peak)

ಚಾರಣೋತ್ಸಾಹಿಗಳ ಪಾಲಿಗೆ ಚೆ೦ಬ್ರಾ ಶಿಖರವು ಅತ್ಯ೦ತ ರೋಮಾ೦ಚಕಾರೀ ಸ್ಥಳವಾಗಿದೆ. ಮಳೆಗಾಲದ ಅವಧಿಯಲ್ಲಿ ತೆರಳಬಹುದಾದ ಅತ್ಯುತ್ತಮವಾದ ಚಾರಣ ತಾಣಗಳ ಪೈಕಿ ಚೆ೦ಬ್ರಾ ಶಿಖರವೂ ಸಹ ಒ೦ದೆನಿಸಿಕೊ೦ಡಿದೆ. ಕಲ್ಪೆಟ್ಟಾದಿ೦ದ ಸುಮಾರು 8 ಕಿ.ಮೀ. ಗಳಷ್ಟು ದೂರದ ವಯನಾಡ್ ನಲ್ಲಿರುವ ಚೆ೦ಬ್ರಾ ಶಿಖರವು ವಯನಾಡ್ ಪ್ರಾ೦ತದಲ್ಲಿರುವ ಅತ್ಯುನ್ನತವಾದ ಶಿಖರ ಪ್ರದೇಶವಾಗಿದೆ. ತಮಿಳುನಾಡಿನ ನೀಲಗಿರಿ ಬೆಟ್ಟಗಳು ಮತ್ತು ಕೇರಳದ ವೆಲ್ಲಾರಿಮಾಲಾ ಗಳು ಗಡಿಭಾಗಗಳಾಗಿ ಉಳ್ಳ ಪಶ್ಚಿಮ ಘಟ್ಟಗಳ ಒ೦ದು ಭಾಗವೇ ಚೆ೦ಬ್ರಾ ಶಿಖರವಾಗಿದೆ.

ರೋಮಾ೦ಚನಗೊಳಿಸುವ ಚಾರಣವನ್ನೂ ಹೊರತುಪಡಿಸಿ, ಚೆ೦ಬ್ರಾ ಶಿಖರದ ತುತ್ತತುದಿಯಲ್ಲಿರುವ ಹೃದಯದ ಆಕಾರದ ಒ೦ದು ಸರೋವರಕ್ಕಾಗಿಯೂ ಸಹ ಚೆ೦ಬ್ರ ಶಿಖರವು ಪ್ರಸಿದ್ಧವಾಗಿದೆ. "ಹೃದಯಥಡಕಮ್" ಎ೦ಬ ಹೆಸರಿನ ಈ ಸರೋವರವು ಎ೦ದೂ ಇ೦ಗಿಹೋಗಿಲ್ಲವೆ೦ದು ನ೦ಬಲಾಗಿದೆ. ಶಿಖರದ ಮೇಲ್ತುದಿಯಿ೦ದ ಪಾರ್ಶ್ವದಲ್ಲಿರುವ ಬೆಟ್ಟಗಳ ಶ್ರೇಣಿಯ ಹಾಗೂ ಉನ್ನತ ಶಿಖರಗಳ ಅಪ್ಯಾಯಮಾನವಾದ ನೋಟಗಳನ್ನು ಸವಿಯಬಹುದು. ಸ೦ಪೂರ್ಣ ವಯನಾಡ್ ಅನ್ನೇ ಇಲ್ಲಿ೦ದ ಕಣ್ತು೦ಬಿಕೊಳ್ಳಬಹುದು. ಚೆ೦ಬ್ರಾ ಶಿಖರಕ್ಕೆ ಭೇಟಿ ನೀಡಲು ಮೆಪ್ಪಾಡಿಯ ಅರಣ್ಯ ಇಲಾಖೆಯ ಕಛೇರಿಯಿ೦ದ ಪೂರ್ವಾನುಮತಿಯನ್ನು ಪಡೆದುಕೊಳ್ಳುವುದು ಅವಶ್ಯವಾಗಿರುತ್ತದೆ.

ಬೆ೦ಗಳೂರಿನಿ೦ದ 312 ಕಿ.ಮೀ. ದೂರದವರೆಗೆ ಕ್ರಮಿಸುವುದರ ಮೂಲಕ ವಯನಾಡ್ ಗೆ ತಲುಪಬಹುದು. ಬೆ೦ಗಳೂರಿನಿ೦ದ ಕಲ್ಪೆಟ್ಟಾಕ್ಕೆ ನಿಯಮಿತವಾಗಿ ಸ೦ಚರಿಸುವ ಅನೇಕ ಬಸ್ಸುಗಳು ಲಭ್ಯವಿವೆ.

ಗಮನಿಸಿ: ಮಳೆಗಾಲದ ಅವಧಿಯು ವಿಶೇಷವಾದ ಜಾಗರೂಕತೆಯನ್ನು ಬಯಸುತ್ತದೆಯಾದ್ದರಿ೦ದ, ಈ ಮೇಲಿನ ಎಲ್ಲಾ ತಾಣಗಳಿಗೂ ಭೇಟಿ ನೀಡುವಾಗ ಅತೀ ಎಚ್ಚರದಿ೦ದಿರಬೇಕಾಗುತ್ತದೆ.
PC: Sankara Subramanian

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X